ಆರ್ ಬಿ ತಿಮ್ಮಾಪುರಿಂದ ಕೇಂದ್ರಕ್ಕೆ ತರಾಟೆ ಬಾದಾಮಿ.
ಬಾಗಲಕೋಟೆ ಏಪ್ರಿಲ್.12

ಬಾದಾಮಿ ನಗರದ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮತ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ಬಿ ತಿಮ್ಮಾಪುರವರು ಕಾಂಗ್ರೆಸ್ ಪಕ್ಷವು ದೇಶದ ಸ್ವತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಲ್ಲದೆ ಬಡವರಿಗಾಗಿ ಪಡಿತರ ಚೀಟಿ ಮತದಾನದ ಹಕ್ಕು ರೈತರ ಸಾಲ ಮನ್ನಾ ಮುಂತಾದ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ, ಈಗಿನ ಕೇಂದ್ರ ಸರ್ಕಾರ ದೇಶ ರಕ್ಷಣೆಯ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದ್ದು ರೈತರ ಪ್ರತಿಭಟನೆಯಲ್ಲಿ 700 ಜನರು ಸಾವನ್ನಪ್ಪಿದರು ಕೃಷಿ ವಿರೋಧಿ ಕಾಯ್ದೆ ತಂದು ಸರ್ವಾಧಿಕಾರಿ ದೋರಣೆ ಮಾಡುತ್ತ, ಬಡವರ ಖಾತೆಗೆ 15 ಲಕ್ಷ ರೂ ಹಣ ಹಾಕುತ್ತೇವೆಂದು ದೇಶ ದೇಶ ತಿರುಗಿ ಸಬೂಬ ಹೇಳುತ್ತಿದ್ದಾರೆ ಅಧಿಕಾರಕ್ಕೆ ಬಂದು ಹತ್ತು ವರ್ಷದಲ್ಲಿ ಬರೀ ಸುಳ್ಳನ್ನೆ ಹೇಳುತ್ತಾ ಬಂದರು ರಾಜ್ಯಕ್ಕೆ ಕೇಂದ್ರದ ಕೊಡುಗೆ ಶೂನ್ಯ ಎಂದು ಜರಿದರು, ಬೀಳಗಿ ಶಾಸಕ ಜೆ ಟಿ ಪಾಟೀಲ್ ಮಾತನಾಡಿ ಉದ್ಯಮಿಗಳ ಪರವಾಗಿ ನಿಂತ ಕೇಂದ್ರ ಸರ್ಕಾರ ದೇಶದ ಸಾಲವನ್ನು ದ್ವಿಗುಣ ಗೊಳಿಸಿದೆ ಎಸ್.ಬಿ.ಆಯ್ ಚುನಾವಣಾ ಬಾಂಡ್ ಹಗರಣ ಮೈಗೆ ಮೆತ್ತಿಕೊಂಡು ಆಯ್.ಟಿ ಇ.ಡಿ ದಾಳಿ ಮಾಡಿಸಿ ಶಾಸಕರನ್ನು ಬಿ.ಜೆ.ಪಿ ಗೆ ಸೆಳೆದು ಕೊಂಡು ದರ್ಬಾರ ಮಾಡುತ್ತಿದೆ ಎಂದರು ಅಭ್ಯರ್ಥಿ ಪರ ಮತಯಾಚನೆ ಮಾಡಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಶಾಸಕ ಭೀಮಸೆನ್ ಚಿಮ್ಮನಕಟ್ಟಿ ಮಾಜಿ ಸಚಿವ ಎಸ್ ಆರ್ ಪಾಟೀಲ್ ಮಾಜಿ ಶಾಸಕ ಆನಂದ ನ್ಯಾಮಗೌಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್ ಜಿ ನಂಜೆಯನಮಠ ಬಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ ಮುಂತಾದವರು ಪಾಲ್ಗೊಂಡಿದ್ದರು.
ರಾಜ್ಯ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ.ಹಲಗಿ. ಶಿರೂರು.