ಮಧ್ಯಪಾನ ಸೇವಿಸಿದ ವೀರೇಶ್ ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಿ – ಶೈನಜ್ ಆಕ್ರೋಶ.

ತಳಕಲ್ ಮೇ.24

ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಮಾಜುಮಾದಹಳ್ಳಿ ಗ್ರಾಮ ಪಂಚಾಯತಿ ಮುಂದೆ ತಳಕಲ್ ಜನರ ನರೇಗಾ ಯೋಜನೆ ಅಡಿಯಲ್ಲಿ ಕೂಲಿ ಮಾಡಿದ ಕಾರ್ಮಿಕರಿಗೆ ಕಡಿಮೆ ಹಣ ನೀಡುತ್ತಿರುವುದರ ವಿರುದ್ಧ ಜನರು ನಾವು ಮಾಡಿದ ಕೆಲಸವನ್ನು ಸರಿಯಾದ ರೀತಿಯಲ್ಲಿ ಇಂಜಿನಿಯರ್ ಮೆಜರ್ಮೆಂಟ್ ಮಾಡದೆ ಇಲ್ಲಿನ ಇಂಜಿನಿಯರ್ ಸರಿ ಸುಮಾರು ರಾತ್ರಿ ಸಮಯದಲ್ಲಿ ಅಂದರೆ 7:30 ರಿಂದ 8:00 ಗಂಟೆಯ ಸಮಯದಲ್ಲಿ ಮೆಜರ್ಮೆಂಟ್ ಮಾಡಲಿಕ್ಕೆ ಹೋಗಿ ಜನರು ಕೂಲಿ ಮಾಡಿದ ಕೆಲಸವನ್ನು ಜನರ ಮುಂದೆ ಮೆಜರ್ಮೆಂಟ್ ಮಾಡದೆ ಬೇಕಾಬಿಟ್ಟಿಯಾಗಿ ವೀರೇಶ್ ಇಂಜಿನಿಯರ್ ರಾದ ಮೆಜರ್ಮೆಂಟು ಮಾಡಿ ಕೊಂಡು ಬಂದು ಜನರಿಗೆ ಸರಿಯಾದ ಕೂಲಿಯ ಮೆಜರ್ಮೆಂಟ್ ಮಾಡದೆ ಕಡಿಮೆ ಕೂಲಿ ಹಣ ನೀಡುವುದರ ವಿರುದ್ಧ ಧರಣಿ ಸತ್ಯಾಗ್ರಹ ಮಾಡಲಾಯಿತು.

ಈ ಸಮಯದಲ್ಲಿ ನೂರಾರು ಮಹಿಳೆಯರು ಜಮಾಯಿಸಿ ಮಾನ್ಯ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳಾದ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು, ಈ ಸಂದರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಕಾರ್ಯಕರ್ತರಾದ ಶೈನಜಾ ಮಧ್ಯಪಾನ ಸೇವನೆ ಮಾಡಿ ಕೂಲಿ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿರುವ ಇಂಜಿನಿಯರ್ ವಿರುದ್ಧ ಕೂಲಿ ಕಾರ್ಮಿಕರ ಪರವಾಗಿ ಆಕ್ರೋಶ ವ್ಯಕ್ತಪಡಿಸಿದರು,

ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರಗಳಾದ ಶಬೀರ್ ಭಾಷಾ ಹುಲಿಗೆಮ್ಮ ಪ್ರತಿನಿಧಿ ಮಹಾಬಲೇಶ, ಇಲಾಜ್ ಕೊಟ್ರೇಶ್ ಪ್ರಶಾಂತ್ ಕರಿಬಸಪ್ಪ, ಲಕ್ಷ್ಮಿ, ಮಮತಾಶ್ರೀ, ರೇಣುಕಾ,ಮಂಜುಳಾ, ವಿಜಯಲಕ್ಷ್ಮಿ, ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆಯ ಬಂದೋಬಸ್ತಿನೊಂದಿಗೆ ಮನವಿ ಪತ್ರ ನೀಡಲಾಯಿತು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button