ಕರ್ತವ್ಯ ಲೋಪದಡಿ ಪಂಚಾಯತ ಸದಸ್ಯನ ಸದಸ್ಯತ್ವ ರದ್ದು ಮಾಡುವಂತೆ ಮನವಿ.
ಕೋಹಿನೂರ ಮೇ.03

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೋಹಿನೂರ ಗ್ರಾಮ ಪಂಚಾಯತ ವ್ಯಾಪ್ತಿಗೆ ಸಂಬಂಧಿಸಿದ ನರೇಗಾ ಯೋಜನೆಯಡಿ ಕಾಮಗಾರಿ ವಿಷಯ ಕುರಿತು ಸದಸ್ಯರಾಗಿರುವ ಶ್ರೀಮತಿ ರಾಜೇಶ್ರೀ ಗಂಡ ಹಿತಿವಂತ ಅಡೆಪ್ಪಗೊಳ ಇವರ ಜಾಬ್ ಕಾರ್ಡ ನಂಬರ 21364 ಆಗಿದ್ದು. ಇವರು ಸದಸ್ಯರಾಗಿ ಆಯ್ಕೆಯಾಗಿದ್ದಾಗಿನಿಂದ ಇಲ್ಲಿಯವರೆಗೆ ಸದರಿಯವರ ಖಾತೆಗೆ ಹಣ ಜಮಾ ಆಗಿರುತ್ತವೆ. ಕಾರಣ ಸಾರ್ವಜನಿಕರಿಗೆ ನರೇಗಾ ಯೋಜನೆಯ ಕೆಲಸ ಮಾಡಿಸಿ ಸಂದಾಯ ಮಾಡಬೇಕಾದ ಹಣ ಇವರು ಸರಕಾರದ ನಿಯಮಗಳನ್ನು ಪಾಲಿಸದೇ ಆ ಹಣವನ್ನು ತಮ್ಮ ಸ್ವಂತ ಖಾತೆಗೆ ಜಮೆ ಮಾಡಿಕೊಂಡಿದ್ದು ಇದು ಸರಕಾರದ ನಿಯಮ ದುರುಪಯೋಗವಾಗಿದ್ದು, ಸರಕಾರದ ದುರುಪಯೋಗವಾದ ಹಣವನ್ನು ಸದರಿಯವರಿಂದ ಖಾತೆಗೆ ಜಮಾ ಆದಂತಹ ಹಣವನ್ನು ಹಿಂತಿರುಗಿಸಿ ಪಡೆದು ಸದರಿ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡಿ ಸಂಬಂಧಿಸಿದ ಅಧಿಕಾರಿಗಳು ಇವರ ಮೇಲೆ ಕಾನುನೂ ರೀತಿಯ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲೂಕಾ ಪಂಚಾಯತ್ ಬಸವಕಲ್ಯಾಣ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶಿವಾಜಿ ಲಕ್ಷ್ಮಣ.ಮಲ್ಲು ಆಲಮೇಲ.ಇತರರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ.