ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರುವ (ಮೇಕೆ) ಆಡನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯವರು.
ಅಥಣಿ ಜೂನ್.08

ಅಥಣಿ ಪಟ್ಟಣದ ವಿಕ್ರಮಪುರ ಬಡಾವಣೆಯಲ್ಲಿ ಶ್ರೀ.ಮುರಗೇಶ ನಿಂಗನೂರ ರವರ ಮೇಕೆ (ಆಡು) ಸೇದು ಬಾವಿಯಲ್ಲಿ ಅಂದಾಜು 50×55 ಅಡಿ ವಿಸ್ತಾರವಾದ 50 ರಿಂದ 55 ಅಡಿ ಆಳದಲ್ಲಿ 05 ಅಡಿ ಆಳದ ತೇರೆದ ನೀರಿರುವ ಭಾವಿ ಆಕಸ್ಮಿಕವಾಗಿ ಕಾಲು ಜಾರಿ ಮೇಕೆ (ಆಡು) ಬಿದ್ದಿದ್ದು, ಸದರಿ ಸ್ಥಳೀಯ ನಿವಾಸಿಗಳು ಘಟನೆಯ ವಿಷಯವನ್ನು ಅಥಣಿ ಅಗ್ನಿಶಾಮಕ ಠಾಣೆ ದೂರವಾಣಿ ಕರೆ ಮಾಡಿ ತಿಳಿಸಿದರು, ಕರೆ ಬಂದ ತಕ್ಷಣ ಜಲ ವಾಹನದೊಂದಿಗೆ ಅಗ್ನಿಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿ ಕಾರ್ಯ ಪ್ರವೃತ್ತರಾಗಿ ಸುಮಾರು 50 ರಿಂದ 55 ಅಡಿ ಆಳದ ಸೇದು ಬಾವಿಯಲ್ಲಿ ಹಗ್ಗಗಳ ಸಹಾಯದಿಂದ ಕೆಳಗಿಳಿದು ಸುಮಾರು 01:40 ಒಂದು ಘಂಟೆ ನಲವತ್ತು ನಿಮಿಷಗಳ ಕಾಲ ಶ್ರಮವಹಿಸಿ ಸಿಬ್ಬಂದಿಗಳು ಪ್ರಾಣ ರಕ್ಷಣೆಗಾಗಿ ರೋಧಿಸುತ್ತಿದ್ದ ಮೇಕೆಯನ್ನು ಜೀವಂತವಾಗಿ ಅಗ್ನಿಶಾಮಕ ಇಲಾಖೆಯ ತಂಡ ರಕ್ಷಣೆ ಮಾಡಿರುತ್ತಾರೆ.

ಈ ಸಮಯ ಪ್ರಜ್ಞೆ ಕಾರ್ಯವನ್ನು ವೀಕ್ಷಿಸಿದ ವಿಕ್ರಮಪುರ ಬಡಾವನೆಯಲ್ಲಿಯ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ತಂಡದ ಕಾರ್ಯ ದಕ್ಷತೆಯನ್ನು ಮೆಚ್ಚಿ ಶ್ಲಾಘಿಸಿ ಹಾಗೂ ಹಸ್ತಲಾಘವ ಮಾಡಿ ಮೇಕೆ (ಆಡು)ಪ್ರಾಣ ರಕ್ಷಣೆ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.ಅಗ್ನಿಶಾಮಕ ತಂಡದಲ್ಲಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ರವರಾದ ಮಲ್ಲಿಕಾರ್ಜುನ ಬಂದಾಳ,ರವರ ನೇತ್ರತ್ವದಲ್ಲಿ , ನಿಲಪ್ಪ ಹೆರವಾಡೆ,ಮಲ್ಲನಗೌಡ ನಾಯಕ, ರವೀಂದ್ರ ಸಂಗಮ,ಕಲ್ಮೇಶ್ ಚಿಮ್ಮಡ,ಸಂತೋಷ ಚೌಗಲಾ, ಮಲ್ಲಪ್ಪ ಬಟಕುರ್ಕಿ, ಭಾಗವಹಿಸಿದ್ದರು.