ಪಂಚಯೋಜನೆ ಪ್ರೀಯಂಕಾ ಜಾರಕಿಹೊಳಿ ಯವರಿಗೆ ಶ್ರೀ ರಕ್ಷೆ ಆಗಲಿದೆ – ಪ್ರವೀಣ ನಾಯಿಕ.
ಚಿಕ್ಕೋಡಿ ಏಪ್ರಿಲ್.26

ಕಾಂಗ್ರೇಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ನೇತೃತ್ವದಲ್ಲಿ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆ ಬಡವರು ಶ್ರೀಮಂತ ಜಾತಿ ಧರ್ಮ ಅನ್ನದೆ ಎಲ್ಲರಿಗೂ ಯೋಜನೆ ತಲುಪಿಸುವಲ್ಲಿ ಸಪಲತೆ ಕಂಡಿದೆ ನುಡಿದಂತೆ ನಡೆದ ಸರಕಾರ ಕಾಂಗ್ರೇಸ್ ಪಕ್ಷ.ಸರಕಾರದ ಯೋಜನೆಗಳು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರೀಯಂಕಾ ಜಾರಕಿಹೊಳಿ ಅವರ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದು ಕಾಂಗ್ರೇಸ್ ಪಕ್ಷದ ಮುಖಂಡ ಪ್ರವೀಣ ನಾಯಿಕ ಹೇಳಿದರು. ಅವರು ಅಭ್ಯರ್ಥಿ ಪರವಾಗಿ ಕಾಗವಾಡ ಮತಕ್ಷೇತ್ರದ ಮದಭಾವಿ, ಕಲ್ಲೋತಿ, ಬಮನಾಳ ಗ್ರಾಮದ ಜನರನ್ನು ಭೇಟಿ ಮಾಡಿ ಮತ ಯಾಚಸಿ ಮಾತನಾಡಿದರು.ಗೋಕಾಕ ಕ್ಷೇತ್ರದ ಮುಖಂಡರಾದ ಶ್ರೀಶೈಲ ಅಂಟಿನ, ಸಹದೇವ ನಾಯಕ, ರಮೇಶ ಪೂಜಾರಿ ಮದಭಾವಿ ಗ್ರಾಮ ಪಂಚಾಯತ ಸದಸ್ಯ ಸಂತೋಷ ಕಲ್ಲೋತಿ ಆಗಮಿಸಿದ್ದರು.ವಿನಾಯಕ ಕಲ್ಲೋತಿ, ಸಂತೋಷ ನಾಯಕ, ಮೌನೇಶ ಪತ್ತಾರ, ಸಿದ್ದು ಕಲ್ಲೋತಿ, ಅರವಿಂದ ಗೂಗಾಡೆ ಹಾಗೂ ಎಲ್ಲಾ ವಾಲ್ಮೀಕಿ ಸಮಾಜದ ಮುಖಂಡರು ಮಹಿಳೆಯರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ.ಶರ್ಮಾ ಬೆಳಗಾವಿ.