ಮೊಳಕಾಲ್ಮುರು ಕ್ಷೇತ್ರದಲ್ಲಿ ಬೇರೆ ಬೇರೆ ಪಕ್ಷದ ಮತದಾರರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗಿ ಶಾಸಕರಿಗೆ ಕೈ ಬಲ ಪಡಿಸಿದರು.
ಮೊಳಕಾಲ್ಮುರು ಏಪ್ರಿಲ್.17
![](https://i0.wp.com/sknewskannada.in/wp-content/uploads/2024/04/IMG-20240417-WA00311.jpg?resize=708%2C531&ssl=1)
ಕಾಂಗ್ರೆಸ್ನ ತತ್ವ ಸಿದ್ಧಾಂತಗಳು ತತ್ವಾದರ್ಶಗಳು,ಶಾಸಕರ ಅಭಿವೃದ್ಧಿ ಕಾರ್ಯವೈಖರಿ ರೈತರಿಗೆ ಬೆಳೆ ಪರಿಹಾರ ಇನ್ಶೂರೆನ್ಸ್ ಕುಡಿಯುವ ನೀರಿನ ವ್ಯವಸ್ಥೆ ದನ ಕರುಗಳಿಗೆ ಮೇವು ನೀರು ವ್ಯವಸ್ಥೆ ಬೀಜ ಮತ್ತು ಕೃಷಿ ಇಲಾಖೆಯಿಂದ ಸರ್ಕಾರ ದಿಂದ ಬರ್ತಕಂತ ಪಿಎಂ ಕಿಸಾನ್ ಯೋಜನೆ ಆಗಿರಬಹುದು ರೈತರಿಗೆ ತಾಡಪಲ್ ಗೊಬ್ಬರ ಸ್ಪಿಂಕ್ಲರ್ ಪೈಪುಗಳು ನಿಜವಾದಂತ ರೈತರಿಗೆ ಅನುಕೂಲ ಮಾಡಿಕೊಟ್ಟಂತ ಶಾಸಕರು ಮತ್ತು ಕೃಷಿ ಹೊಂಡಗಳು ಕೃಷಿಭಾಗ್ಯ ಟಿಲ್ಲರ್ ನೇಗಿಲಗಳು ಮತ್ತು ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳು ಬರ ನಿರ್ವಹಣೆ ಎಲ್ಲಾ ಜನ ಸಾಮಾನ್ಯರಿಗೆ ಅನುಕೂಲ ಮಾಡಿ ಕೊಡುವ ಶಾಸಕರು ಯಾರಾದರೂ ಇದ್ದರೆ ಅದು ಕರ್ನಾಟಕದಲ್ಲಿ ಮೊಳಕಾಲ್ಮೂರು ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಮಾತ್ರ ಸಲ್ಲುತ್ತೆ.
![](https://i0.wp.com/sknewskannada.in/wp-content/uploads/2024/04/IMG-20240417-WA00301.jpg?resize=708%2C531&ssl=1)
ರೈತರ ಕಷ್ಟ ಬಡವರು ಮತ್ತು ಎಲ್ಲಾ ಜನ ಸಾಮಾನ್ಯರ ಕಷ್ಟಗಳನ್ನು ಅರಿತಂತಾ ಶಾಸಕರು ಮತ್ತು ರೈತರ ಕಷ್ಟ ಏನು ಎಂಬುವುದು ಅರ್ಥ ಮಾಡಿ ಕೊಳ್ಳುವ ಶಾಸಕರು ನೇರ ನುಡಿ ಮಾತುಗಳು ಇರುವುದರಿಂದ ಬೇರೆ ಪಕ್ಷದವರು ಬಂದು ಎನ್ ವೈ ಗೋಪಾಲಕೃಷ್ಣ ಶಾಸಕರ ಮನಸು ಮತ್ತು ಅಭಿವೃದ್ಧಿ ನೋಡಿ ಕಾಂಗ್ರೆಸ್ ಪಕ್ಷಕ್ಕೆ ನಾ ಮುಂದು ತಾ ಮುಂದು ಎಂದು ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಸೇರ್ಪಡೆ ಆಗಿರುತ್ತಾರೆ ಪ್ರೇರಿತರಾದ ಬಿಜೆಪಿ ಪಕ್ಷದ ತಮ್ಮೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಹಾಗೂ ಕಾರ್ಯಕರ್ತರು, ನಾಯಕರು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಂಡರು. ಎಲ್ಲರೂ ಆತ್ಮೀಯವಾಗಿ ಸ್ವಾಗತಿಸಿ, ಶುಭ ಹಾರೈಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ ಮೊಳಕಾಲ್ಮೂರು.