ಇಹಲೋಕ ತ್ಯಜಿಸಿದ ರಾಮೋಜಿ ರಾವ್ ರವರ ಅಗಲಿಕೆಗೆ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಅರ್ಪಣೆ.
ಕೂಡ್ಲಿಗಿ ಜೂನ್.09
ವಿಜಯನಗರ ಜಿಲ್ಲೆ ಕೂಡ್ಲಿಗಿ, ಆಂಧ್ರಪ್ರದೇಶ ಮೂಲದ ಮಾಧ್ಯಮ ಲೋಕದ ದಿಗ್ಗಜರು, ಹಾಗೂ ಈ ನಾಡು ಮತ್ತು ಈ ಟಿವಿ ಮಾಧ್ಯಮ ಸಂಸ್ಥೆಗಳ ನಿರ್ಮಾತೃಗಳಾದ ರಾಮೋಜಿ ರಾವ್ ರವರು. ಶನಿವಾರ ಇಹಲೋಕ ತ್ಯಜಿಸಿದ್ದು ಅವರ ಅಗಲಿಕೆಗೆ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಿರಿಯ ಪತ್ರಕರ್ತ ಹಾಗೂ ಸಂಘದ ಗೌರವಾಧ್ಯಕ್ಷರಾದ ವಿ.ಜಿ.ವೃಷಭೇಂದ್ರ, ನುಡಿ ನಮನ ಸಲ್ಲಿಸಿ ಮಾತನಾಡಿದರು. ರಾಷ್ಟ್ರ ಕಂಡ ಹಿರಿಯ ಪತ್ರಕರ್ತರು ಹಾಗೂ ಮಾಧ್ಯಮ ದಿಗ್ಗಜರಲ್ಲಿ, ರಾಮೋಜಿ ರಾವ್ ರವರು ಪ್ರಮುಖರಾಗಿದ್ದಾರೆ. ಅವರ ಅಗಲಿಕೆಗೆ ಪತ್ರಿಕೋಧ್ಯಮ ಹಾಗೂ ಮಾಧ್ಯಮ ಲೋಕಕ್ಕೆ, ತುಂಬಲಾರದ ನಷ್ಟವಾಗಿದೆ. ಅವರು ಸಿನಿಮಾ ಕ್ಷೇತ್ರ ಹಾಗೂ ಮಾಧ್ಯಮ ಕ್ಷೇತ್ರಕ್ಕೆ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರು ಈ ಟಿವಿ ಹಾಗೂ ಈ ನಾಡು ಮಾಧ್ಯಮ ವೃಂಧವನ್ನು ಹುಟ್ಟು ಹಾಕಿದ್ದು, ರಾಮೋಜಿ ಫಿಲ್ಮ್ ಸಿಟಿ ನಿರ್ಮಾತೃಗಳಾದ ರಾಮೋಜಿ ರಾವ್ (88) ರವರು, ಶನಿವಾರ ಇಹಲೋಕ ತ್ಯಜಿಸಿದ್ದಾರೆ. ರಾಮೋಜಿ ರಾವ್ ರವರ ಅಗಲಿಕೆಯಿಂದಾಗಿ, ಮಾಧ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ರಾಮೋಜಿ ರಾವ್ ರವರ ಅಗಲಿಕೆಗೆ ಹಾಗೂ ಅವರ ಆತ್ಮಕ್ಕೆ ಶಾಂತಿ ಕೋರಿ, ಒಂದು ನಿಮಿಷ ಮೌನಾಚರಣೆ ಆಚರಿಸಲಾಯಿತು. ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಾಲುಮನೆ ರಾಘವೇಂದ್ರ, ಪತ್ರಕರ್ತರಾದ ಟಿ.ಭಾಗ್ಯಮ್ಮ, ಪ್ರಧಾನ ಕಾರ್ಯದರ್ಶಿ ಗುನ್ನಳ್ಳಿ ಶ್ರೀಧರ, ಅಬ್ದುಲ್ ಹಸೀಬ್, ವೈ.ಮಹಾದೇವ, ಎ.ಎಮ್.ಬಸವರಾಜ ಸ್ವಾಮಿ, ಗುನ್ನಿ ರಾಘವೇಂದ್ರ, ಮೀನುಕೇರಿ ತಿಪ್ಪೇಸ್ವಾಮಿ, ಸಿ.ಅರುಣ್ ಕುಮಾರ್, ಮಲ್ಲಾಪುರ ತಿಪ್ಪೇಸ್ವಾಮಿ, ಹೆಚ್.ವೀರೇಶ, ಮತ್ತು ಮಾಜಿ ಸೈನಿಕರಾದ ರಮೇಶ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ. ಸಾಲುಮನೆ ಕೂಡ್ಲಿಗಿ.