ಮಾದಿಗ ಮೀಸಲಾತಿಗೆ ಬಿ.ಜೆ.ಪಿ ಬೆಂಬಲಿಸಲು ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಕರೆ.
ಬಾಗಲಕೋಟೆ ಏಪ್ರಿಲ್.24

ರಾಷ್ಟ್ರವನ್ನು ಬಹು ವರ್ಷಗಳ ಕಾಲ ಆಳಿದ ಕಾಂಗ್ರೇಸ್ ಪಕ್ಷ ಮಾದಿಗ ಸಮುದಾಯಕ್ಕೆ ನ್ಯಾಯಯುತವಾಗಿ ನೀಡಬೇಕಾದ ಯಾವುದೇ ಸೌಲಭ್ಯ ನೀಡದ್ದಾಕ್ಕಾಗಿ ಶೋಷಿತ ದಲಿತ ಸಮುದಾಯಗಳು ತಮ್ಮ ಅಸ್ತಿತ್ವದ ಉಳುವಿಗಾಗಿ ನಿತ್ಯ ಹೋರಾಟ ಮಾಡುವ ದುಸ್ಥಿತಿ ಬಂದೋದಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಮಂದ ಕೃಷ್ಣ ಮಾದಿಗ ಇವರು ಆರೋಪಿಸಿದರು, ಚಳ್ಳಕೆರಿ ನಗರದಲ್ಲಿ ಚುನಾವಣಾ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಮಾದಿಗ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಬಿಡಿ ಬಿಡಿಯಾಗಿ ಬಿಚ್ಚಿಟ್ಟ ಅವರು ಪ್ರಸ್ತುತ ಏ ಐ ಸಿ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರೆ ಮಾದಿಗ ಒಳಮಿಸಲಾತಿಗೆ ಅಡ್ಡಿಯಾಗಿದ್ದಾರೆ ಇತ್ತೀಚೆಗೆ ಹೈದ್ರಾಬಾದನಲ್ಲಿ ನಡೆದ ಮಾದಿಗ ಮೀಸಲಾತಿ ಸಮೀತಿ ಸಭೆಗೆ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಆಗಮಿಸಿ ನಮ್ಮ ಹೋರಾಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದಾರಲ್ಲದೆ ಲೋಕಸಭಾ ಚುನಾವಣೆ ನಂತರ ಮಾದಿಗ ಮೀಸಲಾತಿ ಜಾರಿಗೆ ತರುವ ಜೊತೆಗೆ ಸಮುದಾಯದ ಸರ್ವತೋಮುಖ ಕಾರ್ಯಗಳಿಗೂ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಬಹುಶಃ ದೇಶದ ಇತಿಹಾಸದಲ್ಲಿ ಪ್ರಧಾನ ಮಂತ್ರಿಗಳು ಹೋರಾಟದ ಕಾರ್ಯಕ್ರಮಕ್ಕೆ ಆಗಮಿಸಿ ರೂಪು ರೇಷೆಗಳನ್ನು ವಿಚಾರಿಸಿ ನಮ್ಮ ಸಮುದಾಯದ ಬಗ್ಗೆ ಆಡಳಿತ ವೈಖರಿಯಲ್ಲಿ ಮೀಸಲಾತಿ ಭರವಸೆಯನ್ನು ಮುಕ್ತ ಕಂಠದಿಂದ ಮಾತನಾಡಿದ್ದು ನಮ್ಮ ಹೋರಾಟಕ್ಕೆ ಹೆಮ್ಮೆಯ ಇತಿಹಾಸ ವಿಷಯ ನನ್ನ ಸಮುದಾಯ ಮೋದಿಯವರನ್ನು ಬೆಂಬಲಿಸಿ ಮೀಸಲಾತಿ ಪಡೆಯೋಣ ಎಂದರು.
ರಾಜ್ಯ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ. ಶಿರೂರು.
ಸುದ್ದಿ ಸಂಗ್ರಹ