ನುಡಿ “ಮುತ್ತು”ಗಳು…..

• ಬಗ್ಗೆ ನಿಮಗೆ ಅರಿವಿಲ್ಲವೆಂದ ಮೇಲೆ
ಮತ್ತೊಬ್ಬರನ್ನು ಹೀಯಾಳಿಸಿ ಮಾತನಾಡುವ
ಅಧಿಕಾರ ನಿಮಗಿಲ್ಲ.•
ಯಾರು ಎಷ್ಟೇ ಬಲಶಾಲಿಯಾದರು ನಿಮ್ಮ
ತನ್ನ ಹೆಣವನ್ನು ತಾನೇ ಹೊರಲಾರ.•
ಏನು ಬೇಕಾದರೂ ಬಿಟ್ಟು ಬದುಕು ಆದರೆ
ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಬಿಟ್ಟು
ಒಂದು ಕ್ಷಣ ಕೂಡ ಬದುಕಬೇಡ.•
ಬದುಕಿನ ಬಗ್ಗೆ ಭಯವಿರಲಿ, ದಿನ ಕಳೆದಂತೆ
ಸಾವು ಒಂದು ದಿನ ಸಮೀಪವಾಗುತ್ತಿದೆ ಎಂಬ
ಅರಿವಿರಲಿ.•
ಸಾವು ನಮ್ಮನ್ನು ಹುಡುಕಿ ಕೊಂಡು
ಬರುವದರೋಳಗಾಗಿ ಸಾಧಕನಾಗಿ ಬಿಡೋಣ
ಕಾರಣ ಇರುವುದೊಂದೇ ಜನ್ಮ.•
ಭಗವಂತ ನಿಮಗೆ ಅತ್ಯದ್ಭುತವಾದ ನೆನಪಿನ
ಶಕ್ತಿಯ 10 ಲಕ್ಷ ಜಿಬಿ ಮೆದುಳು ಕೊಟ್ಟಿದ್ದಾನೆ
ಅದನ್ನು ಸರಿಯಾಗಿ ಉಪಯೋಗಿಸಿ ಕೊಳ್ಳಿ.•
ನಿಮಗಾಗಿ ಅಲ್ಲದಿದ್ದರೂ ನಿಮ್ಮವರಿಗಾಗಿ
ಬದುಕಿ.•
ಸಾಯುವುದಕ್ಕೆ ಹೆದರಬೇಡಿ ಬದುಕುವುದಕ್ಕೆ
ಅಂಜಬೇಡಿ.•
ಸದಾ ಮೊಬೈಲ್ ನೋಡುವುದರಲ್ಲಿ ಸಮಯ
ವ್ಯರ್ಥ ಮಾಡಬೇಡಿ, ಮತ್ತೊಬ್ಬರ ಮೊಬೈಲ್
ಸ್ಟೇಟಸ್ ಗಳಲ್ಲಿ ನಿಮ್ಮ ಸಾಧನೆ ಬರುವಂತೆ
ಮಾಡಿ.•
ಜೀವನ ಚಿಗುರುವ ಎಲೆಯಂತಾಗಬೇಕು
ವಿನಹ ಬಾಡುವ ಎಲೆಯಂತಾಗಬಾರದು.•
ಪುಸ್ತಕ ಹಿಡಿದ ಕೈ ಪುಸ್ತಕ ಬರೆಯಬಲ್ಲದು
ಹಾಗೆಯೇ ಪುಸ್ತಕ ಬರೆದ ಕೈ ಚರಿತ್ರೆ
ಸೃಷ್ಟಿಸಬಲ್ಲದು.•
ಇತಿಹಾಸದ ಪುಟಗಳಲ್ಲಿ ನಿಮಗಾಗಿ ಒಂದು
ಪುಟ ಭಗವಂತ ಮೀಸಲಿಟ್ಟಿರುತ್ತಾನೆ. ಆ
ಪುಟದ ಸಾಧಕರ ಪರಿಚಯ ನಿಮ್ಮದಾಗಬೇಕೆ
ವಿನಹ ಬೇರೆಯವರಿಗೆ ಬಿಟ್ಟು ಕೊಡಬೇಡಿ
ಶ್ರೀ ಮುತ್ತು.ಯ.ವಡ್ಡರ
( ಶಿಕ್ಷಕರು, ಹಿರೇಮಾಗಿ )
ಬಾಗಲಕೋಟ
Mob-9845568484