ಕೊಟ್ಟೂರಿನಲ್ಲಿ ಬಾರಿ ಗಾಳಿ ಧೂಳು ಮಳೆ.

ಕೊಟ್ಟೂರು ಮೇ.15

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ 15 ಮೇ 2024 ರಂದು 4 ಗಂಟೆಗೆ ಮಳೆ ಗಾಳಿ ಧೂಳಿನಿಂದ ಕೊಟ್ಟೂರು ಗೌರ್ಮೆಂಟ್ ಬಸ್ ಸ್ಟ್ಯಾಂಡ್ ಕೆರೆಯಂತಾಗಿದೆ.ಇದರ ಬಗ್ಗೆ ಒಂದು ವರ್ಷದ ಕೆಳಗೆ ನೂತನವಾಗಿ ಶಾಸಕರಾದಂತಹ ಕೆ ನೇಮಿರಾಜ್ ನಾಯಕ್ ರವರನ್ನು ಪ್ರಶ್ನೆ ಮಾಡಿದರೆ ಅವರೇ ಹೌದು ಈ ಈ ಬಸ್ ಸ್ಟ್ಯಾಂಡ್ ಮಳೆ ನೀರಿನಿಂದ ಕೆರೆಯಂತಾಗಿದೆ ಎಂದು ಇಂದಿನ ಶಾಸಕರನ್ನು ಆಡಿ ಕೊಂಡಿದ್ದರು ಆದರೆ ಇನ್ನು ಮುಂದೆ ನನ್ನ ಕೆಲಸ ಮಾಡುತ್ತೇನೆ ನಾನು ಒಳ್ಳೆಯದನ್ನೇ ಕೆಲಸ ಕೈಗೊಳ್ಳುತ್ತೇನೆ ಎಂದು ಹೇಳಿ ವರ್ಷವಾದರೂ ಬಸ್ ಸ್ಟ್ಯಾಂಡು ಇಲ್ಲ ಆಸ್ಪತ್ರೆಯ ಅಭಿವೃದ್ಧಿ ಇಲ್ಲ ಎಂದು ಸಾರ್ವಜನಿಕರು ಪಟ್ಟಣದಲ್ಲಿ “ಪಿಸು” ಗುಟ್ಟುವರಂತೆ ಹಾಗೇನೆ ನಾಮಕಾವಸ್ಥೆ ಮಾತ್ರಕ್ಕೆ ಶಾಸಕರಾಗಿ ಕೊಟ್ಟೂರಿನಲ್ಲಿ ಆರಿಸಿ ಬರುತ್ತಾರೆ.

ಬಂದವರು ಯಾವುದೇ ಅಭಿವೃದ್ಧಿ ಕಾಣದಂತೆ ಕೊಟ್ಟೂರಿನ ಸಾರ್ವಜನಿಕರು ಕಷ್ಟ ನೋವುಗಳನ್ನು ಕೇಳುವರೇ ಇಲ್ಲ ಎಂದು ಜನರು ತಮ್ಮಷ್ಟಕ್ಕೆ ತಾವೇ ಮಾತನಾಡಿ ಕೊಳ್ಳುತ್ತಾರೆ ಎಂದು ಕೆಲ ಸಂಘಟನಾ ಮುಖಂಡರು ನಮ್ಮ ಸುದ್ದಿ ವಾಹಿನಿ ಯೊಂದಿಗೆ ಮಾತನಾಡಿದರು ಮತ್ತು ಸಿಪಿಎಡ್ ಆವರಣದ ಪಕ್ಕದಲ್ಲಿರುವ ದೀಪಾ ರೆಸ್ಟೋರೆಂಟ್ ನಲ್ಲಿ ಮಳೆ ಗಾಳಿಯಿಂದ ಮರಗಳು ಬೈಕ್ ಆಟೋ ಮೇಲೆ ಬಿದ್ದಿವೆ ಮತ್ತು ಪೆಟ್ರೋಲ್ ಬಂಕ್ ನ ತಗಡುಗಳು ಬಿದ್ದಿವೆ ಒಟ್ಟಿನಲ್ಲಿ ಕೊಟ್ಟೂರಿನಲ್ಲಿ ಗಾಳಿ ಧೂಳಿನಿಂದ ಮುಂಗಾರಿನ ಮಳೆ ಬಂದಿರುವುದು ನೋಡಬಹುದು ಹೋಟೆಲ್ ಮಂಜಣ್ಣ ಹೇಳುವಂತೆ ನಾನು ಎಂದು ಕಂಡಿಲ್ಲ ಇಂತಹ ಗಾಳಿಯನ್ನು ನನ್ನ ಹೋಟೆಲ್ ನಲ್ಲಿರುವ ಕುರ್ಚಿಗಳು ಗಾಳಿಗೆ ಓಡಿದವು ತದನಂತರ ನಾನು ಅವುಗಳನ್ನು ತೆಗೆದುಕೊಂಡು ಬಂದು ಎಂದು ಕಾಣದ ಗಾಳಿ ಧೂಳನ್ನು ನಾನೆಂದು ಕಂಡೆ ಇಲ್ಲ ಎಂದು ಹೇಳಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ. ಕೊಟ್ಟೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button