ಜಗದ ಆದರ್ಶಮಯ ಜೀವನದ ರೂವಾರಿ – “ಅಣ್ಣಾರಾಯ”…..

ಶ್ರೀಯುತ ಅಣ್ಣಾರಾಯ ತೀರ್ಥ ಸ್ವರೂಪ
ಸ್ವಚ್ಛ ಮನ ಬೇಧ ಅರಿಯದವ
ಸ್ನೇಹಜೀವಿ ನಿತ್ಯ ಕಾಯಕಯೋಗಿ
ಇಷ್ಠಲಿಂಗ ಪೂಜಿಪ ಶಿವಭಕ್ತ
ತಂದೆ ತಾಯಿ ಪ್ರೀತಿಯ ವರಪುತ್ರ
ಅಣ್ಣ ತಮ್ಮಂದಿರ ಭುಜ ಬಲ ಶಕ್ತಿಧಾತ
ನೊಂದವರ ನೆರವಿಗೆ ಧಾವಿಸುವ
ಕರುಣಾಮಯಿ
ಅಣ್ಣಾರಾಯ ಸರ್ವರಿಗೆ ಅಚ್ಚುಮೆಚ್ಚು ದಿಟ್ಟ
ನಡೆ ನೇರನುಡಿ ಕಲ್ಮಷ ರಹಿತ
ಹಿರಿತನದ ಸಿರಿತನದ ಹೃದಯವಂತ
ನೋವಿಗೆ ನಲಿವಿಗೆ ಸವಾಲ್ ಎಸೆದ ಸರದಾರ
ದೊಡ್ಡವರ ಒಡನಾಟದಲಿ ಮಗುವಿನ ತರಹ
ಮಕ್ಕಳ ಜೋತೆ ಮಗುವಿನ ನಗು ಬೀರಿದಾತ
ದುಃಖದಿ ಕುಗ್ಗದ ದೇಹ ಸುಖದಿ ಅಹಂ
ತೋರದ ಸಿಂಹನಡೆ ಗಾಂಭೀರ್ಯದವ
ಸಾಹುಕಾರ ಮನೆತನದ ಗಜಕೇಸರಿ
ಯೋಗದವನು
ನೆನಪೂ ಸದಾ ಹಸಿರು ಅಣ್ಣ ಬಣ್ಣ
ಮಾಸದವನ
ಆಸೆ ಸ್ವಾರ್ಥ ದೂರ ತಳ್ಳಿದ ನೖಜತೆಯವ
ಊರ ತುಂಬೆಲ್ಲಾ ಪ್ರೀತಿಯ ಕಿರುತಿ
ಅಪರೂಪದ ವ್ಯಕ್ತಿತ್ವದ ಮಾನವೀಯ
ಗುಣದವ
ಅಣ್ಣ ಅಂದರೆ ನಮ್ಮ ಅಣ್ಣ ಅಣ್ಣಾರಾಯ
ಸಾಟಿಯಿಲ್ಲ ಯಾರು
ಜಗದ ಆದರ್ಶಮಯ ಜೀವನದ ರೂವಾರಿ
ಅಣ್ಣಾರಾಯ.
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಬಾಗಲಕೋಟ.