ಡಾ. ಬಿ.ಆರ್. ಅಂಬೇಡ್ಕರ್ ಅವರ 133 ನೇ. ಜಯಂತ್ಯೋತ್ಸವ ಆಚರಣೆ.
ಇಂಡಿ ಏಪ್ರಿಲ್.14

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಬಿಕೆ ಗ್ರಾಮದಲ್ಲಿ ಇಂದು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 133 ನೇ ಜಯಂತೋತ್ಸವವನ್ನು ವಿಶೇಷವಾಗಿ ಗ್ರಾಮದ ಎಲ್ಲಾ ಸಮುದಾಯದ ಎಲ್ಲಾ ಪ್ರಮುಖರು ಸೇರಿ ದೇಶದ ಐಕ್ಯತೆಯ ಸಂವಿಧಾನದ ಸಮಾನತೆಯ ತತ್ವದಡಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗ್ರಾಮದ ಹಿರಿಯ ಗೌರವಾನ್ವಿತ ಪೋಲಿಸ್ ಪಾಟೀಲರಾದ ಶ್ರೀ ಶಿವಗೊಂಡಪ್ಪ ಪಾಟೀಲ ಇವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೌರವಪೂವ೯ಕವಾಗಿ ಪೂಜೆ ಸಲ್ಲಿಸಿದರು.ನಂತರ ಕಾಯ೯ಕ್ರಮವನ್ನುದ್ದೇಶಿಸಿ ನಾದ ಬಿಕೆ (ಸೊಸೈಟಿ)ಸಹಕಾರಿ ಪತ್ತಿನ ಸಂಘದ ಅಧ್ಯಕ್ಷರಾದ ಶ್ರೀ ಧಮ೯ರಾಯ ಸಿ ಅವಜಿ ಅವರು ಮಾತನಾಡಿ-ಕೊಲಂಬಿಯಾ ವಿಶ್ವವಿದ್ಯಾಲಯ 2004ರಲ್ಲಿ ವಿಶ್ವದ ಶ್ರೇಷ್ಠ 100ವಿದ್ವಾಂಸರನ್ನು ಹೆಸರಿಸಿ ಪಟ್ಟಿ. ಮಾಡಲು ಮುಂದಾಯಿತು.ಅದರಲ್ಲಿ ಮೊದಲನೇ ಹೆಸರು ಡಾ.ಬಿ.ಆರ್.ಅಂಬೇಡ್ಕರ ಅವರದು ಎಂದರೆ ನಿಜಕ್ಕೂ ಸಂತೋಷವಾಗಿದೆ.ನಮ್ಮ ಜೀವನ ಎಷ್ಟು ದೀಘ೯ವಾಗಿದೆ ಎನ್ನುವುದುಕ್ಕಿಂತ ನಾವು ಎಷ್ಟು ಜನರಿಗೆ ಸಹಾಯ ಮಾಡಿದ್ದೇವೆ ಎನ್ನುವುದೇ ಮುಖ್ಯ ಇದು ಬಾಬಾಸಾಹೇಬರ ನುಡಿಮುತ್ತಾಗಿತ್ತು.ಅಂಬೇಡ್ಕ್ ರ ಅವರು ಬರೆದ ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವವರು ನಮಗೆ ಬಾಬಾಸಾಹೇಬರು ನಿಜವಾದ ದೇವರು ಎಂದು ಹೇಳಿದರು. ಶಿಕ್ಷಕರಾದ ಶ್ರೀ ಶಿವರಾಜ ತೇಲಿ ಇವರು ಮಾತನಾಡಿ-ಸಂವಿಧಾನ ಜಾರಿಯಾಗುವುದಕ್ಕಿಂತ ಮುಂಚೆ ನಮ್ಮ ದೇಶದಲ್ಲಿ ಅನೇಕ ಅಸಮಾನತೆ ,ದೌಜ೯ನ್ಯಗಳು ಹೆಚ್ಚಾಗಿದ್ದವು.ಅದನ್ನು ತಡೆಗಟ್ಟಲು ದೇಶಕ್ಕೆ ಕಾನೂನು ಅವಶ್ಯಕತೆ ಇತ್ತು.ಅದಕ್ಕಾಗಿ ದೇಶದ ಅನೇಕ ಬುದ್ಧಿಜೀವಿಗಳು ಸೇರಿ ಸುದೀಘ೯ವಾಗಿ ಚಚಿ೯ಸಿ,ಸಭೆಗಳು ನಡೆಸಿ ಕಾನೂನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ಕರಡು ಸಮಿತಿಯ ಅಧ್ಯಕ್ಷರಾದ ಡಾ ಅಂಬೇಡ್ಕರರವರದು . ಅಂಬೇಡ್ಕರ್ ಅವರು ಹೇಳಿದ ಹಾಗೆ ಈ ದೇಶದಲ್ಲಿ ಯಾರೂ ದೊಡ್ಡವರಲ್ಲ,ಆದರೆ ಈ ದೇಶ ಉಳಿಸಿಕೊಂಡು ಹೋಗಬೇಕಾದರೆ ನಿನ್ನ ಹತ್ತಿರ ಎರಡು ರೂಪಾಯಿಗಳು ಇದ್ದರೆ ಒಂದು ರೂಪಾಯಿ ಆಹಾರಕ್ಕಾಗಿ ಉಪಯೋಗಿಸಿಕೊಳ್ಳು,ಉಳಿದ ಇನ್ನೊಂದು ರೂಪಾಯಿ ನಿನ್ನ ಪುಸ್ತಕಗಳ ಜ್ಞಾನಾರ್ಜನೆಗಾಗಿ ಖಚು೯ ಮಾಡಿಕೊಳ್ಳಿ .ಆಗ ಈ ಸಮಾಜದ ಜೀವನದಲ್ಲಿ ಹೇಗೆ ಬದುಕಬೇಕೆಂದು ತಿಳಿಸುತ್ತದೆ ಎಂದು ಹೇಳಿದರು. ಶಾಸ್ತ್ರೀಗಳಾದ ಶ್ರೀ ಸಿದ್ಧಾರೂಢ ಕೊಳ್ಳೂರ ಇವರು ಮಾತನಾಡಿ ಅಂಬೇಡ್ಕರ್ ಅವರು ಸಾಮಾನ್ಯ ವ್ಯಕ್ತಿಯಲ್ಲ,ಅವರ ಚಿಂತನೆಗಳು ,ಆದಶ೯ಗಳು,ನಮಗೆ ದಾರಿದೀಪವಾಗಬೇಕು.ಮನುಷ್ಯ ಸ್ವಾಭಿಮಾನಿ,ಸ್ವತಂತ್ರವಾಗಿ ಬದುಕಬೇಕು.ದೇಶದ ಎಲ್ಲಾ ಧಮ೯ಗ್ರಂಥಗಳಿಗಿಂತ ಶ್ರೇಷ್ಠವಾದ ಗ್ರಂಥವೆಂದರೆ ಅದು ಭಾರತದ ಸಂವಿಧಾನ.ವೇದಗಳನ್ನು ಅರಿತವರು ದೊಡ್ಡವರಲ್ಲ,ವೇದನೆಗಳನ್ನು ಅರಿತವರು ದೊಡ್ಡವರು .ಒಂದು ಮಂದಿರ ಕಟ್ಟಿಸಿದರೆ ಸಾವಿರಾರು ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ.ಆದರೆ ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ ಎಂದು ಹೇಳಿದರು. ರೈತ ವಿದ್ವಾಂಸರಾದ ಶ್ರೀ ಗಂಗಾಧರ ಅಳ್ಳಗಿಯವರು ಮಾತನಾಡಿ-ಆಗಿನ ಅವಧಿಯಲ್ಲಿ ದೇಶದ ಮೂಲೆ-ಮೂಲೆಗಳಲ್ಲಿ ಅನೇಕ ಅನಿಷ್ಟ ಪದ್ಧತಿಗಳಾದ ಅಸ್ಪೃಶ್ಯತೆ,ಮೂಢನಂಬಿಕೆ,ಅನಾಚಾರ ,ಹೆಚ್ಚಾಗಿ ತಲೆದೂಗಿದ್ದವು.ಅಂತಹ ಮೂಢ ನಂಬಿಕೆಗಳು ದೇಶದಲ್ಲಿದ್ದರೆ ದೇಶದ ಪ್ರಗತಿ ಕುಂಠಿತವಾಗುತ್ತದೆ,ಅದನ್ನು ಹೊಡೆದೋಡಿಸಬೇಕಾದರೆ ಶಿಕ್ಷಣ ಅವಶ್ಯಕವಾಗಿದೆ ಎಂದು ಅವರು ಶಿಕ್ಷಣಕ್ಕೆ ಪ್ರಥಮ ಆಧ್ಯತೆ ನೀಡಿ,ಅನೇಕ ದೇಶ-ವಿದೇಶಗಳಿಗೆ ತೆರಳಿ ಉನ್ನತ ಶಿಕ್ಷಣ ಪಡೆದು ದೇಶದ ಸಂವಿಧಾನ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಒಂದಾನೊಂದು ಕಾಲದಲ್ಲಿ ಅಂಬೇಡ್ಕರ್ ಅವರನ್ನು ಅವಮಾನಿಸಿದ ಕೈಗಳಿಗೆ ಅವರ ಮುಂದೆ ಕೈಮುಗಿದು ನಿಲ್ಲುವವರಿಗೆ ಬೆಳೆದು ನಿಂತರು.ಇಂತಹ ಶ್ರೇಷ್ಠ ಸಾಧಕ ನಮ್ಮೊಳಗಿನ ಅಂತರಾಳದ ಸ್ಪೂತಿ೯ಯಾಗಬೇಕು.ಅವರು ‘ಶಿಕ್ಷಣ ಪ್ರಬಲ ಮತ್ತು ಪರಿಣಾಮಕಾರಿ ಅಸ್ತ್ರ ಎಂಬುದನ್ನು ಅರಿಯಬೇಕು . ಅಷ್ಟೇ ಅಲ್ಲದೆ ನನ್ನ ಜೈಕಾರ ಮಾಡುವುದಕ್ಕಿಂತ ನಾನು ತೋರಿದ ಮಾಗ೯ದಲ್ಲಿ ನಡೆಯಿರಿ ,ನೀ ಹೋರಾಟ ಮಾಡದಿದ್ದರೂ ಪರವಾಗಿಲ್ಲ ಆದರೆ ಮಾರಾಟವಾಗಬೇಡ ಎಂದು ಹೇಳಿದ ಅಂಬೇಡ್ಕರ್ ಅವರ ಮಾಗ೯ದಲ್ಲಿ ನಾವು ನೀವೆಲ್ಲ ಅವರ ಕನಸು ನನಸಾಗಿಸೋಣ ಎಂದು ಹೇಳಿದರು. ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ಸೋಮಶೇಖರ ಮ್ಯಾಕೇರಿಯವರು ಮಾತನಾಡಿ-ಬಾಬಾಸಾಹೇಬ ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ಭಾರತದ ಎಲ್ಲಾ ಸಮುದಾಯಗಳಿಗೆ ಸಮಾನ ಹಕ್ಕುಗಳಿಗಾಗಿ ಹೋರಾಡಿದರು ಆದ್ದರಿಂದ ಅಂಬೇಡ್ಕರ್ ಜನ್ಮದಿನವನ್ನು “ಸಮಾನತೆ ದಿನ”ಎಂದು ಆಚರಿಸಲಾಗುತ್ತದೆ.ಮತ್ತು ಎಪ್ರಿಲ್ 14 ಅನ್ನು ಅಂತಾರಾಷ್ಟ್ರೀಯ ಸಮಾನತೆ ದಿನ ಎಂದು ವಿಶ್ವ ಸಂಸ್ಥೆಯು ಘೋಷಿಸಿತು .ಈ ಭೂಮಿ ಇದ್ದಷ್ಟು ದಿನ ಅಂಬೇಡ್ಕರ್ ಅಮರರಾಗಿರುತ್ತಾರೆ.ಅವರು ಹೇಳುವಂತೆ ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕಿಲ್ಲ, ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕು.ಎಂಬ ನಿಯಮವನ್ನು ನಾವೆಲ್ಲ ಪಾಲನೆ ಮಾಡುವುದು ಅವಶ್ಯವಾಗಿದೆ.ಎಂದು ಹೇಳಿದರು.ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಶ್ರೀ ಶಿವಗೊಂಡಪ್ಪ ಗೌಡ ಪಾಟೀಲ.ಶ್ರೀ ಧಮ೯ರಾಯ ಸಿ ಅವಜಿ.ಶ್ರೀ ಸೋಮಶೇಖರ ಮ್ಯಾಕೇರಿ.ಶ್ರೀ ಶಿಕ್ಷಕರಾದ ಶಿವರಾಜ ತೇಲಿ.ಶ್ರೀ ಅಬ್ಬಾಸ್ ದೇಸಾಯಿ.ಶ್ರೀ ಸಿಂಧೂರ ಮೂಲಿ.ಶ್ರೀ ಹಣಮಂತ್ರಾಯ ಇಂಡಿ.ಶ್ರೀ ಸಿದ್ಧಾರೂಢ ಕೊಳ್ಳೂರ.ಶ್ರೀ ಭಗವಂತರಾಯ ಕೊಳ್ಳುರ.ಶ್ರೀ ರಮೇಶ ಅಂಬಾರೆ.ಶ್ರೀ ಅಶೋಕ ಅಂಬಾರೆ.ಶ್ರೀ ಗಂಗಾಧರ ಅಳ್ಳಗಿ.ಶ್ರೀ ಬಸವರಾಜ ಅವಜಿ.ಶ್ರೀ ರಾಜಕುಮಾರ ಮೆಲಿನಕೇರಿ.ಶ್ರೀ ಶಿಕ್ಷಕರಾದ ಬಿ ಎಸ್ ವಾಲಿ.ಶ್ರೀ ಶೆಟ್ಟೆಪ್ಪ ಮ್ಯಾಕೇರಿ.ಶ್ರೀ ಬಸವರಾಜ ಮ್ಯಾಕೇರಿ.ಶ್ರೀ ಹುಚ್ಚಪ್ಪ ಮ್ಯಾಕೇರಿ.ಶ್ರೀ ಮುತ್ತಪ್ಪ ಗುಡಿಮನಿ.ಶ್ರೀ ಕಲ್ಲಪ್ಪ ಹರಿಜನ.ಶ್ರೀ ಸಂಗಪ್ಪ ಹರಿಜನ.ಮಲ್ಲಿಕಾಜು೯ನ ಅವಜಿ.ಶ್ರೀ ಶರಣಪ್ಪ ವಾಲಿಕಾರ.ಶ್ರೀ ಆಕಾಶ ಕಾಂಬಳೆ(ಮ್ಯಾಕೇರಿ).ರಾಮು ಗುಡಿಮನಿ.ಹುಸನಪ್ಪ ಮು ಗುಡಿಮನಿ.ಲಕರಾಯ ಪೋತೆ.ಅಶ್ವಥ ಮ್ಯಾಕೇರಿ.ಶ್ರೀಧರ ಕೋಳೆಕಾರ.ಮಂಜುನಾಥ ವಗ್ಗೆ.ಜೈಭೀಮ ಗುಡಿಮನಿ.ಎಸ್ .ಬಿ.ಹರಿಜನ ಇತರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ ಇಂಡಿ.