ನೀರಿಗಾಗಿ ತಹಶೀಲ್ದಾರರ ಕಛೇರಿ ಮುಂದೆ ಪ್ರತಿಭಟನೆ.

ಬಿ.ಬಿ ಇಂಗಳಗಿ ಏಪ್ರಿಲ್:18

ದೇವರ ಹಿಪ್ಪರಗಿ ತಾಲ್ಲೂಕಿನ ಕೊಂಡಗೂಳಿ ಗ್ರಾಮ ಪಂಚಾಯತಿ ವಾಪ್ತಿಯಲ್ಲಿ ಬರುವ ಬಿಬಿ ಇಂಗಳಗಿ ಗ್ರಾಮದಲ್ಲಿ ಬಹು ದಿನಗಳಿಂದ ನೀರಿನ ಸಮಸ್ಯೆ ಇದೇ ಈ ಗ್ರಾಮಕ್ಕೆ ಯಾವ ಅಧಿಕಾರಿ ಆಗಲಿ ಈ ಕಡೆಗೆ ಗಮನ ಹರಿಸಿಲ್ಲ ಹಲವಾರು ಬಾರಿ ಗ್ರಾಮ ಪಂಚಾಯತಿಗೆ ಹಾಗೂ ತಾಲ್ಲೂಕು ಪಂಚಾಯತಿಗೆ, ತಹಶಿಲ್ದಾರರ ಕಛೇರಿಗೆ ಊರಿನ ಗ್ರಾಮಸ್ಥರ ರಿಂದ ಮನವಿ ಸಲ್ಲಿಸಿದೇವೆ ಅದರೂ ಯಾರೂ ನಮ್ಮ ಸಮಸ್ಯೆಯನ್ನು ಬಗೆಹರಿಸಿಲ್ಲಾ, ಇಂದು ಗ್ರಾಮಸ್ಥರು ಕೂಡಿ ತಹಶಿಲ್ದಾರರ ಕಛೇರಿ ಮುಂದೆ ಕಾಲಿ ಕೊಡ ತೆಗೆದುಕೊಂಡು ಹೋರಾಟ ಮಾಡಿದರು, ಗ್ರಾಮಕ್ಕೆ ಹತ್ತು ಇಪ್ಪತ್ತು ದಿನಕ್ಕೆ ಒಮ್ಮೆ ನೀರು ಬರುತ್ತವೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲಾ ಹಲವಾರು ಬಾರಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸದಸ್ಯರು ನೀರಿನ ಸಮಸ್ಯೆ ಬಗೆಹರಿಸಿಲ್ಲಾ, ಅದಕ್ಕಾಗಿ ಇಂದು ತಹಶಿಲ್ದಾರರ ಸಾಹೇಬರಿಗೆ ಬೇಟೆ ಮಾಡಿದ ತಕ್ಷಣ,ತಹಶಿಲ್ದಾರರಾದ ಪ್ರಕಾಶ ಸಿಂದಗಿ ಹಾಗೂ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಜೀವ ಜನ್ನೊರ ಅವರು ಗ್ರಾಮಕ್ಕೆ ಭೇಟಿ ನೀಡಿ ಇನ್ನೂ ಒಂದು ವಾರದಲ್ಲಿ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದರು.

ಕೂಡಲೆ ಗ್ರಾಮಸ್ಥರು ತಮ್ಮ ಹೋರಾಟವನ್ನು ಹಿಂಪಡೆದರು ಈ ಹೋರಾಟ ನೇತೃತ್ವವಹಿಸಿದ ಸಲೀಮ ವಠಾರ ಅವರು ನೀರಿನ ಸಮಸ್ಯೆ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು, ಪಾತೀಮಾ ಬಾಗಲಕೋಟ, ಮಡಿವಾಳಮ್ಮ ಅಗಸರ ಇವರು ಮಾತನಾಡಿದರು, ಈ ಸಂದರ್ಭದಲ್ಲಿ ಅಬ್ಬಾಸಾಲಿ ಬಾಗಲಕೋಟ ಹುಸೇನಸಾಬ ನಧಾಪ ಇಮಾಮಸಾಬ ನಧಾಪ ಬಂದಗಿಸಾಬ ನಾಶಿ ಗುರುಸಿದ್ದಯ್ಯ ಹಿರೇಮಠ ನಬಿಸಾಬ ಬಾಗಲಕೋಟ ಸಹಿನಬಾನು ಬಾಗಲಕೋಟ ಶೇಹಜಾದಬಿ ಆಹೇರಿ ಲಾಲಬಿ ನಧಾಪ ಹಜರತಬಿ ನಧಾಪ ಇಂದ್ರಾಬಾಯಿ ಅಗಸರ ಹುಸೇನಬಿ ಶೇಖ ಸಹಿರಾಬಿಬೇಗಂ ನಧಾಪ ಇಮಾಮಬಿ ನಧಾಪ ಆಯಿಶಂ ಆಹೇರಿ ರೊಶನಬಿ ಆಹೇರಿ ಶಾರದಾ ಶರಣಮ್ಮ ಕದ್ದನಳ್ಳಿ ಹಲಿಮಾ ವಠಾರ ಸಕೀಲಾಬಾನು ಮುಜಾವಾರ ಪರವೀನ ಬಾಗಲಕೋಟ ಮಾದೇವಿ ಮಲ್ಲೇದ ಜಯಶ್ರೀ ಮಲ್ಲೇದ ಕಾಸುಬಿ ವಠಾರ ಈ ಹೋರಾಟದಲ್ಲಿ ಭಾಗವಹಿಸಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button