ಲಿಂ, ಡಾ. ಮಹಾಂತ ಶ್ರೀಗಳ 6 ನೆಯ. ಶರಣೋತ್ಸವ ಕಾರ್ಯಕ್ರಮದಲ್ಲಿ – ಬಾಲ್ಕಿ ಶ್ರೀಗಳ ಅಭಿಪ್ರಾಯ.

ಹುನಗುಂದ ಮೇ.18

ನಾವು ಲಿಂಗಾಯತರು ವಚನ ಸಾಹಿತ್ಯದಿಂದ ದೂರ ಸರಿಯುತ್ತಿದ್ದು. ಹೀಗಾಗಿ ನಾವು ದಿಕ್ಕು ತಪ್ಪುತ್ತಿದ್ದೇವೆ, ವಚನ ಸಾಹಿತ್ಯದಲ್ಲಿರುವ ಅಂಶಗಳನ್ನು ಅಳವಡಿಸಿ ಕೊಂಡು ಮುನ್ನೆಡೆಯಬೇಕು ಎಂದು ಬಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ ದೇವರು ಹೇಳಿದರು.ಗುರುವಾರ ಪಟ್ಟಣದ ಬಸವ ಮಂಟಪದಲ್ಲಿ  ಶರಣ ಸಿದ್ದಾಂತ ವಿದ್ಯಾಪೀಠದ ೫೩ನೇ ಶಿವಾನುಭವ  ತರಬೇತಿ ಶಿಬಿರ ಹಾಗೂ ಮಹಾಂತ ಶಿವಯೋಗಿಗಳ ಆರನೇ ಶರಣೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು,ಶರಣ ಸಿದ್ದಾಂತದ ವಿದ್ಯಾ ಪೀಠದ ಮೂಲಕ ನಾಡಿನಾಧ್ಯಂತ ಸಂಚರಿಸಿ ಬಸವಾದಿ ಶರಣರ ವಿಚಾರಗಳನ್ನು ಪ್ರಚಾರ ಮಾಡಿದ ಶ್ರೇಯಸ್ಸು ಚಿತ್ತರಗಿ ಸಂಸ್ಥಾನ ಮಠದ ಲಿಂ,ಡಾ.ಮಹಾಂತ ಶ್ರೀಗಳಿಗೆ ಸಲ್ಲುತ್ತದೆ. ಧರ್ಮ ಗುರು ಬಸವಣ್ಣನವರು, ವಚನಗಳೇ ನಮ್ಮಗಳ ಧರ್ಮ ಗ್ರಂಥ ಎಂದು ಎದೆಗಾರಿಕೆಯಿಂದ ಹೇಳಿದ ಬಾಲ್ಕಿ ಮಠ ಬಿಟ್ಟರೇ ಇದೇ ರೀತಿ ನಡೆದು ಕೊಂಡ ಮಠನೇ ಇಳಕಲ್ಲ ಮಠವಾಗಿದೆ ಎಂದರು. ವಿಜಯ ಮಹಾಂತೇಶ  ಸಂಘ  ಹಾಗೂ ಬಸವೇಶ್ವರ ವೀರಶೈವ ವಿದ್ಯಾವರ್ಧಕ  ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಹಾಂತ ಜೋಳಿಗೆ ಮೂಲಕ ದುಚ್ಚಟಗಳನ್ನು ಜೋಳಿಗೆ ಹಾಕಿ ಎನ್ನುವ ಸಂದೇಶವನ್ನು ನಾಡಿಗೆ ನೀಡಿದವರು ಇಳಕಲ್ಲದ ಲಿಂ,ಡಾ.ಮಹಾಂತ ಶ್ರೀಗಳು ಕಾರ್ಯ ಮಾದರಿಯಾಗಿದೆ ಎಂದರು.ಶಿವಾನುಭವ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ಧ್ವಜಾರೋಹವನ್ನು ಪಟ್ಟಣದ ಅಕ್ಕನ ಬಳಗದ ಅಧ್ಯಕ್ಷೆ ದೊಡ್ಡಮ್ಮ ಹವಾಲ್ದಾರ ನೆರವೇರಿಸಿದರು. ಅಧ್ಯಕ್ಷತೆಯನ್ನು ಶಿರೂರಿನ ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ ವಹಿಸಿಕೊಂಡಿದ್ದರು, ರಾಮದುರ್ಗದ ಸಿದ್ದಣ್ಣವರ ಲಂಗೋಟಿ ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಮರೆಗುದ್ದಿಯ ಗುರು ಮಹಾಂತ ಶ್ರೀ, ಜಮಖಂಡಿಯ ಬಸವರಾಜ ದೇವರು, ಬಸವೇಶ್ವರ ವೀರಶೈವ ವಿದ್ಯಾವರ್ಧಕ  ಸಂಘದ ಕಾರ್ಯದರ್ಶಿ ಮಹೇಶ ಅಥಣಿ, ನಿರ್ದೇಶಕ ಗುರುಬಸವ ಸೂಳೇಭಾವಿ, ಡಾ.ಮಹಾಂತೇಶ ಕಡಪಟ್ಟಿ,ಶಿವಾನಂದ ಕಂಠಿ ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button