ಖಾನಾ ಹೊಸಹಳ್ಳಿ, ರಿಯಾಯಿತಿ ದರದಲ್ಲಿ ಬೀಜ ವಿತರಣೆಗೆ – ಚಾಲನೆ ನೀಡಿದ ಶಾಸಕ ಡಾ. ಎನ್.ಟಿ ಶ್ರೀನಿವಾಸ್.

ಕೆ. ಹೊಸಹಳ್ಳಿ ಜೂನ್.11

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಖಾನ ಹೊಸಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ, ಸಬ್ಸಿಡಿ ದರದಲ್ಲಿ ರೈತರಿಗೆ ಶೇಂಗಾ ಬೀಜ ವಿತರಣೆ ಮಾಡಲಾಯಿತು. ಇಲಾಖೆ ಪರವಾಗಿ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು, ಕೆಲ ರೈತರಿಗೆ ಬೀಜ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು. ಅವರು ಮಾತನಾಡಿ, ಕಳೆದ ಬಾರಿ ತಾಲೂಕು ತೀವ್ರ ಬರ ಪೀಡಿತವಾಗಿತ್ತು. ಈ ಬಾರಿ ಕೂಡ್ಲಿಗಿ ಕ್ಷೇತ್ರದಲ್ಲಿ ಉತ್ತಮ ಮಳೆ ಬೀಳುತ್ತಿದೆ ಇದು ಸಂತಸದ ಸಂಗತಿಯಾಗಿದ್ದು, ಸರ್ಕಾರ ದಿಂದ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಕಾಲಕ್ಕೆ ಸಮರ್ಪಕವಾಗಿ ಒದಗಿಸಿ ಕೊಡುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಕೃಷಿ ಅಧಿಕಾರಿಗಳು ಬಿತ್ತನೆ ಬೀಜ ಗೊಬ್ಬರಕ್ಕೆ ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ, ಸಕಾಲಕ್ಕೆ ರೈತರಿಗೆ ಒದಗಿಸುವಂತೆ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು. ತೀವ್ರವಾಗಿ ಬರಕ್ಕೆ ಒಳಪಟ್ಟ ಬೆಳೆಗಳ ಕುರಿತು ಯಾವುದೇ ತಾರತಮ್ಯ ಮಾಡಬಾರದು, ಸೂಕ್ತ ರೀತಿಯಲ್ಲಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ಕಟ್ಟು ನಿಟ್ಟಾಗಿ ವರದಿ ಕೊಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಬಿತ್ತನೆ ಮುಗಿಯುವವರೆಗೂ, ರೈತ ಸಂಪರ್ಕ ಕೇಂದ್ರದಲ್ಲಿ ಹಾಜರಿರಬೇಕು. ಯಾರು ಅನಾವಶ್ಯಕವಾಗಿ ರಜಾ ಹಾಕಬಾರದು, ಬಿತ್ತನೆಗೆ ಸಂಬಂಧ ರೈತರಿಂದ ಯಾವುದೇ ದೂರು ಬಂದರೆ, ಅದಕ್ಕೆ ನೀವೇ ಹೊಣೆಗಾರರಾಗುತ್ತೀರಿ ಎಂದು ಅವರು ಎಚ್ಚರಿಸಿದರು. ಸಕಾಲಕ್ಕೆ ರೈತರಿಗೆ ಅಗತ್ಯ ಇರೋ ಗುಣಮಟ್ಟದ ಬಿತ್ತನೆ ಬೀಜಗಳನ್ನು, ದಾಸ್ತಾನು ಮಾಡಿ ರೈತರಿಗೆ ವಿತರಿಸಬೇಕು ಎಂದರು. ಕೃಷಿ ಸಹಾಯಕ ನಿರ್ದೇಶಕರಾದ ಎಂ.ಟಿ.ಸುನೀಲ್ ಕುಮಾರ್, ಹೊಸಹಳ್ಳಿ ಗ್ರಾ.ಪಂ ಅಧ್ಯಕ್ಷರಾದ ಚೇತನ್, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಚೈತ್ರ, ಮುಖಂಡರಾದ ಬಣವಿಕಲ್ಲು ಎರ್ರಿಸ್ವಾಮಿ, ಕೃಷಿಕ ಸಮಾಜದ ನಿರ್ದೇಶಕ ಕಕ್ಕುಪ್ಪಿಎಂ. ಬಸವರಾಜ, ಡಿ.ಎಸ್.ಎಸ್. ತಾಲೂಕು ಅಧ್ಯಕ್ಷ ಗಂಗಣ್ಣ, ಸೂರ್ಯ ಪ್ರಕಾಶ್, ಲೋಕೀಕೇರಿ ಲಕ್ಕಜ್ಜಿ ಮಲ್ಲಿಕಾರ್ಜುನ, ಬಿ.ಟಿ ಗುದ್ಧಿ ದುರುಗೇಶ, ಖಾನಾ ಮಡಗು ವೀರಣ್ಣ, ಇಮಾಮ್ ಸಾಬ್, ಫೋಟೋ ಸಿದ್ದಲಿಂಗಪ್ಪ, ಕೃಷಿ ಇಲಾಖಾ ಸಿಬ್ಬಂದಿಯವರು, ಗ್ರಾ‌.ಪಂ ಸದಸ್ಯರು, ಮುಖಂಡರು, ನೆರೆ ಹೊರೆ ಗ್ರಾಮಗಳ ರೈತರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ ಸಾಲುಮನೆ ಕೂಡ್ಲಿಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button