“ಅಪರೂಪದ ಕಲಾ ಸಂಪತ್ತು ಉಜ್ಜಯಿನಿ ಶಿಖರ”
ಉಜ್ಜಯಿನಿ ಮೇ.14

ಕೊಟ್ಟೂರು ತಾಲೂಕಿನ ಉಜ್ಜಯಿನಿ ಪೀಠದ ವಿಶಿಷ್ಟ ಆಚರಣೆ ಆಗಿರುವ ಸ್ವಾಮಿಯ ಗೋಪುರದ ಶಿಖರಕ್ಕೆ ಗೋಧೂಳಿ ಲಗ್ನದಲ್ಲಿ ತೈಲಾಭಿಷೇಕ ಮಾಡುವ ಸಂಪ್ರದಾಯದ ಉತ್ಸವ ಸೋಮವಾರ ಸಂಜೆ ಅದ್ದೂರಿಯಾಗಿ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು. ಸ್ವಾಮಿಗಳ ಸಮ್ಮುಖದಲ್ಲಿ ನಡೆದ ಈ ಉತ್ಸವದಲ್ಲಿ ಲಕ್ಷಾಂತರ ಭಕ್ತ ಸಮೂಹ ಹಾಗೂ ಸುತ್ತಲಿನ ಹತ್ತಾರು ಹಳ್ಳಿಗಳ ಜನರು ಪಾಲ್ಗೊಂಡು ವಿಜೃಂಭಿಸಿದರು. ಪ್ರತಿ ವರ್ಷ ವೈಶಾಖ ಶುದ್ಧ ಷಷ್ಠಿಯಂದು ನಡೆಯುವ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ಶಿಖರ ತೈಲಾಭಿಷೇಕವು ದಕ್ಷಿಣ ಭಾರತದಲ್ಲಿಯೇ ವಿಶೇಷವಾಗಿದೆ.

ಜರಿಮಲೆಯ ಪಾಳೆಗಾರರ ವಂಶಸ್ಥರು ಪ್ರತಿ ವರ್ಷವೂ ಶಿಖರದ ತೈಲಾಭಿಷೇಕಕ್ಕೆ ತೈಲವನ್ನು ಕಳಿಸುವುದು ಸಂಪ್ರದಾಯ. ಅವರ ಕಳಿಸಿದ ತೈಲವನ್ನು ಮೊದಲಿಗೆ ಸ್ವಾಮಿಯ ಶಿಖರಕ್ಕೆ ಮೊದಲು ಎರೆದ ನಂತರ ಉಳಿದ ಭಕ್ತರ ತೈಲವನ್ನು ಶಿಖರಕ್ಕೆ ಎರೆಯಲಾಗುವುದು.ಪ್ರತಿ ವರ್ಷ ಜರಿಮಲೆ ರಾಜರ ವಂಶಸ್ಥರು ನೆಮ ನಿಷ್ಠೆ ವೃತ, ಉಪವಾಸ ದಿಂದ ನಡೆದು ಬಂದು ತಂದ ತೈಲವನ್ನು ಶಿಖರಕ್ಕೆ ಸುರಿದ ಅನಂತರವೇ ಭಕ್ತರು ಹರಕೆಯಂತೆ ನೀಡಿದ ತೈಲವನ್ನು ಶಿಖರದ ಮೇಲೆ ಸುರಿಯುತ್ತಾರೆ. ಇದು ಬಳಪದ ಕಲ್ಲಿನ ಗೋಪುರವಾಗಿದ್ದು, ಸೂಕ್ಷ್ಮ ಕೆತ್ತನೆಗಳ ಕಲೆ ಇದೆ. ಈ ಕಲೆ ಬಿಸಿಲು, ಮಳೆ ಗಾಳಿಗೆ ಹಾಳಾಗಬಾರ ದೆಂಬ ಉದ್ದೇಶ ದಿಂದ ಪ್ರತಿ ವರ್ಷ ಶಿಖರಕ್ಕೆ ತೈಲ ಮಜ್ಜನ ಮಾಡುವ ಮೂಲಕ ಅಪರೂಪದ ಕಲಾ ಸಂಪತ್ತು ಉಳಿಸುವ ಉದ್ದೇಶ ಇದಾಗಿದೆ ಎಂಬುದು ವಿಚಾರವಂತರು, ಕೆಲವು ಇತಿಹಾಸಕಾರರು ಅಭಿಪ್ರಾಯ. ಶಿಖರ ತೈಲಾಭಿಷೇಕ ಕಣ್ಣುಂಬಿಸಿ ಕೊಳ್ಳಲು ಪ್ರತಿ ವರ್ಷ ಲಕ್ಷಗಟ್ಟಲೇ ಭಕ್ತರು ಆ ಆಚರಣೆ ನೋಡಲು ಬರುತ್ತಾರೆ. ನೆರೆದ ಭಕ್ತ ಸಮೂಹವು ಕಣ್ತುಂಬಿ ಕೊಂಡು ಭಕ್ತಿಯಿಂದ ನಮಿಸಿದರು.ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.