ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಸಂಘ ಸದಾ ಸಿದ್ದ – ಸಂಗಮೇಶ ಪಾಟೀಲ.
ಕಮತಗಿ ಜು.14

ತಾಲೂಕಾ ಹಂತದ ಶಿಕ್ಷಕರ ಸಮಸ್ಯೆಗಳಾದ ಶಿಕ್ಷಕರಿಗೆ ಬಿ.ಎಲ್.ಓ ಕಾರ್ಯದ ಒತ್ತಡ , ನಿವೃತ್ತ ನೌಕರರ ಸಮಸ್ಯೆ, ಬಡ್ತಿ ವೇತನ, ಕಾಲಮಿತಿ ಬಡ್ತಿ ಸರಿಯಾದ ಸಮಯಕ್ಕೆ ಅನುಷ್ಟಾನ ವಾಗದಿರುವುದು, ಸೇವಾ ಪುಸ್ತಕದ ಪರಿಶೀಲನೆ. ಹೀಗೆ ಹತ್ತು ಹಲವು ಶಿಕ್ಷಕರ ಸಮಸ್ಯೆಗಳ ಪಟ್ಟಿಯನ್ನು ಸ್ವೀಕರಿಸಿ ತಮ್ಮೆಲ್ಲ ಸಮಸ್ಯೆ ಪರಿಹಾರಕ್ಕೆ ಸಂಘ ಸದಾ ಸಿದ್ದ ಎಂದು ಹುನಗುಂದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ ತಿಳಿಸಿದರು. ಇಲ್ಲಿನ ಕೆ ಜಿ ಎಸ್ ನಂ1 ಶಾಲೆಯಲ್ಲಿ “ಸಂಘದ ನಡಿಗೆ ಶಿಕ್ಷಕರ ಕಡೆಗೆ” ಕಮತಗಿ ಹಾಗೂ ಮೂಗನೂರ ಭಾಗದ ಶಿಕ್ಷಕರ ಸಮಸ್ಯೆಯ ಪರಿಹಾರಕ್ಕಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಶಿಕ್ಷಕರ ಸಮಸ್ಯೆಗಳನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕಛೇರಿಯ ಸಿಬ್ಬಂದಿಗಳ ಗಮನಕ್ಕೆ ತಂದು ಸಂಘ ಹಾಗೂ ಹಿರಿಯ ಮಾರ್ಗದರ್ಶಿ ಶಿಕ್ಷಕರ ಸಹಾಯದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ತಿಳಿಸಿದರು”.

ಹಿರಿಯ ಶಿಕ್ಷಕರಾದ S N ಶೆಟ್ಟರ, S G ಹುದ್ದಾರ್, ಕುದರಿ ಗುರುಗಳು ಮಾತನಾಡಿ ಸಂಘವು ಶಿಕ್ಷಕರ ಬಳಿಗೆ ಬಂದು ಅವರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಕ್ರಮ ಕೈ ಗೊಳ್ಳುತ್ತಿರುವುದು ಶ್ಲಾಘನೀಯ ಹಾಗೂ ಮಾದರಿ ಕಾರ್ಯವಾಗಿದೆ ಎಂದರು. ಜಿ.ಎ.ಗೌಡರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಸ್ ಬಿ ತುಂಬರಗುದ್ದಿ, ಎಸ್ ಪಿ ಮಾದಿನಾಳ, ಪಿ.ಎಸ್.ಚವಾಣ್, ಶ್ರೀ ಶೆಟ್ಟರ್ , ಎಂ ಜಿ ಗೌಡರ, ಶ್ರೀ ಹಲಕಟ್ಟಿ, ಶ್ರೀ ಮಕಾನ್ದಾರ ಹಾಗೂ ಕಮತಗಿ, ಮೂಗನೂರ ಶಾಲೆಗಳ ಮುಖ್ಯ ಗುರುಗಳು ಮತ್ತು 70 ಕ್ಕೂ ಶಿಕ್ಷಕರು ಹಾಜರಿದ್ದರು. ಸಂಘದ ಪದಾಧಿಕಾರಿಗಳಾದ ಶ್ರೀಮತಿ ತುಳಜಾಬಾಯಿ ಬೊಂಬ್ಲೆ, ರಮೇಶ್ ಕೊಳಗೇರಿ, ನಡುವಿನಮನಿ, ಕಾಂಬಳೆ, ರಾಜು ಸುಂಕದ, ಶ್ರೀ ಮುತ್ತಪ್ಪ ಪೂಜಾರಿ ಶರಣಪ್ಪ ಮರೋಳ ಮತ್ತಿತರು ಹಾಜರಿದ್ದರು. ಪಿ.ಜಿ.ಬಾಳಕ್ಕನವರ ಪ್ರಾರ್ಥಸಿದರು. ರಮೇಶ್ ಮಿಣಜಿಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಬಿ ಬಿಜಾಪೂರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.