ಅತಿ ಹೆಚ್ಚು ಮತಗಳೊಂದಿಗೆ ವಿಜೇತರು – ಶೃತಿ.ಯು ಎನ್.
ಕೊಟ್ಟೂರು ನ.26

ವಿವಿಧ ಕಾರಣ ದಿಂದ ಕೊಟ್ಟೂರು ತಾಲೂಕಿನ ಗ್ರಾಮ ಪಂಚಾಯಿತಿ 14 ನಾಗರಕಟ್ಟೆ, 4-ರಾಂಪುರ ಹಾಗೂ 5-ಉಜ್ಜಿನಿ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿದ್ದ ಒಂದು ಸದಸ್ಯರ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. 4-ರಾಂಪುರ ಗ್ರಾಪಂ ರಾಂಪುರ-3 ನೇ. ಕ್ಷೇತ್ರಕ್ಕೆ ನಾಗರಾಜ ಪಿ,ಜಾಗಟಗೇರಿ ಗ್ರಾಮ ಇವರು ಹಾಗೂ 5-ಉಜ್ಜಿನಿ ಗ್ರಾ.ಪಂ ಉಜ್ಜಿನಿ-1 ನೇ. ಕ್ಷೇತ್ರಕ್ಕೆ ಶರೀನ ಬಾನು, ಉಜ್ಜಿನಿ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. 14-ನಾಗರಕಟ್ಟೆ ಗ್ರಾ.ಪಂ ನಾಗರಕಟ್ಟೆ-1 ನೇ. ಕ್ಷೇತ್ರದ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದು ದಿ- 26.11.2024 ರಂದು ತಾಲೂಕು ಕಛೇರಿಯಲ್ಲಿ ಮತ ಎಣಿಕೆ ಕಾರ್ಯ ನಡೆಸಲಾಯಿತು. ಶೃತಿ.ಯು ಎನ್, ನಾಗರಕಟ್ಟೆ ಇವರು ಅತಿ ಹೆಚ್ಚು ಮತಗಳನ್ನು ಪಡೆದು ಆಯ್ಕೆ ಯಾಗಿರುತ್ತಾರೆ. ಹಾಗೂ ಗ್ರಾಮ ಪಂಚಾಯಿತಿಯ ಉಪ-ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿರುತ್ತದೆ ಎಂದು ತಹಶೀಲ್ದಾರರಾದ ಅಮರೇಶ ಜಿ.ಕೆ ತಿಳಿಸಿದರು. ನಂತರ ಶೃತಿ.ಯು ಎನ್ ಸದಸ್ಯತ್ವದ ಪ್ರಮಾಣ ಪತ್ರವನ್ನು ಸಿದ್ದಲಿಂಗಪ್ಪ ದೇವೇಂದ್ರಪ್ಪ ವಿರೂಪಾಕ್ಷ ಚುನಾವಣೆ ಅಧಿಕಾರಿಗಳೊಂದಿಗೆ ಸ್ವೀಕರಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು