ಕೂಡ್ಲಿಗಿ ತಾಲೂಕಾ ಶಾಮಿಯಾನ ಸಪ್ಲೈ ಲೈಟಿಂಗ್ ಧ್ವನಿ ವರ್ಧಕ ಮತ್ತು ಡೆಕೋರೇಷನ್ ಮಾಲೀಕರ ಕ್ಷೇಮಾಭಿವೃದ್ಧಿ ಉದ್ಘಾಟನೆ ಹಾಗೂ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮ.
ಕೂಡ್ಲಿಗಿ ಜು.31

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪಟ್ಟಣದ ವಾಲ್ಮೀಕಿ ಭವನದಲ್ಲಿ ವಿಜಯನಗರ ಜಿಲ್ಲಾ ಶಾಮಿಯಾನ ಸಪ್ಲೈಯರ್ ಲೈಟಿಂಗ್ ಧ್ವನಿ ವರ್ಧಕ ಮತ್ತು ಡೆಕೋರೇಷನ್ ಮಾಲಿಕ ಕ್ಷೇಮಾಭಿವೃದ್ಧಿ ಸಂಘ ಹೊಸಪೇಟೆ ಹಾಗೂ ಕೂಡ್ಲಿಗಿ ತಾಲೂಕಾ ಶಾಮಿಯಾನ ಸಪ್ಲೇಯರ್ ಲೈಟಿಂಗ್ ಧ್ವನಿ ವರ್ಧಕ ಮತ್ತು ಡೆಕೋರೇಷನ್ ಮಾಲೀಕ ಕ್ಷೇಮಾಭಿವೃದ್ಧಿ ಸಂಘ ಕೂಡ್ಲಿಗಿ ಇವರ ವತಿಯಿಂದ ಉದ್ಘಾಟನೆ ಮತ್ತು ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮ ವಾಲ್ಮೀಕಿ ಭವನ ಕೊಟ್ಟೂರು ರಸ್ತೆಯಲ್ಲಿ ಹುಣಿಸೇ ನಾಡು ಎಂದು ವೇದಿಕೆ ನಾಮಕರಣ ಮಾಡಿ ಎಂ ಚಂದ್ರಪ್ಪ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿಸಿದರು ಈ ಸಂದರ್ಭದಲ್ಲಿ ಷ.ಬ್ರ. ಪ್ರಶಾಂತ ಸಾಗರ ಶಿವಾಚಾರ ಸ್ವಾಮಿಗಳು ಮಾತನಾಡಿ ಶಾಮಿಯಾನ ತಾಲೂಕು ಸಪ್ಲೈಯರ್ ಇವರಿಗೆ ಯಾವುದೇ ಸರಕಾರ ದಿಂದ ಅನುದಾನವಾಗಲಿ ಇರುವುದಿಲ್ಲ ಹಗಲು ರಾತ್ರಿ ಶ್ರಮಪಟ್ಟು ತಮ್ಮ ಕಾರ್ಯಕ್ಕೆ ವಿಘ್ನ ಬರದಂತೆ ನೋಡಿ ಕೊಂಡು ಕಾರ್ಯ ಯಶಸ್ವಿ ಮಾಡುವ ಕೆಲಸವೆಂದರೆ ಅದು ಶಾಮಿಯನ ಸಪ್ಲೈಯರ್ ಎಂದು ತಿಳಿಸಿದರು. ಶಾಮಿಯಾನ ಕೂಲಿ ಕಾರ್ಮಿಕರಿಗೆ ಮದುವೆ ಶುಭ ಸಮಾರಂಭ ಇಂಥ ಧಾರ್ಮಿಕ ಕ್ಷೇತ್ರಗಳಲ್ಲಿ ಶಾಮಿಯಾನ ಇದ್ದರೆ ಮಾತ್ರ ಆ ಸ್ಥಳ ಕೊಂದು ಶೋಭೆ ಹಾಗಾಗಿ ಪ್ರತಿಯೊಬ್ಬರೂ ಇವರನ್ನು ಗೌರವಿಸಿ ಪ್ರೀತಿಸಿ ಎಂದು ಶುಭ ಹಾರೈಸಿದರು ಈ ಸಂದರ್ಭದಲ್ಲಿ ಶ್ರೀಗಳಿಗೆ ಗೌರವ ಸಮರ್ಪಣೆ ಹಾಗೂ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಡಾ, ಶಾಸಕರಾದ ಎನ್.ಟಿ.ಶ್ರೀನಿವಾಸ್ ಅವರಿಗೆ ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿಬಿ ಎಂ ಸೋಮಶೇಖರ ಗೌರವ ಪ್ರಧಾನ ಕಾರ್ಯದರ್ಶಿ ಉತ್ತರ ಕರ್ನಾಟಕ ಹಾಗೂ ಪ್ರಧಾನ ಕಾರ್ಯದರ್ಶಿ ವಿಜಯನಗರ ಜಿಲ್ಲೆ ಎಸ್.ಎಸ್.ಎಲ್ ಡಿ.ಡಿ.ಎಂ.ಕೆ ಸಂಘ ರಿ ಚನ್ನಬಸಪ್ಪ ಗಸ್ತಿ ಪ್ರಧಾನ ಕಾರ್ಯದರ್ಶಿ ಉತ್ತರ ಕರ್ನಾಟಕ ಇವರು ಭಾಗಿಯಾಗಿ ಕೂಡ್ಲಿಗಿ ತಾಲೂಕಾ ಶಾಮಿಯಾನ ಸಪ್ಲೈಯರ್ ಲೈಟಿಂಗ್ ಧ್ವನಿ ವರ್ಧಕ ಮತ್ತು ಡೆಕೋರೇಷನ್ ಮಾಲಿಕ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಭಾಗಿಯಾಗಿ ಗೌರವಾಧ್ಯಕ್ಷರು ಕಾಸಿಂಸಾಬ್ ತಾಲೂಕು ಅಧ್ಯಕ್ಷರು ಎಮ್ ಚಂದ್ರಪ್ಪ ಪ್ರಧಾನ ಕಾರ್ಯದರ್ಶಿ ಎಚ್ ಪ್ರಭುದೇವ್ ಎಂ ಇತಿಯಾಜ್ ಉಪ ಅಧ್ಯಕ್ಷರು ಶಾಂತಪ್ಪ ಗುಡುಗಿ ನಾಗರಾಜ್ ಸಹ ಕಾರ್ಯದರ್ಶಿಗಳು ನಾಗರಾಜ್ ವಿರುಪಾಕ್ಷಿ ನೂರುಲ್ಲಾ ರುದ್ರಪ್ಪ ಸಾಸಲವಾಡ ಖಾಜಾ ಉಶಾನ್ ಮಂಜುನಾಥ ಮೊಹಮ್ಮದ್ ಸೋಮಣ್ಣ ನಿರ್ದೇಶಕರು ಕಾಜಾ ಡಿಯರ್ ರಾಮಣ್ಣ ಮೂಗಪ್ಪ ಮಂಜುನಾಥ ವಿ ಸಿದ್ದಪ್ಪ ನೀರಗಂಟಿ ಪಕೀರಪ್ಪ ಕೆಂಗಲ ಹಟ್ಟಿ ಬಸಣ್ಣ ಮಂಜಣ್ಣ ಜಿ ರಾಜೇಶ್ ತಿಪ್ಪೇರುದ್ರಪ್ಪ ಟಿಪ್ಪು ಸುಲ್ತಾನ್ ಇತರರು ಇದ್ದರು ಸಂಘ ಸಂಸ್ಥೆಯರು ಮಹಿಳೆಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್. ಕೆ. ಹೊಸಹಳ್ಳಿ.