ಎ.ಎಸ್.ಎಸ್.ಕೆ ಸಂಸ್ಥಾಪಕ ಅಧ್ಯಕ್ಷರು ಆದ ಡಾ. ಕೆ.ಎಂ. ಸಂದೇಶ್ ರವರು ಹಿರೇಹಳ್ಳಿ ಗ್ರಾಮಕ್ಕೆ ಭೇಟಿ.
ಹಿರೇಹಳ್ಳಿ ಜೂನ್.08

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಹಿರೇಹಳ್ಳಿ ಗ್ರಾಮದಲ್ಲಿ ನಾಳೆ ಡಾ.ಬಿ.ಆರ್ ಅಂಬೇಡ್ಕರ್ ರವರ 133 ನೇಯ ಜಯಂತಿಯ ಆಚರಣೆಯ ಪ್ರಯುಕ್ತ ದಲಿತರ ಆಶಾ ಕಿರಣ, ಬಡವರ ಬಂಧು, ದಲಿತರ ಕಣ್ಮಣಿ, ನೊಂದ ಜೀವಗಳ ಬೆಳಕು, ರಾಜ್ಯ ದಲಿತ ಹೋರಾಟಗಾರರು ಹಾಗೂ ದ ರೊಲರ್ಸ್ ಚಿತ್ರದ ನಾಯಕ ನಟರಾದ ಡಾ.ಕೆ.ಎಂ.ಸಂದೇಶ್ ರವರು ಈ ಅಂಬೇಡ್ಕರ್ ಜಯಂತಿ ಉತ್ಸವದಲ್ಲಿ ಪಾಲ್ಗೊ ಳ್ಳುತ್ತಿರುವುದು ಚಿತ್ರದುರ್ಗ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳಿಗೆ ಮತ್ತು ಯುವಕರಿಗೆ ಅವರ ಅಭಿಮಾನಿಗಳಿಗೆ ಅತ್ಯಂತ ಸಂತಸ ತಂದಿದೆ.ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ಯುವಕ ಸಂಘ, ಕೋಡಿಹಳ್ಳಿ, ಹಾಗೂ ಹಿರೇಹಳ್ಳಿ ಗ್ರಾಮದ ಅಂಬೇಡ್ಕರ್ ಯುವಕ ಸಂಘದ, ಎಲ್ಲಾ ಪದಾಧಿಕಾರಿಗಳು ಸದಸ್ಯರು,ಯುವಕರು, ಯಜಮಾನರು, ಸಮಸ್ತ ನಾಗರಿಕ ಬಂಧುಗಳು ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಲಿ ಎಂದು ಹೃದಯಪೂರ್ವಕವಾಗಿ ಶುಭ ಹಾರೈಸಿದ್ದಾರೆ.
ವರದಿ: ಕೋಡಿಹಳ್ಳಿ ಶಿವಮೂರ್ತಿ.ಟಿ ಚಿತ್ರದುರ್ಗ.