ಮತ್ತೆ ಶುರು ಕ್ರಾಂತಿ ಬೀದರ್ನಿಂದ – ಪ್ರಾರಂಭ.
ಕುಷ್ಟಗಿ ಮಾ.25

ಮಾದಿಗ ಸಮುದಾಯದ ಎಲ್ಲಾ ವಕೀಲರು, ಶಿಕ್ಷಕರು, ನೌಕರರು, ವಿದ್ಯಾರ್ಥಿಗಳು, ಮುಖಂಡರು, ಹೋರಾಟಗಾರರು ಮತ್ತು ಚಿಂತಕರ ಮಹತ್ವದ ನಿರ್ಣಯದ ಜಿಲ್ಲಾವಾರು ಪತ್ರಿಕಾ ಗೋಷ್ಟಿ ಮತ್ತು ಸಭೆ ಸದರಿ ಈ ಮೇಲ್ಕಂಡ ಪತ್ರಿಕಾ ಗೋಷ್ಠಿಗೆ ಹಾಗೂ ಸಭೆಗೆ ಕುಷ್ಟಗಿ ತಾಲೂಕಿನ ಮಾದಿಗ ಸಮುದಾಯದ ಹಿರಿಯ ಹೋರಾಟಗಾರರು ಜಿಲ್ಲೆಯ ದಲಿತ ಮುಖಂಡರು ಒಳಮೀಸಲಾತಿ ಪರ ಮನಸ್ಸುಗಳೂ, ವಕೀಲರು, ನೌಕರ ಬಂಧುಗಳು, ಉದ್ಯಮಿಗಳು, ಗುತ್ತಿಗೆದಾರರು, ಸಾಹಿತಿಗಳು, ಕಲಾವಿದರು, ಎಲ್ಲಾ ಪಕ್ಷಗಳ ಮಾದಿಗ ಮುಖಂಡರು, ಬುದ್ದಿಜೀವಿಗಳು ವಿದ್ಯಾರ್ಥಿಗಳು, ಮಹಿಳೆಯರು, ಎಲ್ಲಾ ಸಂಘಟನೆಗಳಲ್ಲಿ ಇರುವ ಕಾರ್ಯಕರ್ತರು ಪ್ರತಿಯೊಬ್ಬರೂ ಸಾಮೂಹಿಕವಾಗಿ ಒಗ್ಗಟ್ಟಿನಿಂದ ಪಾಲ್ಗೊಳ್ಳುವ ಮೂಲಕ ಸಮುದಾಯದ ಪ್ರಜ್ಞಾವಂತ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಸರೆ ಯಾಗುವ ಒಳಮೀಸಲಾತಿ ಹೋರಾಟಕ್ಕೆ ಬೆಂಬಲ ಸೂಚಿಸಿ ಹೋರಾಟಗಾರರಿಗೆ ನೈತಿಕವಾಗಿ ಶಕ್ತಿ ತುಂಬುವ ಮೂಲಕ ಕ್ರಾಂತಿಕಾರಿ ಪಾದಯಾತ್ರೆಗೆ ಸ್ಪೂರ್ತಿ ತುಂಬಬೇಕು ಎಂದು ಪ್ರತಿಯೊಬ್ಬರೂ ಅರ್ಥೈಸಿ ಕೊಳ್ಳಿರಿ ಸುಧೀರ್ಘವಾಗಿ ಮೂವತ್ತೈದು ವರ್ಷಗಳ ಅಸಂಖ್ಯಾತ ಅವಿರತ ಹೋರಾಟದ ಇತಿಹಾಸ ಇದೆ. ಹೋರಾಟದ ಬೆನ್ನಿಗೆ ಸುಪ್ರೀಂ ಕೋರ್ಟ್ ಆದೇಶ ಇದೆ. ಈಗಿರುವಾಗ ಹೋರಾಟದ ಕೆಚ್ಚೆದೆಯಿಂದ ಸದಾಶಿವ ಆಯೋಗದ ವರದಿ ಯಥಾವತ್ತಾಗಿ ಜಾರಿಯಾಗುವ ನಿಟ್ಟಿನಲ್ಲಿ ಹೋರಾಟದ ಮೂಲಕ ಹಕ್ಕು ಪಡೆಯೋಣ ಜೈ ಭೀಮ್, ಜೈ ಕೃಷ್ಣಪ್ಪ, ಜೈಜೈಜೈ ಮಾದಿಗ.
ವರದಿ:ಶಿವಕುಮಾರ.ದೊಡ್ಡಮನಿ.ವಕೀಲರು
ಕುಷ್ಟಗಿ, 9380425259/9880899215