ಮುಚ್ಚದಿರುವ ಕೊಳವೆ ಬಾವಿಗೆ ಗ್ರಾಮ ಲೆಕ್ಕಿಗರು – ಪಿಡಿಓಗಳೇ ನೇರ ಹೊಣೆ.
ಇಂಡಿ ಮೇ.15

ಇಂಡಿ ತಾಲೂಕಿನಾದ್ಯಂತ ರೈತರು ಹಾಗೂ ಸಾರ್ವಜನಿಕರು ಕೊಳವೆ (ಬೋರ್ ವೆಲ್) ಬಾವಿಗಳು ಮುಚ್ಚದೇ ಇದ್ದರೆ ಗ್ರಾಮ ಲೆಕ್ಕಿಗರು ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡಂಗರು ಹೊಡೆದು ಅದನ್ನು ಮುಚ್ಚಿಸಬೇಕು. ಒಂದು ವೇಳೆ ಮುಚ್ಚದೆ ಇದ್ದರೆ ಗ್ರಾಮ ಲೆಕ್ಕಿಗರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನೇರ ಹೊಣೆಗಾರರು ಆಗುತ್ತಾರೆ. ಅಂತವರ ವಿರುದ್ದ ಶಿಸ್ತು ಕಾನೂನು ಕ್ರಮ ಜರಗಿಸಲಾಗುವುದು ಎಂದು ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಮಂಗಳವಾರ ಪಟ್ಟಣದ ಮಿನಿ ವಿಧಾನ ಸೌಧದ ತಹಸೀಲ್ದಾರ ಕಚೇರಿಯ ಸಭಾ ಭವನದಲ್ಲಿ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ತಾಲೂಕಾ ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳ ಕುಡಿಯುವ ನೀರಿನ ಕುರಿತು ನಡೆದ ಟಾಸ್ಕ ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು.ನಮ್ಮ ತಾಲೂಕಿನಲ್ಲಿ ಕೊಳವೆ ಬಾವಿಗಳ ಪ್ರಕರಣಗಳು ಮರುಕಳಿಸ ಬಾರದು. ಬೊರವೆಲ್ ಕೊರಿಯವರು ಕಡ್ಡಾಯವಾಗಿ ಗ್ರಾಪಂ ದಲ್ಲಿ ಎನ್.ಓ.ಸಿ ತೆಗೆದು ಕೊಳ್ಳಬೇಕು. ಒಂದು ವೇಳೆ ತೆಗೆದು ಕೊಳ್ಳದಿದ್ದರೆ ಅಂತವರ ವಿರುದ್ದ ಎಫ್.ಆರ್.ಆಯ್ ದಾಖಲಿಸಿ ಎಂದರು.ನೀರಿನ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳು ವಾಚ್ ವಾರ್ಡ ಸರಿಯಾಗಿ ಕೆಲಸ ಮಾಡಬೇಕು ಎಂದರು.ರೈತರು ನೀರನ್ನು ಕುಡಿಯಲಿಕ್ಕೆ ಮಾತ್ರ ಬಳಸಬೇಕು. ಕೃಷಿಗೆ ಉಪಯೋಗಿಸ ಬಾರದು ಒಂದು ವೇಳೆ ರೈತರು ಅಕ್ರಮವಾಗಿ ಕಾಲುವೆಗಳು ಅಗೆದರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಭೆಕು ಎಂದರು.ವೇದಿಕೆಯ ಮೇಲೆ ತಾಪಂ ಇ.ಒ ನೀಲಗಂಗಾ ಉಪಸ್ಥಿತರಿದ್ದರು.ಹೆಸ್ಕಾ ಎ.ಇ.ಇ ಎಸ್.ಆರ್. ಮೆಂಡೆಗಾರ, ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ, ತೋಟಗಾರಿಕೆ ಸಹಾಯಕ ನಿರ್ದೇಶಕ ಎಚ್.ಎಸ್. ಪಾಟೀಲ, ಪಿಡಬ್ಲೂಡಿ ದಯಾನಂದ ಮಠ, ಸಿದ್ದರಾಮ ಮುಜಗೊಂಡ, ಬಿ.ಎಚ್. ಕನ್ನೂರ, ಪಿಡಿಒ ಗಳಾದ ಉಮೇಶ ಹೂಗಾರ, ಬಸವರಾಜ ಬಬಲಾದ, ಜಬ್ಬಾರ ಹಳ್ಳಿ, ಎಚ್.ಎಸ್. ಗುನ್ನಾಪುರ, ವೀಣಾ ಕೆ ಮತ್ತಿತರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ. ಇಂಡಿ.