ಮೋದಿ ಪ್ರಧಾನಿ, ಜಿಗಜಿಣಗಿ ಎಮ್.ಪಿ ಆಗಬೇಕೆಂದು ಬಿಜೆಪಿ ಕಾರ್ಯಕರ್ತರನ ಹರಕೆ.
ಕೆರುಟಗಿ ಜೂನ್.15
![](https://i0.wp.com/sknewskannada.in/wp-content/uploads/2024/06/IMG-20240615-WA0061.jpg?resize=708%2C319&ssl=1)
ದೇವರ ಹಿಪ್ಪರಗಿ ತಾಲೂಕಿನ ಕೆರುಟಗಿ ಗ್ರಾಮದ, ಯಾವುದೇ ಪಕ್ಷದ ಕಾರ್ಯಕರ್ತರು ಇರಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಆಶಾಭಾವನೆ ಇರುತ್ತದೆ,ತಾಲ್ಲೂಕಿನ ಕೆರುಟಗಿ ಗ್ರಾಮದ ಈ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಲೋಕಸಭೆಯ ಮೀಸಲು ಮತ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ರಮೇಶ ಜಿಗಜಿಣಗಿಯವರು ಸಂಸದರು ಆಗಬೇಕು ಹಾಗೂ ನರೇಂದ್ರ ಮೋದಿಯವರು ಮೂರನೇಯ ಬಾರಿಗೆ ಪ್ರಧಾನಮಂತ್ರಿ ಆಗಬೇಕು ಎಂದು ದೇವರಲ್ಲಿ ಹರಕೆ ಬೇಡಿ ಕೊಂಡಿರುವ ಗ್ರಾಮದ ಬಿಜೆಪಿ ಕಾರ್ಯಕರ್ತರಾದ ಸಂಗನಗೌಡ ಪಾಟೀಲ ಅವರು ದೇವರಿಗೆ ಬೇಡಿ ಕೊಂಡಿರುವ ಹರಕೆಯಂತೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಆಗಿದ್ದಾರೆ.
![](https://i0.wp.com/sknewskannada.in/wp-content/uploads/2024/06/IMG-20240615-WA0060.jpg?resize=708%2C319&ssl=1)
ನಮ್ಮ ಜಿಲ್ಲೆಯ ಬಿಜೆಪಿ ಸಂಸದರಾಗಿ ರಮೇಶ ಜಿಗಜಿಣಗಿ ಯವರು ಗೆದ್ದು ಬಂದಿದ್ದಾರೆ ನನಗೆ ತುಂಬಾ ದೇವರ ಮೇಲೆ ನಂಬಿಕೆ ಇದೇ ಅದಕ್ಕಾಗಿ ಶನಿವಾರ ದಂದು ನಮ್ಮ ಮನೆಯಿಂದ ಆಂಜನೇಯಸ್ವಾಮಿ ದೇವಸ್ಥಾನದ ವರಿಗೆ ದೀರ್ಘದಂಡ ನಮಸ್ಕಾರಗಳು ಹಾಕಿ ದೇವರ ಹರಕೆಯನ್ನು ಮುಟ್ಟಿಸಿದ್ದೇನೆ.
![](https://i0.wp.com/sknewskannada.in/wp-content/uploads/2024/06/IMG-20240615-WA0062.jpg?resize=708%2C319&ssl=1)
ಹಾಗೂ ನನಗೆ ಗ್ರಾಮಸ್ಥರು ಕುಡಿ ಬಟ್ಟೆ ಆಯೇರಿ ಮಾಡಿ ಎಲ್ಲರೂ ನನಗೆ ಶುಭ ಹಾರೈಸಿದರು, ಈ ಕಾರ್ಯಕ್ರಮದಲ್ಲಿ ಬಿಜೆಪಿ ಓಬಿಸಿ ಜಿಲ್ಲಾ ಅಧ್ಯಕ್ಷರಾದ ಸಿದ್ದು ಬುಳ್ಳಾ ಹಾಗೂ ಗ್ರಾಮದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.