“ವೈದ್ಯೋ ನಾರಾಯಣೋ ಹರಿ”…..

ನಮಿಸೋಣ ಎಲ್ಲರೂ ನಮಿಸೋಣ ವೈದ್ಯ ಮಹಾಶಯರಿಗೆ ನಮಿಸೋಣಮನುಕುಲದ ಪ್ರತ್ಯಕ್ಷ ದೈವರಿಗೆ,ಕಲಿಯುಗದ ಧನ್ವoತರಿಗೆ,ಜೀವಿಗಳಪಾಲಿನ ಜೀವ ಸಂಜೀವಿನಿಗೆ ಒಮ್ಮನದಿಂದ ನಮಿಸೋಣ ||1||

ತನ್ನ ಕುಟುಂಬವ ಮರೆತು ರೋಗದಿಂದ ಬಳಲುವ ಜೀವಿಗಳ ಸೇವೆಗೈವ ಸೇವಾಕರ್ತನಿಗೆನೋವಿನಿಂದ ನರಳುವ ಜೀವಿಗಳಿಗೆತಾಳ್ಮೆಯಿಂದ ಶುಶ್ರುಷೆ ಮಾಡುವಶುಶ್ರುಕ್ಷಕನಿಗೆ ಒಮ್ಮನದಿಂದ ನಮಿಸೋಣ ||2||

ರೋಗಿಗಳ ಮುಗುಳ್ನಗೆಯಲ್ಲಿ ಸಂತೃಪ್ತಿ ಭಾವವ ಕಾಣುವ ನಿಸ್ವಾರ್ಥ ಮನಕ್ಕೆಕಾಯಿಲೆಯಿಂದ ನೊಂದು ಬೆಂದಜೀವಿಗಳಿಗೆ ಸಂಯಮದಿಂದ ಸಾಂತ್ವನ ಹೇಳುವ ಸಹನಾ ಮೂರ್ತಿಗೆಬಾಳ ಮುಸ್ಸಂಜೆಯಲ್ಲಿ ಪಯಣಿಸುವ ನೊಂದ ಮನಗಳಿಗೆ ಜೀವನೋತ್ಸಹ ತುಂಬುವ ಜೀವ ದಾತನಿಗೆ ಒಮ್ಮನದಿಂದ ನಮಿಸೋಣ ||3||

ನವಜಾತ ಶಿಶುಗಳ ಸಂರಕ್ಷಕನಿಗೆಮನುಜರ ದಬ್ಬಾಳಿಕೆಗೆ ಬೆಚ್ಚದೆ, ಬೆದರೆದೆ ನಿಷ್ಠೆಯಿಂದ ಸೇವೆಗೈವನಿಷ್ಠಾವಂತನಿಗೆಚಿತ್ತ ವಿಕಲ್ಪ ಹೊಂದಿದ ಮನೋ ರೋಗಿಗಳ ಬದುಕಿನ ಭರವಸೆಯ ಮೂರ್ತಿಗೆ ಒಮ್ಮನದಿಂದ ನಮಿಸೋಣ ||4||

ಹಗಲೆನ್ನದೇ, ಇರುಳೆನ್ನದೆ, ಸಮಯದ ಗಡುವಿಲ್ಲದೆ ಅವಿರತ ಸೇವೆಗೈವ ಕಾಯಕ ಯೋಗಿಗೆವೈದ್ಯನ್ನರಾಯಣೋ ಹರಿ ಎಂಬೀನುಡಿಗೆ ಭಾಜನರಾದ ಹೃದಯ ವೈಶಾಲ್ಯವುಳ್ಳ ಮಾನವೀಯತೆಯ ಮೂರ್ತಿಗೆ ಒಮ್ಮನದಿಂದ ನಮಿಸೋಣ ||5||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆ ಶಾಖೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button