ಕೆಂಪೇಗೌಡ ಜಯಂತಿಗೆ ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳ ಗೈರು ಹಾಜರಿ – ತಹಶೀಲ್ದಾರ್ ಕೆಂಡಾಮಂಡಲ.
ಕೂಡ್ಲಿಗಿ ಜೂನ್.29
![](https://i0.wp.com/sknewskannada.in/wp-content/uploads/2024/06/IMG-20240629-WA0023.jpg?resize=708%2C286&ssl=1)
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದಲ್ಲಿ ಗುರುವಾರ ರಂದು ಸರ್ಕಾರದ ಆದೇಶದಂತೆ ಕೆಂಪೇಗೌಡರ ಜಯಂತಿಯನ್ನು ಸರಳವಾಗಿ ತಾಲೂಕಾ ಆಡಳಿತ ಕಚೇರಿಯಲ್ಲಿ ಕೆಂಪೇಗೌಡರ ಭಾವ ಚಿತ್ರವನ್ನು ಅಳವಡಿಸಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹಬ್ಬಗಳ ಅಧ್ಯಕ್ಷರಾದ ಮಾನ್ಯ ತಾಲೂಕಾ ದಂಡಾಧಿಕಾರಿಗಳಾದ ಎಂ ರೇಣುಕ ಇವರ ಸಮ್ಮುಖದಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಈ ಬಾರಿ ಮೊದಲನೇ ವರ್ಷವಾಗಿ ಸರ್ಕಾರ ಕೆಂಪೇಗೌಡರ ಜಯಂತಿಯನ್ನು ಆಚರಣೆ ಮಾಡುವುದರ ಮೂಲಕ ಜಯಂತಿ ಆಚರಣೆಯ ವರದಿಯನ್ನು ಸಲ್ಲಿಸುವಂತೆ ಆದೇಶವಿದ್ದರೂ ಕೆಂಪೇಗೌಡರ ಜಯಂತಿ ಆಚರಣೆಗೆ ಯಾವುದೇ ತಾಲೂಕಾ ಮಟ್ಟದ ಅಧಿಕಾರಿಗಳು ಭಾಗವಹಿಸದೆ ಗೈರು ಹಾಜರಾಗಿದ್ದು ಕಂಡು ಬಂದಿದ್ದು.
![](https://i0.wp.com/sknewskannada.in/wp-content/uploads/2024/06/IMG-20240629-WA0024.jpg?resize=708%2C420&ssl=1)
ಪ್ರವಾಸಿ ಮಂದಿರದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಕೆಂಪೇಗೌಡರ ಜಯಂತಿಯನ್ನು ಬೆರಳಣಿಕೆಯಷ್ಟು ಎರಡೋ ಮೂರು ಇಲಾಖೆಯ ಸಿಬ್ಬಂದಿಗಳು ಮಾತ್ರ ಕಂಡು ಬಂದಿದ್ದನ್ನು ಇನ್ನೂಳಿದ ಯಾವ ಯಾವ ಇಲಾಖೆಯ ಅಧಿಕಾರಿಗಳು ಹಾಜರಾಗಿಲ್ಲವೋ ಅವರ ವಿರುದ್ಧ ಕ್ರಮ ಕೈಗೊಳ್ಳವುದಾಗಿ ಒಕ್ಕಲಿಗ ಸಂಘದ ಸದಸ್ಯರುಗಳಿಗೆ ತಿಳಿಸಿದ್ದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ರಾಮದುರ್ಗ ಮಂಜುನಾಥ್ ಉಪಾಧ್ಯಕ್ಷರಾದ ಶ್ರೀರಾಮ್ ಶೆಟ್ಟಿ ಹಳ್ಳಿ ನಿರ್ಕಲಪ್ಪ, ಚoದ್ರ ಮೌಳಿ, ಆನಂದ ಮುಖಂಡರಾದ ಪಿ.ಬಸವರಾಜ್, ರಾಮದುರ್ಗ ಗುರುಸ್ವಾಮಿ,ಇನ್ನು ಇತರರಿದ್ದರು ಹಾಗೆ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಪಿ ಶಿವುರಾಜು , ನಿರೂಪಕರಾಗಿ ಉಡಚಪ್ಪ ಶಿಕ್ಷಕರು, ಸ್ವಾಮಿ ವಿವೇಕಾನಂದ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ ಬಿ. ಸಾಲುಮನೆ. ಕೂಡ್ಲಿಗಿ.