ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರಾಗಿ ಬಿ. ಯಶೋಧರ ಕೂಡಲ ಸಂಗಮರವರ ಆಯ್ಕೆ.

ಹುನಗುಂದ ಜೂನ್.04

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮೂಲ ಸಂಘಟನೆಯಿಂದ 2002/03 ರಲ್ಲಿ ಐಹೊಳೆ ದೇಸಗತ್ತಿ ಮನೆತನದ ಹೆಚ್ಚುವರಿ ಭೂಮಿಯ ವಿಚಾರ ಕೈಗೆತ್ತಿಕೊಂಡು ಜಾಥಾದಲ್ಲಿ ತಾಲೂಕ ಸಂಘಟನಾ ಸಂಚಾಲಕರಾಗಿದ್ದ ಬಿ. ಯಶೋಧರ. ಕೂಡಲ ಸಂಗಮ ಅವರು ಬದಲಾದ ಸಮಯದಲ್ಲಿ ತಟಸ್ಥರಾಗಿದ್ದರು.

ಪುನಃ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಾತ್ಮ ಪ್ರೊll ಬಿ. ಕೃಷ್ಣಪ್ಪ ಸ್ಥಾಪಿತ ರಿ.ನಂ-386/2020-21 ಬಾಗಲಕೋಟ ಜಿಲ್ಲಾ ಸಮಿತಿಯಲ್ಲಿ ಪಾಲ್ಗೊಳ್ಳುವ ವಿಚಾರ ನಮ್ಮ ಅತ್ಯಾಪ್ತರ ಬಳಿ ಅವರು ಇಂಗಿತ ವ್ಯಕ್ತಪಡಿಸಿದ್ದರು.

ಬಿ. ಯಶೋಧರ ರವರ ಕ್ರೀಯಾಶೀಲ ಕಾರ್ಯ ಚಟುವಟಿಕೆಯನ್ನು ಗುರುತಿಸಿ ಅವರನ್ನು ಬಾಗಲಕೋಟ ಜಿಲ್ಲೆಯ ಜಿಲ್ಲಾ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರು ಮಾರುತಿ ಬಿ. ಹೊಸಮನಿ ತಿಳಿಸಿದ್ದಾರೆ.

ತತಕ್ಷಣ ಕಾರ್ಯ ಪ್ತವೃತ್ತರಾಗಿ ಜಿಲ್ಲಾ ಸಂಚಾರ ಕೈಗೊಂಡು ಜಿಲ್ಲೆಯ ಆಯಾ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಮಾಡಲು ಸೂಚಿಸಿ, ಆದೇಶಿಸಿ ಪತ್ರಿಕಾ ಪ್ರಕಟಣೆಗೆ ತಿಳಿಸಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button