ತಾಲೂಕಿನ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕರಾಗಿ ಟಣಕನಕಲ್ ದೇವಪ್ಪ.

ಕೂಡ್ಲಿಗಿ ಸಪ್ಟೆಂಬರ್.12

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಶ್ರೀ ಹಿರೇಮಠ ವಿದ್ಯಾಪೀಠ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಮಾಜ ಶಾಸ್ತ್ರದ ಉಪನ್ಯಾಸಕರಾದ ಟಿ. ದೇವಪ್ಪ ರವರು ತಮ್ಮ ಉಪನ್ಯಾಸಕ ವೃತ್ತಿಯಲ್ಲಿ ನಿರಂತರವಾಗಿ 24ನೇ ವರ್ಷದ ಉಪನ್ಯಾಸ ಶಿಕ್ಷಕ ಸೇವೆಯ ತಮ್ಮ ಅಮೂಲ್ಯವಾದ ಎಲ್ಲಾ ದಿನಗಳನ್ನು ವಿದ್ಯಾರ್ಥಿಗಳ ಮಧ್ಯೆ ತಮ್ಮಲ್ಲಿರುವಂತಹ ಜ್ಞಾನವನ್ನು ಕಾಲೇಜಿಗೆ ಸೇರುವಂತಹ ಪ್ರತಿಭೆಗಳಿಗೆ ತಕ್ಕಂತೆ ತಮ್ಮ ಶಿಕ್ಷಕ ಸೇವೆಯನ್ನು ಪರಕಾಯ ಪ್ರವೇಶ ಕೇವಲ ಪಾತ್ರಧಾರಿಗಳಿಗೆ ಸೀಮಿತವಾಗದೆ, ಉಪನ್ಯಾಸಕರ ಭೋದನೆಯಲ್ಲೂ, ಕಾಣಬಹುದಾಗಿದೆ. ಪಟ್ಟಣದ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನಸ್ಥಿತಿಗೆ ತಕ್ಕಂತೆ ಭೋದನೆಯ ಕಲೆಯನ್ನು ಅಳವಡಿಸಿಕೊಂಡು, ವಿದ್ಯಾರ್ಥಿಗಳ ನೆಚ್ಚಿನ ಗುರುಗಳು (ಲೆಕ್ಚರರ್) ಆಗಿರುವ ಟಣಕನಕಲ್ ದೇವಪ್ಪ ಒಬ್ಬ ಕಾಯಕ ನಿಷ್ಠ ಕರ್ತವ್ಯ ಪರಿಪಾಲಕರಾಗಿ ವಿದ್ಯಾರ್ಥಿಗಳ ಮಧ್ಯೆ ಕಂಗೊಳಿಸುತ್ತಿರುವುದರೊಂದಿಗೆ 2023ನೇ ಸಾಲಿನ ಅವಧಿಯಲ್ಲಿ ಕೂಡ್ಲಿಗಿ ತಾಲೂಕಿನ ಉತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ ಇದು ಹೆಮ್ಮೆಯ ವಿಷಯವಾಗಿದೆ.

ಇವರ ಹಿನ್ನೆಲೆ: ಕೊಪ್ಪಳ ಮೂಲದ ಯತ್ನಟ್ಟಿಯ ಪುಟ್ಟ ಹಳ್ಳಿಯಲ್ಲಿ ಜನಿಸಿದ ದೇವಪ್ಪ ಅಕ್ಷರಶಃ ಬಡತನದ ಬೇಗುದಿಯಲ್ಲಿ ಬೆಂದ ಪರಿಪಕ್ವತೆಯ ಜೀವಿ. ವಿದ್ಯಾರ್ಥಿ ದಿಸೆಯಲ್ಲಿ ತಾನು ಪಟ್ಟ ಕಷ್ಟಗಳು,ಅನುಭವಿಸಿರುವ ನೋವುಗಳು, ಕಾಲೇಜು ಫೀಜುಗೂ ಪರದಾಡಿದ ಪರಿಸ್ಥಿತಿಗಳ ಎದುರಿಸಿರುವ ದೇವಪ್ಪ. ಈಗಿನ ವಿದ್ಯಾರ್ಥಿಗಳು ಅನುಭವಿಸಬಾರದೆಂಬ ತಮ್ಮ ಅನುಭವದ ಕಳ ಕಳಿಯಿಂದ, ಗುಣಾತ್ಮಕ ನೈತಿಕ ಶಿಕ್ಷಣದ ಮೌಲ್ಯವನ್ನು ಭೋದನೆಯಲ್ಲಿ ಕಾಣಬಹುದಾಗಿದೆ. ಇದರಿಂದ ವಿದ್ಯಾರ್ಥಿಗಳು ಇವರ ಭೋದನೆಯನ್ನು ಅಮಿತಾನಂದದಿಂದ ಆಲಿಸುವುದರೊಂದಿಗೆ, ಕ್ರೀಯಾಶೀಲತೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಸಮಾಜಶಾಸ್ತ್ರ ಒಂದು ವಿಷಯವೆಂದು ಪರಿಗಣಿಸದೆ, ಜೀವನದಲ್ಲಿ ಅಳವಡಿಸಿಕೊಂಡು, ಮೌಲ್ಯಧಾರಿತ ಜೀವನವನ್ನು, ಹೇಗೆ ನಿರ್ವಹಿಸಬೇಕೆಂದು ಮನಮುಟ್ಟವ ರೀತಿಯಲ್ಲಿ ಭೋದಿಸುವುದು ಇವರಿಗೆ ಸಿದ್ಧಿಸಿದೆ. ವಿದ್ಯಾರ್ಥಿಗಳು ಇವರನ್ನು ಕೇವಲ ಉಪನ್ಯಾಸಕರಾಗಿ ನೋಡದೆ, ಜೀವನದ ಮಾರ್ಗದರ್ಶಕರಾಗಿಯೂ ನೋಡುತ್ತಾರೆ.ಪಿ.ಯು. ಬೋರ್ಡ್ ಶ್ಲಾಘನೆ: ಸುಧೀರ್ಘ ಸೇವಾನುಭವದಿಂದಾಗಿ,

ಪರೀಕ್ಷಾ ಮೌಲ್ಯಮಾಪನ ಕೇಂದ್ರದ ಮುಖ್ಯ ಪರೀಕ್ಷಕರಾಗಿ ಹಾಗೂ ಕಚೇರಿ ಡಿ.ಸಿ.ಯಾಗಿ ಕಾರ್ಯಾದಕ್ಷತೆಯಿಂದ ಹೆಸರು ಮಾಡಿದ ದೇವಪ್ಪ ಇವರನ್ನು ಪಿ.ಯು. ಮಂಡಳಿ ನಿರ್ಧೇಶಕರಿಂದ ಪ್ರಶಂಸೆಗೆ ಭಾಜನರಾಗಿದ್ದಾರೆ. ರಾಜ್ಯ ಮಟ್ಟದ ಉತ್ತಮ ವಿಷಯಾಧಾರಿತ ವಾರ್ಷಿಕ ಪ್ರಶ್ನೆಪತ್ರಿಕೆಗಳನ್ನು ಹಲವು ಬಾರಿ ನೀಡಿರುವುದು ಇವರ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರಿಂದ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಪದವಿ ಪೂರ್ವ ಶಿಕ್ಷಣ ಮಂಡಳಿ ನೇಮಿಸಿದೆ. ಅಲ್ಲದೆ ಜಿಲ್ಲಾ ಕಾರ್ಯದರ್ಶಿಯಾಗಿ ಸಮಾಜಶಾಸ್ತ್ರ ವೇದಿಕೆಗೆ ಕಾರ್ಯನಿರ್ವಹಿಸುತ್ತಿದ್ದಾರೆ.ಎನ್.ಎಸ್.ಎಸ್: ಶ್ರಮವೇ ಜಯತೆ ಎಂಬ ಘೋಷವಾಕ್ಯದೊಡನೆ ಎನ್.ಎಸ್.ಎಸ್. ಘಟಕಾಧಿಕಾರಿಯಾಗಿ ಬಹು ದಕ್ಷತೆಯಿಂದ ಕಾರ್ಯನಿರ್ವಹಿಸುವ ದೇವಪ್ಪ ವಿದ್ಯಾರ್ಥಿಗಳಿಗೆ ಬಲು ಅಪ್ಯಾಯಮಾನವಾಗುತ್ತಾರೆ. ಕಾಲೇಜಿನ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪರಿಗಣಿಸಿ, ಊಟೋಪಚಾರದಲಿ ಲೋಪವಾಗದಂತೆ ನೋಡಿಕೊಂಡು, ನಡೆದುಕೊಳ್ಳವ ರೀತಿ ಅವಲೋಕಿಸಿದಾಗ, ಒಬ್ಬ ಪರಿಪೂರ್ಣ ಜೀವನವ್ಯಕ್ತಿಯಾಗಿ ಮಿನುಗುವ ನಕ್ಷತ್ರದಂತೆ ಗೋಚರಿಸುತ್ತಾರೆ. ಪ್ರಾಯೋಗಿಕವಾಗಿ ವಿಷಯ ವಿಸ್ತಾರವಾಗಲು ಅನುಮಾಡಿಕೊಟ್ಟಿರುವ ಎನ್.ಎಸ್.ಎಸ್ ಶಿಬಿರಾರ್ಥಿಗಳಿಗೆ ಗ್ರಾಮೀಣ ಜೀವನದ ಸೊಗಡು,ಸಂಭ್ರಮ,ಕಲೆಗಳ ಬಗ್ಗೆ ಅನಾವರಣವಾಗುತ್ತದೆ.

ಅಲ್ಲದೆ, ನೆರೆ ಹೊರೆಯವರೊಂದಿಗೆ ಹೊಂದಾಣಿಕೆ, ಆರೋಗ್ಯದ ಬಗ್ಗೆ ಕಾಳಜಿವಹಿಸುವ ಇತರೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಮಗ್ನರಾಗುವಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವುದರಲ್ಲಿ ಒಬ್ಬ ಯಶಸ್ವಿ ಎನ್.ಎಸ್.ಎಸ್. ಅಧಿಕಾರಿಯಾಗುತ್ತಾರೆ. ನಿರ್ವಹಣೆಗಾಗಿ ಅತ್ಯುತ್ತಮ ಪ್ರಶಸ್ತಿಗೂ ದೇವಪ್ಪ ಪುರಸ್ಕೃತ ರಾಗಿದ್ದಾರೆ.ದಣಿವರೆಯದ ಉಪನ್ಯಾಸಕ: ನಿರಂತರ ಎರಡು ವರ್ಷಗಳ ಕಾಲ ಒಂದು ಬಾರಿಯೂ, ರಜೆ ಪಡೆಯದೆ, ವಿದ್ಯಾರ್ಥಿಗಳಿಗೆ ಭೋದನೆ ಮಾಡಿದ ದಣಿವರಿಯದ ಉಪನ್ಯಾಸಕರಾಗಿದ್ದಾರೆ. ಸಮಾಜ ಮುಖಿ: ವೇತನದ ಸ್ವಲ್ಪ ಭಾಗದ ಹಣವನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಉದ್ದೇಶಕ್ಕಾಗಿ ವಿನಿಯೋಗಿಸುತ್ತಾರೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕಿರು ಪರೀಕ್ಷಗಳ ಮೂಲಕ ಉತ್ತಮ ಅಂಕಗಳನ್ನು ಗಳಿಸಿದವರಿಗೆ ಬಹುಮಾನ ನೀಡುತ್ತಾರೆ. ಹೀಗೆ, ಹತ್ತು,ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಇವರ ಕಾರ್ಯಕ್ಕೆ ಜನತೆ ತಲೆದೂಗುವಂತೆ ಮಾಡಿರುವುದು ಸುಳ್ಳಲ್ಲ. ಇದನ್ನರಿತ ಶಿಕ್ಷಣ ಇಲಾಖೆ ಇವರನ್ನು ಗುರುತಿಸಿ ನಡೆಯುವಂತಹ ಡಾಕ್ಟರ್ ರಾಧಾಕೃಷ್ಣ ರವರ ಜಯಂತಿಯ ದಿನದಂದು ಶಿಕ್ಷಕರ ದಿನಾಚರಣೆ ಅಂಗವಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ಶಾಸಕರಾದಂತಹ ಡಾಕ್ಟರ್ ಎನ್‌ಟಿ ಶ್ರೀನಿವಾಸ್ ರವರು ಹಾಗೂ ತಾಲೂಕು ದಂಡಾಧಿಕಾರಿಗಳ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರುಗಳ ಸಮ್ಮುಖದಲ್ಲಿ ಟಿ. ದೇವಪ್ಪ ಇವರನ್ನು ತಾಲೂಕಿನ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತ ಎಂದು ಘೋಷಿಸಿ ಶ್ಯಾಲು ಹೊದಿಸಿ ಸನ್ಮಾನದೊಂದಿಗೆ ಪ್ರಶಸ್ತಿ ಪತ್ರವನ್ನು ಸಹ ನೀಡಿ ಗೌರವಿಸಲಾಯಿತು.

ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button