ಕರವೇ ಮೊಗಲ ಹಳ್ಳಿ ಘಟಕ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ರವರ 133 ನೇ. ಜಯಂತಿ ಆಚರಣೆ.
ಮೊಗಲ ಹಳ್ಳಿ ಏಪ್ರಿಲ್.17
![](https://i0.wp.com/sknewskannada.in/wp-content/uploads/2024/04/IMG-20240417-WA00281.jpg?resize=708%2C531&ssl=1)
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಮೊಗಲ ಹಳ್ಳಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಡಾ.ಬಿ ಆರ್ ಅಂಬೇಡ್ಕರ್ ರವರ 133 ನೇಯ ಜಯಂತಿಯನ್ನು ಆಚರಿಸಲಾಯಿತು.ಕರವೇ ಘಟಕದ ಅಧ್ಯಕ್ಷರಾದ ಎಂ.ಟಿ ತಿಪ್ಪೇರುದ್ರಪ್ಪ ಮಾತನಾಡಿ ಅಂಬೇಡ್ಕರ್ ರವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು.
![](https://i0.wp.com/sknewskannada.in/wp-content/uploads/2024/04/IMG-20240417-WA00271.jpg?resize=708%2C317&ssl=1)
ಅಲ್ಲದೆ ಇವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಎಲ್ಲರೂ ಸಮಾಜದಲ್ಲಿ ಉತ್ತಮ ಜೀವನ ನಡೆಸಬೇಕು ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಸೋಮಶೇಖರ್ ಸುರೇಶ್,ಈಶ್ವರ, ರಾಘು, ಸಿದ್ದಾರ್ಥ್.ವಿ, ಗುರು,, ಶಿವು, ವಿಕಾಸ್, ಇನ್ನು ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು, ಹಾಗೂ ಊರಿನ ಮುಖಂಡರು ಯುವಕರು ಸಹ ಭಾಗವಹಿಸಿದ್ದರು.ಎಲ್ಲರ ಸಹಕಾರ ದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ವರದಿ:ಶಿವಮೂರ್ತಿ.ಟಿ. ಕೋಡಿಹಳ್ಳಿ ಚಳ್ಳಕೆರೆ.