ಅಧಿಕಾರ ಅನುಭವಿಸಲಿಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ – ಜಯಪ್ರಕಾಶ್ ಹೆಗ್ಡೆ.

ತರೀಕೆರೆ ಏಪ್ರಿಲ್.21

ರಾಷ್ಟ್ರೀಯ ಹೆದ್ದಾರಿ ತುಮಕೂರಿನಿಂದ ಶಿವಮೊಗ್ಗ, ಕಡೂರಿನಿಂದ ಚಿಕ್ಕಮಗಳೂರು ರಸ್ತೆ ಅಭಿವೃದ್ಧಿಗೆ ನನ್ನ ಅಧಿಕಾರದ ಅವಧಿಯಲ್ಲಿ ಕಾಮಗಾರಿಗೆ ಮಂಜೂರಾತಿ ಮಾಡಲಾಯಿತು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಎಮ್ ಸಿ ಹಳ್ಳಿಯ ಹೊಸ ಬಡಾವಣೆ ಯಲ್ಲಿರುವ ಚಂದ್ರೇಗೌಡ ಸ್ಮಾರಕ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಚಿಕ್ಕಮಗಳೂರು ರೈಲ್ವೆ ನಿಲ್ದಾಣಕ್ಕೆ ಕನಿಷ್ಠ ಇನ್ನೆರಡು ರೈಲು ಸಂಚಾರಕ್ಕೆ ಹಿಂದೆ ಇದ್ದ ಸಂಸದರು ಯಾವುದೇ ಕೆಲಸ ಮಾಡಲಿಲ್ಲ, ನಾನು ಸಂಸದರಾಗಿದ್ದಾಗ ಕೇಂದ್ರ ಸರ್ಕಾರ ದಿಂದ ಅಡಿಕೆ ಬೆಳೆಗೆ 10 ರಿಂದ 70 ಸಾವಿರ ವರೆಗೆ ಬೆಲೆ ಏರಿಕೆ ಮಾಡಿಸಿ ಬೆಂಬಲ ಬೆಲೆಯನ್ನು ಕೊಡಿಸಿರುತ್ತೇನೆ ನಾನು ಸಂಸದರಾಗಿದ್ದರು ಅಧಿಕಾರ ಅನುಭವಿಸಲಿಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ಉಡುಪಿ ಚಿಕ್ಕಮಗಳೂರು ಜಿಲ್ಲೆಗಳ ಪ್ರತಿ ಗ್ರಾಮ ಪಂಚಾಯಿತಿಗೂ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಮಾಡಿರುತ್ತೇನೆ. ನಮ್ಮ ಪಕ್ಷವೂ ಈ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಿರುತ್ತೇವೆ. ಮಹಾಲಕ್ಷ್ಮಿ ಯೋಜನೆ, ರೈತರ ಸಾಲ ಮನ್ನಾ ಯೋಜನೆ, ವಿದ್ಯಾರ್ಥಿಗಳ ಸಾಲ ಮನ್ನಾ ಯೋಜನೆ, ಪ್ರತಿ ಕುಟುಂಬಕ್ಕೂ 25 ಲಕ್ಷ ರೂಗಳ ವಿಮಾ ಯೋಜನೆ ಎನ್ನುವ ಘೋಷಣೆ ಮಾಡಿರುತ್ತೇವೆ ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ, ಆದ್ದರಿಂದ ತಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ನೀಡಿ ನನ್ನನ್ನು ಜಯಶೀಲರನ್ನಾಗಿ ಮಾಡಿ ತಮ್ಮ ಸೇವೆ ಮಾಡಲು ಅವಕಾಶ ಮಾಡಿ ಕೊಡಬೇಕೆಂದು ಕೇಳಿ ಕೊಳ್ಳುತ್ತೇನೆ ಎಂದು ಮತಯಾಚನೆ ಮಾಡಿದರು. ಬೇರೆಯವರ ಸುಳ್ಳು ಸುಳ್ಳು ವದಂತಿಗಳಿಗೆ ಅಪ ಪ್ರಚಾರಕ್ಕೆ ಕಿವಿ ಗೊಡಬೇಡಿ ಎಂದು ಹೇಳಿದರು. ತರೀಕೆರೆ ಶಾಸಕರಾದ ಜಿ.ಎಚ್. ಶ್ರೀನಿವಾಸ್ ಮಾತನಾಡಿ ಜನಧನ್ ಯೋಜನೆಯಿಂದ ಜನರ ಖಾತೆಗೆ ಹಣ ಹಾಕುತ್ತೇನೆ ಎಂದು ಹೇಳಿದ ಮೋದಿರವರು ಹಣ ಹಾಕದೆ ಜನರಿಗೆ ಮೋಸ ಮಾಡಿದ್ದಾರೆ. ಮೋದಿ ಸರ್ಕಾರ ಆದಾನಿ, ಅಂಬಾನಿ ರವರನ್ನು ಉದ್ದಾರ ಮಾಡಲು ಅವರ ಸಾಲ 11 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಬಡವರ ಸಾಲ, ರೈತರ ಸಾಲ ಮನ್ನಾ ಮಾಡಿಲ್ಲ, ಭ್ರಷ್ಟಾಚಾರದಲ್ಲಿ ಮುಳುಗಿದೆ ಬಿಜೆಪಿ ಸರ್ಕಾರ 7.5 ಸಾವಿರ ಕೋಟಿ ಹಣ ಚುನಾವಣಾ ಬಾಂಡ್ ಭ್ರಷ್ಟಾಚಾರ ಮಾಡಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಡಾ. ಅಂಶುಮಂತ್ ಮಾತನಾಡಿ ಕಾಂಗ್ರೆಸ್ ಜನ ಪರವಾದ ಕೆಲಸ ಮಾಡಿದೆ, ದೇಶದಲ್ಲಿ ಜನ ಸಾಮಾನ್ಯರ ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಜಯಪ್ರಕಾಶ್ ಹೆಗ್ಡೆ ರವರ ಗೆಲುವಿನಿಂದ ಕ್ಷೇತ್ರದ ಶಾಸಕರಿಗೆ ಬಲ ಬರುತ್ತದೆ ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮತಯಾಚನೆ ಮಾಡಿದರು. ವೇದಿಕೆಯಲ್ಲಿ ಸಮಾಜ ಸೇವಕ ಎಚ್ಎಮ್ ಗೋಪಿಕೃಷ್ಣ, ಪಕ್ಷದ ತಾಲೂಕು ಅಧ್ಯಕ್ಷರಾದ ಹೆಚ್ ಯು ಫಾರೂಕ್, ನಗರ ಅಧ್ಯಕ್ಷರಾದ ಪ್ರಕಾಶ್ ವರ್ಮಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎನ್ ರಾಮೇಗೌಡ, ಜಯ ಕರ್ನಾಟಕ ಸಂಘಟನೆಯ ಜಗದೀಶ್, ಪುರಸಭಾ ಮಾಜಿ ಅಧ್ಯಕ್ಷರಾದ ಟಿ ಜೆ ಗೋಪಿಕುಮಾರ್, ಕುಮಾರಯ್ಯ, ಮಿರ್ಜಾ ಇಸ್ಮೈಲ್, ರಘು ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್ ತರೀಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button