ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಅದ್ದೂರಿ ಸ್ವಾಗತ.
ಹುನಗುಂದ ಮೇ.31

ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳನ್ನು ಹೂಗುಚ್ಛ ನೀಡುವ ಮೂಲಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮಂಡಳಿ ಮತ್ತು ಶಿಕ್ಷಕರ ಬಳಗ ಅದ್ದೂರಿಯಾಗಿ ಸ್ವಾಗತಿಸಿದ ಘಟನೆ ಹುನಗುಂದ ಪಟ್ಟಣದ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದಲ್ಲಿ ನಡೆಯಿತು.ಶುಕ್ರವಾರ ಪಟ್ಟಣದ ವಿಜಯ ಮಹಾಂತೇಶ ವಿದ್ಯಾವರ್ಧಕ ಶಾಲೆಯಲ್ಲಿ ಪ್ರಸಕ್ತ ೨೦೨೪-೨೫ ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಆರಂಭೋತ್ಸವ ಕಾರ್ಯಕ್ರಮವನ್ನು ಕಳೆದ ಎರಡು ತಿಂಗಳಿನಿಂದ ಬೇಸಿಗೆ ರಜೆಯಲ್ಲಿ ಮಕ್ಕಳಿಲ್ಲದೆ ಬಣ ಗೂಡುತ್ತಿದ್ದ ಶಾಲೆಗಳು ಶುಕ್ರವಾರ ದಿಂದ ಶಾಲೆ ಆರಂಭವಾಗುತ್ತಿದ್ದಂತೆ ಮತ್ತೇ ಮಕ್ಕಳ ಕಲರವ ಶಾಲೆಯ ಆರಂಭೋತ್ಸವಕ್ಕೆ ಹೊಸ ಕಳೆ ಮೂಡಿ ಬಂದಿತು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಅರಣೋದಯ ದುದ್ಗಿ ಮಾತನಾಡಿ ಪ್ರಸ್ತಕ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ಮಕ್ಕಳು ನಿತ್ಯ ಶಾಲೆಗೆ ತಪ್ಪದೇ ಬಂದು ಗುರುಗಳ ಪಾಠ ಮತ್ತು ಅವರ ಸಲಹೆ ಸೂಚನೆಗಳನ್ನು ಪಾಲಿಸಿ ಒಳ್ಳೆಯ ವಿದ್ಯೆಯನ್ನು ಕಲಿಯಬೇಕು ಎಂದರು.ಶೈಕ್ಷಣಿಕ ವರ್ಷದ ಮೊದಲದಿನ ಬಂದ ಎಲ್ಲಾ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಮತ್ತು ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು. ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ವಿವಿಧ ಶಾಲೆಗಳಲ್ಲಿನ ಶಿಕ್ಷಕರು ಸಂಘದ ಆಡಳಿತ ಮಂಡಳಿಯ ಸದಸ್ಯರ ಕೂಡಿ ಕೊಂಡು ಮಕ್ಕಳ ಜೊತೆಗೆ ಸೇರಿ ಆರಂಭೋತ್ಸವವನ್ನು ಹಬ್ಬದಂತೆ ಅದ್ದೂರಿಯಾಗಿ ಆಚರಿಸಿದರು.ವಿ.ಮ.ವಿ.ವ ಸಂಘದ ನಿರ್ದೇಶಕರಾದ ವೀರಣ್ಣ ಬಳೂಟಗಿ,ರವಿ ಹುಚನೂರ, ಆರ್.ಎಸ್.ರಾಜಮನಿ ಆಡಳಿತಾಧಿಕಾರಿ ಆರ್.ಎಸ್.ಬ್ಯಾಳಿ,ಮುಖ್ಯ ಶಿಕ್ಷಕ ಬಿ.ಎಸ್.ಬನ್ನಟ್ಟಿ, ಆರ್.ವ್ಹಿ.ಪಾಟೀಲ,ವೈ.ಕೆ.ವಾಲೀಕಾರ,ಕೆ.ಎಲ್.ಲಕ್ಕನಗೌಡರ, ಎಂ.ಐ.ರೋಣದ,ಸಿ.ಕೆ.ರಾಜೂರ, ಎಸ್.ಎನ್.ಬಂಕದ, ಸ್ವಪ್ನಾ ಮಲ್ಲಪ್ಪನವರ,ಎಂ.ಐ. ಬಡ್ಡಿ, ಎಂ.ಎಚ್.ಗಾಜಿಬಾಯಿ,ಪ್ರತಿಭಾ ಹಳ್ಳೂರ, ಪಿ.ಎಂ. ಅಕ್ಕಿ, ನಟರಾಜ ಬಡಿಗೇರ, ವೆಂಕನಗೌಡ ದೇವರಡ್ಡಿ, ಜಿ.ಎಸ್.ಲೂತಿಮಠ, ಮಹಾಂತೇಶ ಕಂಬಾಳಿಮಠ, ದೈಹಿಕ ಶಿಕ್ಷಕರಾದ ಮಹಾಂತೇಶ ಸಾಲಿಮಠ,ಮಂಜುನಾಥ ಸೇಬಣ್ಣನವರ ಸೇರಿದಂತೆ ಶಾಲೆಯ ಶಿಕ್ಷಕರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.