ಪಹಣಿ ಜೊತೆ ಫೋಟೋ ಕಂದಾಯ ಇಲಾಖೆ ಸ್ಪಷ್ಟನೆ – ಕೃಷ್ಣ ಬೈರೇಗೌಡ.

ಬಾಗಲಕೋಟೆ ಏಪ್ರಿಲ್.17

ರಾಜ್ಯದಲ್ಲಿ ರೈತರ ನಿಖರ ಅಂಕಿ ಅಂಶ ತಿಳಿಯಲು ರಾಜ್ಯ ಕಂದಾಯ ಇಲಾಖೆ ಲಾಖೆ ದಿಟ್ಟ ನಿಲುವು ತಾಳಿದ್ದು ಸಣ್ಣ ಅತೀ ಸಣ್ಣ ರೈತರಿಗಾಗಿ ಹಾಗೂ ಸರಕಾರಿ ಸೌಲಭ್ಯ ಪಡೆಯಲು ಕರಾರುವಕ್ಕಾದ ಮಾಹಿತಿ ಸಂಗ್ರಹಿಸಲು “ನನ್ನ ಆಧಾರ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆಯನ್ನು ಪ್ರಾರಂಬಿಸಿದ್ದು ರೈತರ ಮಾಹಿತಿ ಜತೆಗೆ ಭೂ ಸಂಬಂಧ ವಂಚನೆ ತಡೆಯಲು ಜಮೀನು ಮಾಲೀಕರ ಫೋಟೋ ಸಹಿತ ಪಹಣಿ ಪತ್ರ (rtc) ಸಿಗುತ್ತಿರುವದು ಉತ್ತಮ ಕ್ರಿಯೆಯಾಗಿದ್ದು, ಒಬ್ಬ ರೈತ ಬೇರೆ ಬೇರೆ ಜಮೀನುಗಳನ್ನು ಬೇರೆ ಬೇರೆ ಸರ್ವೇ ನಂಬರಗಳಲ್ಲಿ ಹೊಂದಿದ್ದರೆ ಆಧಾರ್ ಜೋಡಣೆ ಜೊತೆ ಫೋಟೋ ಸಹಿತ ದಾಖಲಿರುವ ಮಾಹಿತಿ ಒಂದೆ ಬೆಸ್ ನಲ್ಲಿ ಸಿಗುತ್ತಿದೆ ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ ತಮ್ಮ ಸರ್ವೇ ಪಹನೀಯನ್ನು ನಿರಾಂತಕವಾಗಿ ಪಡೆದು ಕೊಳ್ಳಬಹುದು ಎಂದು ಕಂದಾಯ ಇಲಾಖೆ ಆಯುಕ್ತ ಪಿ ಸುನೀಲಕುಮಾರ ಹೇಳಿದ್ದಾರೆ. ಕಂದಾಯ ಗ್ರಾಮ ಆಡಳಿತಧಿಕಾರಿಗಳು ಹಳ್ಳಿ ಹಳ್ಳಿಗೂ ತೆರಳಿ ಪಹಣಿ ಜೊತೆಗೆ ಆಧಾರ ಜೋಡಣೆ ಮಹತ್ವ ತಿಳಿಸುತ್ತಿದ್ದು ಒ ಟಿ ಪಿ ಆಧಾರಿತ ಇ -ಕೇವೈಸಿ ಕೃಷಿ ಜಮೀನು ಮಾಲೀಕರ ಮಾಹಿತಿ ಸೆರೆ ಹಿಡಿದು ಡೇಟಾ ಬೇಸ್ ನಲ್ಲಿ ಸಂಗ್ರಹವಾಗುತ್ತದೆ ಇದರಿಂದ ರೈತರ ಜಮೀನುಗಳು ಸುರಕ್ಷಿತವಾಗಿರುವದರ ಜೊತೆಗೆ ಭೂಗಳ್ಳರು ಜಮೀನು ಕಳಿಸುವುದು ತಪ್ಪುತ್ತದೆ ಈ ಯೋಜನೆಯಿಂದ ರೈತರಿಗೆ ಅನುಕೂಲವಾಗುತ್ತದೆ.

ರಾಜ್ಯ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ. ಹಲಗಿ ಶಿರೂರು

ಸುದ್ದಿ ಸಂಗ್ರಹ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button