ಹೆಸ್ಕಾಂ ಆಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರವೇ ಕಾರ್ಯಕರ್ತರು ಹಾಗೂ ಗ್ರಾಮಸ್ಥರಿಂದ ಮನವಿ.
ತಾಂಬಾ ಮಾರ್ಚ್.28

ಇಂಡಿ ತಾಲೂಕಿನ ತಾಂಬಾ ಗ್ರಾಮದ ಹೆಸ್ಕಾಂ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪಟ್ಟಣದ ಆಡಳಿತ ಸೌದಧ ಎದುರು ಕರವೇ ಕಾರ್ಯಕರ್ತರು,ತಾಂಬಾ ಮತ್ತು ಸುತ್ತ ಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅಲ್ಲಾಬಕ್ಷ ಗಡೆದ ( ಗೊರೆ ) ಮಾತನಾಡಿ ೧೦ ವರ್ಷಗಳ ಹಿಂದೆ ನಾಲ್ಕು ಜನ ರೈತರಿಗೆ ಟ್ರಾನ್ಸಪಾರ್ಮರ್ ನೀಡಿದ್ದು ಈಗ ಆ ಟಿಸಿ ಗೆ ಮತ್ತೆ ಹೆಚ್ಚಿನ ಕನೆಕ್ಸನ ನೀಡಿದ್ದರಿಂದ ಲೋಡ್ ಹೆಚ್ಚಾಗುತ್ತಿದೆ ಒಂದು ಮೋಟಾರು ನಡೆಯದಂತಹ ಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ತಾಂಬಾ ಹೆಸ್ಕಾಂ ಅಧಿಕಾರಿ ವಿರುದ್ಧ ಮೇಲಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಅಬ್ದುಲ್ ದಡೇದ, ಮುದಕಪ್ಪ ಕಲ್ಲೂರ, ಹುಚ್ಚಪ್ಪ ಕಾಂಬಳೆ, ಮಾಸೀಮ ಮಂಗಳಖೇಡ, ಸಿದ್ದು ಶಿರಶ್ಯಾಡ, ಮಹಮ್ಮದಸಾಬ ವಾಲಿಕಾರ, ಪರಸು ಬಿಸನಾಳ, ರಿಯಾಜ ಮಂಗಳವೇಡ, ಹಾಜಿ ಗೌಂಡಿ, ಸಿದ್ದಪ್ಪ ಹಿರೇಕುರಬರ, ಇಸಾಕ ಮೋಮೀನ, ಪುಟ್ಟು ಅಳೋಳೀ, ಬೀಜರಿ ಮತ್ತಣ್ಣ, ನಾಗು ಪೂಜಾರಿ ಮತ್ತಿತರಿದ್ದರು.ಶಿರಸ್ತೆದಾರ ಎಸ್.ಆರ್.ಮುಜಗೊಂಡ ಇವರಿಗೆ ಮನವಿ ಸಲ್ಲಿಸಿದರು.ಇದಕ್ಕೂ ಪೂರ್ವ ಹೆಸ್ಕಾಂ ಕಚೇರಿ ತೆರಳಿ ಅಲ್ಲಿಯೂ ಮನವಿ ಸಲ್ಲಿಸಿದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ. ಇಂಡಿ