ಬಾವಿಯಲ್ಲಿ ಕಾಲು ಜಾರಿ ಬಿದ್ದಿರುವ ಬೆಕ್ಕು ಕಾಪಾಡಿದ ಅಥಣಿ ಅಗ್ನಿಶಾಮಕ ದಳ.

ಕೋಹಳ್ಳಿ ಮೇ.04

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಬೆಕ್ಕು ಕಾಲು ಜಾರಿ ಸಿದ್ರಾಯ.ಮಲ್ಲಪ್ಪ. ಮೋಟಗಿ ಎಂಬುವರ ಬಾವಿಯಲ್ಲಿ ಬಿದ್ದಿರುವ ಘಟನೆ ದಿನಾಂಕ 03/05/2024 ರಂದು ಮದ್ಯಾಹ್ನದ ಸಮಯ 03:30ಕ್ಕೆ ಶುಕ್ರವಾರ ನಡೆದಿದೆ. ತಕ್ಷಣ ಊರಿನ ಗ್ರಾಮಸ್ಥರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿಧಾಕ್ಷಣ ಅದೇ ಹಳ್ಳಿಯಲ್ಲಿ ಅಡವಿ ನರಿ ರಕ್ಷಣಾ ಮಾಡಿ ತೇರಳುವ ಸಂದರ್ಬದಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ ಊರಿನ ಗ್ರಾಮಸ್ಥರು ಬೆಕ್ಕು ಹೊರ ತೆಗೆಯಲು ಸಹಾಯ ಮಾಡಲು ಕೇಳಿ ಕೊಂಡ ಮೆರೆಗೆ ಜಲವಾಹನ ಮತ್ತು ಸಿಬ್ಬಂದಿಯವರು ರಕ್ಷಣಾ ಸಾಮಗ್ರಿಗಳೊಂದಿಗೆ ಶ್ರೀ ಮಲ್ಲಿಕಾರ್ಜುನ .ಎಂ.ಬಂದಾಳ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ರವರ ನೇತೃತ್ವದಲ್ಲಿ ಹಾಗೂ ಸಿಬ್ಬಂದಿಯವರು ಒಳಗೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ತೆರೆದ ನೀರಿರುವ ಬಾವಿಯಲ್ಲಿ ಅಂದಾಜು 65 ರಿಂದ 70 ಅಡಿ ಆಳದಲ್ಲಿ ಬೆಕ್ಕು ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವುದನ್ನು ಸುಮಾರು 01 ಗಂಟೆ 00 ನಿಮಿಷಗಳ ಕಾಲ ಕಷ್ಟಕರ ಕಾರ್ಯಚರಣೆಯನ್ನು ಮಾಡಿ ಬೆಕ್ಕನ್ನು ಜೀವಂತವಾಗಿ ರಕ್ಷಣೆ ಮಾಡಲಾಯಿತು.

ಈ ರಕ್ಷಣಾ ಕಾರ್ಯಚರಣೆ ಭಾಗವಹಿಸಿದ ಸಿಬ್ಬಂದಿಯ ವಿವರಗಳು 01) ಮಲ್ಲಿಕಾರ್ಜುನ .ಎಂ.ಬಂದಾಳ 02) ಮಲ್ಲನಗೌಡ. ನಾಯಕ್ 03)ಸಂಜೀವ.ಚೌಗಲಾ 04) ರವೀಂದ್ರ.ಸಂಗಮ 05) ಸಚಿನ ಹಲ್ಯಾಳ 06) ಸಂತೋಷ್ ಚೌಗುಲಾ ಊರಿನ ಗ್ರಾಮಸ್ಥರು ಸೇರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button