ಲೋಕಾಯುಕ್ತ ದಾಳಿ ತಾಲೂಕ ಭೂ ದಾಖಲೆಗಳ ಕಚೇರಿಯಲ್ಲಿ ದಾಳಿ – ಸಿಕ್ಕಿ ಬಿದ್ದ ಅಧಿಕಾರಿಗಳು.
ಕೂಡ್ಲಿಗಿ ಸ.12

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ಸಂಜೆ ಸಮಯ 5:30 ರ ವೇಳೆಯಲ್ಲಿ ಹೊಸಪೇಟೆ ಲೋಕಾಯುಕ್ತ ದಾಳಿ ಡಿ.ವೈ.ಎಸ್.ಪಿ ಸಚ್ಚಿನ್.ಎಸ್ ಚಲವಾದಿ ಇವರ ನೇತೃತ್ವದಲ್ಲಿ ದಾಳಿ ಈ ಸಂದರ್ಭದಲ್ಲಿ ಪಿ.ಐ ಅಂಬ್ರೆಷ್, ಹೊಸಪೇಟೆ ಪಿ.ಐ ಸುರೇಶ ಬಳ್ಳಾರಿ ಪಿ.ಐ ರಾಜೇಶ್ ರವರು ಹಾಗೂ ದಾಳಿ ಭೂ ಮಾಪನ ಇಲಾಖೆಯ ಸಹಾಯಕ ನಿರ್ದೇಶಕ ತಮ್ಮ ಕಚೇರಿಯಲ್ಲಿ ಸರ್ವೆರ್ ನವೀನ್ ಕುಮಾರ ವಾಲಿ ಇವರು ಪಹಣಿ ಇಂಡಿಕರಣ ಮಾಡಲು 30 ಸಾವಿರ ರೂಪಾಯಿ ಒಪ್ಪಿಗೆ ಮಾಡಿ ಕೊಂಡು 20 ಸಾವಿರ ರೂಪಾಯಿಗಳು ತೆಗೆದು ಕೊಳ್ಳುತಿದ್ದ ಸಂದರ್ಭದಲ್ಲಿ ಶಿವಪುರ ಗ್ರಾಮದ ಬಾಗಳಿ ತೇಜಸ್, ಎಂಬ ವ್ಯಕ್ತಿಯ ಹತ್ತಿರ ತೆಗೆದು ಕೊಳ್ಳುತ್ತಿರುವ ಸಂದರ್ಭದಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಶಿವಪುರ ಗ್ರಾಮಕ್ಕೆ ಸೇರಿರುವಂತ ಭೂಮಿಯು ಎನ್.ಎಚ್ 50 ರಸ್ತೆಗೆ 28. ಸೆಂಟ್ಸ್ ಸೇರಿರುವಂತ ಪಹಣಿಯನ್ನು “ಇಂಡಿಕರಣ” ಮಾಡುವುದಕ್ಕೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.ಆದರೆ ಎಲ್ಲಾ ದಾಖಲಾತಿಗಳು ಸರಿ ಇದ್ದರು ತಿಂಗಳ ವರೆಗೂ ಹಲೇದಾಡಿಸಿ ಕೊನೆಗೆ 45 ಸಾವಿರ ರೂಪಾಯಿ. ಹಣವನ್ನು ಕೇಳಿದ್ದಾರೆ ಎಂದು ಪಿರ್ಯಾದಿದಾರ ವ್ಯಕ್ತಿ ತೇಜಸ್ ತಿಳಿಸಿರುತ್ತಾರೆ. ಹಾಗೆ ಎ.ಡಿ.ಎಲ್.ಆರ್ ವಿಜಯ್ ಕುಮಾರ್ ಇವರನ್ನು ಸಹ ಇವರ ಮೇಲೆ ಅಧಿಕಾರಿಗಳು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ