ಜೀವನದ ಪಕ್ವಕ್ಕಾಗಿ ಸಹನೆ ತಾಳ್ಮೆ ಬೇಕು ಭಗವದ್ಗೀತೆ.

ಬಾಗಲಕೋಟೆ ಏಪ್ರಿಲ್.28

ಅನುಭವದಲ್ಲಿ ಅಮೃತವಿದೆ ಸತ್ವವಿದೆ ಬದಲಾದ ಸನ್ನಿವೇಶದಲ್ಲಿ ಎಲ್ಲವು ಅವಸರವೇ ನನ್ನಾದಾರಿತ ಜೀವನದಲ್ಲಿ ಸೋಮಾರಿತನ ತೋರದೆ ತಿಳಿದೋ ತಿಳಿಯದೇನೋ ತಪ್ಪು ಮಾಡದೆ ನನ್ನ ಸಾಮರ್ಥ್ಯದ ಅರಿವಿನಿಂದ ನನ್ನ ಬಾಸವಹಿಸಿದ ಕೆಲಸಕ್ಕೆ ಅನರ್ಹನಾಗದಂತೆ ನಿಷ್ಠೆಯಿಂದ ದುಡಿದಿದ್ದೇನೆ ಅದೇಕೋ ನನ್ನನ್ನು ಗುರುತಿಸುವಲ್ಲಿ ನನ್ನ ಬಾಸ ಕಿವಿಗೋಡುತ್ತಿಲ್ಲ ನನ್ನ ಸುತ್ತಮುತ್ತ ಇದ್ದುಕೊಂಡು ಕಿವಿಚುಚ್ಚುವ, ಸೋಮಾರಿತನ ದಿಂದ ಚಾಳಿ ಹೇಳುವ ಹೊಗಳು ಭಟ್ಟರಿಗೆ ಕಾಲ ಕಾಲಕ್ಕೆ ಸಿಗುವ ಮನ್ನಣೆ ನೋಡಿಕೊಂಡು ಸುಮ್ಮನಿರದ ಮನಸ್ಥಿತಿ ಒಳಗೊಳಗೆ ನೊಂದುಕೊಂಡು ನನ್ನ ಸಹನೆಗೂ ಒಂದು ಮಿತಿ ಇದೆ, ನನ್ನ ಪ್ರತಿಭೆಗೆ ಬೆಲೇನೆ ಇಲ್ವಾ ಎಂದು ಜಿಗುಪ್ಸೆಗೊಂಡು ಸಹವಾಸದಿಂದ ದೂರ ಇದ್ದು ಬಿಡಬೇಕೆಂಬುವ ಮನದ ನುಡಿ ಪ್ರತಿ ಯೊಬ್ಬರಲ್ಲಿಯ ಸಹಜ ಗುಣ ಎಲ್ಲರಗೂ ಜೀವನದಲ್ಲಿ ಬರುವ ಹತಾಸೆಯ ಗುಣಗಳು ಹೌದು, ಅದು ಸತ್ಯವೂ ಕೂಡಾ ಇಂಥ ಸನ್ನಿವೇಶ ಬರಲು ಕಾರಣ ಜೀವನದಲ್ಲಿ ನಾವಂದು ಕೊಂಡಂತೆ ಆಗದಿರುವುದೇ ಇದಕ್ಕೆ ಕಾರಣ ಹಾಗಂತ ಅವರವರ ನೀರೀಕ್ಷೆ, ಬಯಕೆ ತಪ್ಪಲ್ಲ ಅದಕ್ಕೆ ಹಿರಿಯರ ವಾಣಿಯಂತೆ ತಾಳಿದವನು ಬಾಳಿಯಾನು ಎಂಬಂತೆ ಈ ಮಾತಿನ ಹಿಂದೆ ಅನುಭವವು ಇದೆ ಅಮೃತತ್ತ್ವವು ಇದೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಹಾಗೂ ಅನೇಕ ಅನುಭಾವಿ ಹಿರಿಯ ಶರಣರು ಹೇಳಿದಂತೆ ಸಮಯಕ್ಕೆ ಸರಿಯಾಗಿ ಇಂಥದ್ದೆ ಸಿಗಬೇಕು ಎನ್ನುವ ಹಠ ಸಲ್ಲದು ಹಾಗಂತ ನೀರೀಕ್ಷೆನು ತಪ್ಪಲ್ಲ ಮನುಷ್ಯ್ ಬಯಸಿದ್ದು ಸಿಗದೆ ಇದ್ದಾಗ ಹತಾಷೆ, ಆಕ್ರೋಶ ಸಹಜ ಗುಣ ಇದಕ್ಕೆ ಪ್ರಾಮಾಣಿಕ ದುಡಿಮೆ ಶ್ರಮ ನಿರಂತರವಾಗಿದ್ದು ಕಷ್ಟದಲ್ಲಿ ತಾಳ್ಮೆ ನಷ್ಟದಲ್ಲಿ ಸಹನೆ ಬರುವ ಪ್ರಸಂಗಗಳನ್ನು ಜಾಣ್ಮೆಯಿಂದ್ ಎದುರಿಸಬೇಕು ಯಶಸ್ಸು ನಮ್ಮದಾಗುತ್ತೆ ರೈತ ಭೂಮಿಗೆ ಬೀಜ ಬಿತ್ತಿ ಬೆಳೆ ಬರುವವರೆಗೆ ಹೇಗೆ ಕಾಯುತ್ತನೋ ಹಾಗೆ ಜೀವನದ ಕೃಷಿ ಭೂಮಿಯಲ್ಲಿ ತಾಳ್ಮೆ, ಸಹನೆ, ಜಾಣ್ಮೆ ಅತ್ಯಾವಶ್ಯಕ ಕಾಲ ಪಾಕ್ವವಾದಾಗ ಎಲ್ಲವು ಸಾಕ್ವವಾಗುವವು.

ರಾಜ್ಯ ಮಟ್ಟದ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಯಮನೂರ.ಸಿ.ಹಲಗಿ. ಶಿರೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button