ಮೌಲಾನ ಅಬ್ದುಲ್ ಕಲಾಂ ಅಜಾದ್ ಅವರ ಜನ್ಮ ಹಾಗೂ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿಯ – ನಿಮಿತ್ತವಾಗಿ ಗಣ್ಯ ಮಾನ್ಯರಿಂದ ಶುಭಾಶಯಗಳು.
ಬಿಂಜಲಬಾವಿ ನ.11

ತಾಳಿಕೋಟೆ ತಾಲೂಕಿನ ಬಿಂಜಲಬಾವಿ ಗ್ರಾಮದ ಸರ್ಕಾರಿ ಉರ್ದು UBLPS ಶಾಲೆ. ಮೌಲಾನ ಅಬ್ದುಲ್ ಕಲಾಂ ಆಜಾದ್ ಅವರು ಜನ್ಮ ದಿನದ ಶುಭಾಶಯಗಳು ಕೋರಿ ಹಾಗೂ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿಯ ನಿಮಿತ್ಯವಾಗಿ ಮಧ್ಯಾಹ್ನ ಬಿಸಿ ಊಟದ ಜೊತೆಗೆ ಮಕ್ಕಳಿಗೆ ರಾಗಿ ಮುದ್ದೆ ತತ್ತಿ ಅನ್ನ ಸಾಂಬಾರ್ ಊಟವನ್ನು ಮಾಡಿಸಿದರು. ಈ ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟದ ನಿಮಿತ್ಯವಾಗಿ ಮಕ್ಕಳನ್ನು ವಾರದಲ್ಲಿ ನಾಲ್ಕು ದಿನಗಳ ಕಾಲ ಮಧ್ಯಾಹ್ನ ಮಕ್ಕಳಿಗೆ ಬಿಸಿ ಊಟದ ಜೊತೆ ಬೇರೆ ಬೇರೆ ರೀತಿಯಲ್ಲಿ ಅಡುಗೆಯನ್ನು ಮಾಡಿ ಮಕ್ಕಳಿಗೆ ಊಟವನ್ನು ಮಾಡಿಸುತ್ತಾರೆ. ಈ ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಗುರು ಮಾತೆಯವರು ಊರಿನ ಗಣ್ಯ ವ್ಯಕ್ತಿಗಳು ಸೇರಿದಂತೆ ಅಡುಗೆಯ ಸಿಬ್ಬಂದಿಗಳಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ

