ಕಳ್ಳರನ್ನು ಬೇಗನೆ ಬಂಧಿಸಿ ಪಟ್ಟಣದಲ್ಲಿ ಕಳ್ಳರಿಂದ ಭಯ ಭೀತಿಯನ್ನು ಹೋಗಲಾಡಿಸಿ – ಹೆಚ್. ವೀರಣ್ಣ.

ಕೂಡ್ಲಿಗಿ ಮೇ.24

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಪೊಲೀಸ್ ಉಪಾಧೀಕ್ಷಕರು ಉಪ-ವಿಭಾಗ ಕೂಡ್ಲಿಗಿ ಇವರಿಗೆ ಭಾರತ ಕಮ್ಯುನಿಸ್ಟ್ ಪಕ್ಷದ ಮುಖಂಡರುಗಳಿಂದ ಕೂಡ್ಲಿಗಿ ಪಟ್ಟಣದಲ್ಲಿ ಹಗಲು ಸಮಯದಲ್ಲಿ ಸರಣಿ ಮನೆಗಳತನ ಯಥೇಚ್ಛವಾಗಿ ನಡೆಯುತ್ತಿರುವುದನ್ನು ಮುಖಂಡರುಗಳು ಪಟ್ಟಣದ ಸಾರ್ವಜನಿಕರು ಭಯ ಭೀತರಾಗಿರುವ ಕುರಿತು ಜನರಿಗೆ ರಕ್ಷಣೆ ನೀಡಿ ಎಂಬ ಉದ್ದೇಶವನ್ನು ಇಟ್ಟುಕೊಂಡು ಪಟ್ಟಣದ ಸರ್ಕಲ್ ಇನ್ಸ್ಪೆಕ್ಟರ್ ಆದ ವಿನಾಯಕ ರವರಿಗೆ ಮನವಿ ಪತ್ರವನ್ನು ಸಲ್ಲಿಸಿಲಾಯಿತು,ಕೆಲವು ದಿನಗಳಿಂದ ಕೂಡ್ಲಿಗಿ ಪಟ್ಟಣದಲ್ಲಿ ಹಗಲು ಸಮಯದಲ್ಲಿ ಕೆಲವು ಮನೆಗಳಲ್ಲಿ ಬೆಳ್ಳಿ, ಬಂಗಾರ ಆಭರಣಗಳು, ನಗದು ಹಣವನ್ನು ಧೋಚಿರುವುದು ತಿಳಿದ ವಿಷಯವಾಗಿರುವುದರಿಂದ ದಿನದಿಂದ ದಿನಕ್ಕೆ ಪಟ್ಟಣದಲ್ಲಿ ಹೆಚ್ಚುತ್ತಿರುವ ಸರಣಿ ಕಳ್ಳತನ ಆಗುತ್ತಿರುದನ್ನು ಖಂಡಿಸಿ ಕೂಡ್ಲಿಗಿ ಪಟ್ಟಣದ ಜನತೆಯು ಭಯ ಭೀತಿಯನ್ನು ಹೋಗಲಾಡಿಸಿ ಕಳ್ಳರನ್ನು ಆದಷ್ಟು ಬೇಗನೆ ಬಂಧಿಸಿ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಕಮ್ಯುನಿಸ್ಟ್ ಪಕ್ಷದ ಮುಖಂಡರಾದ ಎಚ್ ವೀರಣ್ಣ ಮಾತನಾಡಿದರು.ಈ ಸಂದರ್ಭದಲ್ಲಿ ಖಜಾಂಚಿಯಾದ ಪೆನ್ನಪ್ಪ ಇನ್ನೂ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button