ಬೀರು ಬಿಸಲಿಗೆ ತತ್ತರಿಸುತ್ತಿರುವ ಜಾನುವಾರುಗಳಿಗೆ ನೆರಳಿನ ಶೇಡ್ ವ್ಯವಸ್ಥೆಗೆ ರೈತರ ಮನವಿ.

ಕೂಡ್ಲಿಗಿ ಮೇ.01

ಬರಗಾಲ ಪೀಡಿತ ಪ್ರದೇಶಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಸೌಲಭ್ಯ ದೊರಕಿಸುವಂತೆ ಈಗಾಗಲೇ ರಾಜ್ಯ ಸರ್ಕಾರ ಆದೇಶಿಸಿದೆ. ಅದರಂತೆ ಕೂಡ್ಲಿಗಿ ತಾಲೂಕಿನ ಗಂಡ ಬೊಮ್ಮನಹಳ್ಳಿ ಗೊ ಶಾಲೆಗಳಲ್ಲಿ ಗೋವುಗಳಿಗೆ ಮೇವು ನೀರು ಕೊಡುತ್ತಾರೆ ಆದರೆ ಕೆಲವು ಹಸುಗಳಿಗೆ ನೆರಳಿನ ವ್ಯವಸ್ಥೆ ಮಾತ್ರ ಇಲ್ಲವಾಗಿದೆ. ಆದರೆ ಈ ಬಾರಿಯ ಬಿಸಿಲು ಹೆಚ್ಚಾಗಿದೆ ಸರಿ ಸುಮಾರು 38 ರಿಂದ 44 ಡಿಗ್ರಿ ಸೆಲ್ಸಿಯಸ್ ಗೆ ತಲುಪುತ್ತಿದೆ. ಪ್ರತಿ ದಿನ ಇಲ್ಲಿಗೆ 2000 ಕ್ಕೂ ಹೆಚ್ಚು ಜಾನುವಾರುಗಳು ಆಗಮಿಸುತ್ತವೆ. ಇಲ್ಲಿ ಕಡಿಮೆ ಶೇಡ್‌ಗಳನ್ನು ನಿರ್ಮಿಸಲಾಗಿದ್ದು ಒಂದರಲ್ಲಿ ಗರಿಷ್ಠ 80 ದನ ಆಶ್ರಯ ಪಡೆಯಬಹುದು.

ಉಳಿದ ಜಾನುವಾರುಗಳು ಸುಡು ಬಿಸಿಲಲ್ಲಿರುವಂತಾಗಿದೆ. ಜಾನುವಾರು ಮಾಲೀಕರು ಶೇಡ್ ಕೊರತೆ ಕಂಡು ತೆಂಗಿನ ಗರಿಯಿಂದ, ಮುಳ್ಳಿನ ಗಿಡಗಳಿಗೆ ಹುಲ್ಲು ಹೊದಿಸಿ ನೆರಳಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗೋಶಾಲೆಗಳಲ್ಲಿ ಶೇಡ್‌ಗಳನ್ನು ನಿರ್ಮಿಸಿದ್ದಾರೆ. ಇನ್ ಕೆಲವು ಜಾನುವಾರುಗಳಿಗೆ ನೆರಳು ಕಲ್ಪಿಸುವ ಕಾರ್ಯ ಇಂದಿಗೂ ಸಮರ್ಪಕವಾಗಿ ಮಾಡಿಲ್ಲ. ಇಲ್ಲಿ ನೀರಿನ, ಮೇವಿನ ವ್ಯವಸ್ಥೆ ಸರಿಯಾಗಿ ಇದೆ, ತುಂಬಾ ಬಿಸಿಲು ಇರುವುದರಿಂದ ರೈತರೇ ಇಲ್ಲಿ ತೆಂಗಿನ ಗರಿ ಇಂದ ದನಗಳಿಗೆ ನೆರಳಿನ ವ್ಯವಸ್ಥೆ ಮಾಡಿ ಕೊಂಡಿರುತ್ತಾರೆ‌.

ಇನ್ನೂ ಕೆಲವು ರೈತರು ಮರದ ನೆರಳಿಗೆ ದನಗಳನ್ನು ಕಟ್ಟಿ ಕೊಂಡಿರುತ್ತಾರೆ ತಾಲೂಕಾ ಅಧಿಕಾರಿಗಳು ದನಗಳಿಗೆ ನೆರಳು ವ್ಯವಸ್ಥೆ ಮಾಡಿಸ ಬೇಕೆಂದು ರೈತರು ಮನವಿ ಮಾಡಿದ್ದಾರೆ.ಪಕ್ಕದ ಜಿಲ್ಲೆಯಿಂದ ಹಸುಗಳು ಬರುತ್ತವೆ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತಳವಾರಳ್ಳಿ ಗ್ರಾಮದಿಂದ 200 ಜಾನುವಾರಗಳು ಗಂಡ ಬೊಮ್ಮನಹಳ್ಳಿ ಗೋ ಶಾಲೆಗೆ ಬಂದಿರುತ್ತವೆ. ಹಲವು ವರ್ಷಗಳಿಂದ ಗಂಡ ಬೊಮ್ಮನಹಳ್ಳಿ ಗೋ ಶಾಲೆಗೆ ಬಂದಿರುತ್ತವೆ. ತಳವಾರಳ್ಳಿ ಗ್ರಾಮದ ನಿವಾಸಿಯಾದ ರೈತ ಕರಿಬಸಪ್ಪ, ನಾಗೇಶ ಮಾತನಾಡಿ. ಗಂಡ ಬೊಮ್ಮನಹಳ್ಳಿ ಗೋ ಶಾಲೆಗೆ ಮೊದಲು ನಿಂದಲೂ ಕೂಡ ನಾವು ಬರಗಾಲದಲ್ಲಿ ಗಂಡ ಬೊಮ್ಮನಹಳ್ಳಿ ಗೋ ಶಾಲೆಗೆ ಬಂದಿರುತ್ತೇವೆ. ಇಲ್ಲಿ ನೀರಿನ ವ್ಯವಸ್ಥೆ ಇದೆ. ನಮ್ಮ ಮೊಳಕಾಲ್ಮೂರು ತಾಲೂಕಿನಲ್ಲಿ ನಾವು ಗೋ ಶಾಲೆಗೆ ಹೋಗ ಬೇಕೆಂದರೆ ದೂರ ಹೋಗ ಬೇಕಾಗುತ್ತದೆ ಅಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇರುವುದಿಲ್ಲ ಹಾಗಾಗಿ ನಾವು ಗಂಡ ಬೊಮ್ಮನಹಳ್ಳಿ ಗೋ ಶಾಲೆಗೆ ಬಂದಿರುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button