ಎಸ್.ಎನ್.ನಿಶಾ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಸಾಧನೆ ಜಿಲ್ಲೆಗೆ ಪ್ರಥಮ – ಸಂತಸ ವ್ಯಕ್ತಪಡಿಸಿದ ಕುಟುಂಬಸ್ಥರು.

ಕೂಡ್ಲಿಗಿ ಮೇ.14

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ, ಕೇಂದ್ರ ಲೋಕ ಸೇವಾ ಆಯೋಗ(ಯುಪಿಎಸ್ ಸಿ) ನಡೆಸಿದ ಭಾರತೀಯ ಅರಣ್ಯ ಸೇವೆ(IFS) ಪರೀಕ್ಷೆಯಲ್ಲಿ ಪಟ್ಟಣದ ಎಸ್.ಎನ್.ನಿಶಾ 90 ನೇ. ರ್‍ಯಾಂಕ್ ಪಡೆದಿದ್ದಾರೆ. ಪಟ್ಟಣದ ನಿವಾಸಿಯಾಗಿರುವ ನಿಶಾ 4 ನೇ. ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಯು.ಪಿ.ಎಸ್.ಸಿ ನಡೆಸಿದ ಐಎಫ್ಎಸ್ ಪರೀಕ್ಷೆಯಲ್ಲಿ 147 ವಿಧ್ಯಾರ್ಥಿಗಳಲ್ಲಿ ನಾನು 90 ನೇ. ರ್‍ಯಾಂಕ್ ಪಡೆದಿದ್ದಾಳೆ. ಕರ್ನಾಟಕ ರಾಜ್ಯ ದಿಂದ 11 ಜನ ಮಾತ್ರ ಐಎಫ್ಎಸ್ ಗೆ ಆಯ್ಕೆಯಾಗಿದ್ದು ಅದರಲ್ಲಿ ನಾನು ಒಬ್ಬಳಾಗಿರುವುದು ನನಗೆ ತುಂಬಾ ಸಂತೋಷ ವಾಗುತ್ತದೆ ಎಂದು ಹೇಳುತ್ತಾರೆ. ನಿಶಾ. ಆರಂಭದಿಂದ ಪಿಯುಸಿ ವರೆಗೂ ಕೂಡ್ಲಿಗಿ ಯಲ್ಲಿಯೇ ವಿಧ್ಯಾಭ್ಯಾಸ ಮಾಡಿರುವ ನಿಶಾ, ಈ ಮೊದಲು ಎಂಬಿಬಿಎಸ್ ಮಾಡುವ ಕನಸು ಹೊಂದಿದ್ದರು. ಆದರೆ ನಿರೀಕ್ಷಿತ ಅಂಕಗಳಿಸದೇ ಒಲ್ಲದ ಮನಸ್ಸಿನಿಂದ ಬಿಎಸ್ಸಿ ಫಾರೆಸ್ಟರಿ ಆಯ್ಕೆ ಮಾಡಿಕೊಂಡು ಇದನ್ನೇ ಮುಂದಿನ ವಿದ್ಯಾಭ್ಯಾಸ ಮಾಡಲು ನನಗೆ ತುಂಬಾ ಇಷ್ಟ ಇತ್ತು ಅಲ್ಲಿಂದ ನಾನು ಸಾಮಾನ್ಯ ಜ್ಞಾನ (ಜಿಕೆ) ಕಡೆ ಹೆಚ್ಚಿನ ಅಭ್ಯಾಸ ಮಾಡುವ ಆಲೋಚನೆ ಮಾಡಿ ಪುಸ್ತಕಗಳನ್ನು ಓದಿದೆ. ಬಿಎಸ್ಸಿ ಕೊನೆಯ ವರ್ಷದಲ್ಲಿಯೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನಕ್ಕೆ ಆರಂಭದಲ್ಲಿ ಬೇಕಾದ ತಯಾರಿಗೆ ನಾನು ಮಾನಸಿಕವಾಗಿ ಸಿದ್ದಳಾದೆ‌. ನಂತರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಉಚಿತ ಕೋಚಿಂಗ್ ಪರೀಕ್ಷೆ ಇತ್ತು ಅದರಲ್ಲಿ ನಾನು ಪರೀಕ್ಷೆ ಬರೆದು ಅರ್ಹತೆ ಹೊಂದಿದೆ. ನಂತರ ಶಂಕರ್ ಐಎಎಸ್ ಕೋಚಿಂಗ್ ಸೆಂಟರ್ ನಲ್ಲಿ ಯುಪಿಎಸ್ ಸಿ ಕೊಚಿಂಗ್ ತೆಗೆದುಕೊಂಡೆ, ಮೊದಲ ಪ್ರಯತ್ನದಲ್ಲಿ ಅಷ್ಟಾಗಿ ತಯಾರಿ ಇರಲಿಲ್ಲ ಆದರೂ ಕೋವಿಡ್ ನಿಂದಾಗಿ ಸ್ವಲ್ಪ ಹಿನ್ನಡೆಯಾಯಿತು. ಎರಡನೆ ಪ್ರಯತ್ನದಲ್ಲಿ ಜಿಕೆ ಮತ್ತು ಸಿಸ್ಯಾಟ್ ಪರೀಕ್ಷೆಗಳಲ್ಲಿ ಸಿಸ್ಯಾಟ್ ನಲ್ಲಿ 66 ಅಂಕಗಳನ್ನು ಪಡೆಯಬೇಕಿತ್ತು ಅದರಲ್ಲಿ ಹಿನ್ನಡೆಯಾಗಿತ್ತು. ಛಲ ಬಿಡದೇ 3 ನೇ. ಬಾರಿ ಪ್ರಯತ್ನ ಮಾಡಿದೆ ಅಲ್ಲಿ ಸಂದರ್ಶನದವರೆಗೂ ಹೋಗಲು ಮಾತ್ರ ಸಾಧ್ಯವಾಯಿತು. ಅದರೂ ಮನೆಯವರ ಬೆಂಬಲ ಮತ್ತು ಪ್ರೋತ್ಸಾಹ ಹಾಗೂ ನನ್ನ ಅಚಲ ಗುರಿ ಮಾತ್ರ ನಾನು ಬಿಡಲಿಲ್ಲ ನಾಲ್ಕನೇ ಭಾರಿ ಕಠಿಣ ಅಭ್ಯಾಸ ಮಾಡಿ ಪರೀಕ್ಷೆ ಎದುರಿಸಿ ಈ ಯಶಸ್ಸುನ್ನು ಮುಡಿಗೇರಿಸಿ ಕೊಂಡೆ ಎಂದು ಅತ್ಯಂತ ಭಾವುಕಗಳಾಗಿ ಹೇಳಿದರು. ನನ್ನ ಈ ಸಾಧನೆಗೆ ನನ್ನ ತಂದೆ ದಿವಂಗತ ಡಾ.ಶ್ರೀನಿವಾಸ್ ಅವರೇ ಪ್ರೇರಣೆ ಮತ್ತು ನನ್ನ ಈ ಯಶಸ್ಸಿಗೆ ನನ್ನ ತಾಯಿ ಜಯಮ್ಮ ಹಾಗೂ ದೊಡ್ಡಮ್ಮ ನಾಗಮಣಿ ಜಿಂಕಾಲ್ ಅವರೇ ಕಾರಣ ಆರಂಭದಲ್ಲಿ ಸೋಲು ಕಂಡರು ಯಾವ ಕಾರಣಕ್ಕೂ ಎದೆಗುಂದದೆ ಪರೀಕ್ಷೆ ಎದುರಿಸು ಎಂದು ಬೆಂಬಲ ನೀಡಿದ್ದು ನಾನು ನೆನಯಬೇಕು ಎಂದು ಹೇಳಿದ ನಿಶಾ. ನಾವು ಗ್ರಾಮೀಣ ವಿಧ್ಯಾರ್ಥಿಗಳು ಎಂಬ ಕೀಳರಿಮೆ ಯಾವ ವಿದ್ಯಾರ್ಥಿಗಳು ಹೊಂದ ಬೇಡಿ, ಉನ್ನತ ಗುರಿಯೊಂದಿಗೆ, ಒಬ್ಬ ಗುರುವಿನ ಮಾರ್ಗದರ್ಶನದಲ್ಲಿ ಸತತ ಪ್ರಯತ್ನ, ಹಾಗೂ ಸತತ ಅಭ್ಯಾಸ ಇದ್ದರೆ ಖಂಡಿತವಾಗಿ ಯಶಸ್ಸು ಸಾಧ್ಯ ಎನ್ನುತ್ತಾರೆ ನಿಶಾ. ಆನ್ಲೈನ್ ತರಬೇತಿ ಅವಕಾಶಗಳು ಸಾಕಷ್ಟು ಇವೆ ಅವುಗಳ ಸಹಾಯ ಪಡೆದು ಗ್ರಾಮೀಣ ಪ್ರದೇಶದಲ್ಲಿಯೇ ಓದಿ, ಆದರೆ ಸತತ ಓದು ಹಾಗೂ ಪತ್ರಿಕೆಗಳನ್ನು ಹೆಚ್ಚಾಗಿ ಓದಿದರೆ ನಿಮಗೆ ಉನ್ನತ ಗುರಿ ಮುಟ್ಟಲು ಸಾಧ್ಯ ಎನ್ನುತ್ತಾರೆ.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button