ಸಾಧಕರ ಬದುಕು ಎನ್.ಎಸ್.ಎಸ್ – ಶಿಬಿರಾರ್ಥಿಗಳಿಗೆ ಆದರ್ಶವಾಗಲಿ.

ಬೇವೂರ ಜು.24

ಗಾಂಧೀಜಿ, ಅಬ್ರಾಹಿಂ ಲಿಂಕನ್, ಅಲೆಕ್ಸಾಂಡರ್ ಮುಂತಾದ ಮಹನೀಯರ ಬದುಕಿನ ಸಾಹಸ ಗಾಥೆಗಳು ಯುವ ಸಮುದಾಯಕ್ಕೆ ಆದರ್ಶಪ್ರಾಯ ವಾಗಬೇಕು ಅನೇಕ ಪೆಟ್ಟುಗಳನ್ನು ಏರಿಳಿತಗಳನ್ನು ಕಂಡು ಜೀವನದಲ್ಲಿ ಸಾಧನೆ ತೋರಿದ ಸಾಧಕರ ಬದುಕು ಚಿರಸ್ಮರಣೆಯಾಗಿದೆ ಎಂದು ಡಾ. ಎಸ್ ಎಸ್ ಹಂಗರಗಿ ಪ್ರಾಧ್ಯಾಪಕರು ಹೇಳಿದರು ಪಿ. ಎಸ್ .ಎಸ್ ಕಾಲೇಜಿನ ವತಿಯಿಂದ ಸಮೀಪದ ಚಿಟಗಿನಕೊಪ್ಪ ಗ್ರಾಮದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೃಷ್ಣ ಬಲದಂಡೆ ಸೀತಿಮನಿಯ ಶ್ರೀ ವಶಿಷ್ಠ ಮಹಾಮನಿಗಳು ಶ್ರದ್ದಾನಂದ ಮಠ ಪೂಜ್ಯರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನುಡಿಗಳನ್ನಾಡಿ ವಿದ್ಯಾರ್ಥಿಗಳು ವಿಜ್ಞಾನದ ಜ್ಞಾನಕ್ಕಿಂತ ಸಂಸ್ಕಾರದ ಬದುಕಿಗೆ ಹೆಚ್ಚಿನ ಬೆಲೆ ಕೊಡ ಬೇಕೆಂದು ಹೇಳಿದರು. ಆದರ್ಶ ವಿದ್ಯಾ ವರ್ಧಕ ಸಂಘದ ಸದಸ್ಯರಾದ ಶ್ರೀ ಡಿ.ಜಿ ಶಿರೂರ ಅಧ್ಯಕ್ಷತೆ ವಹಿಸಿದ್ದರು. ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಡಾ. ಜ.ಗು. ಬೈರಮಟ್ಟಿ, ಹಿರಿಯ ಉಪನ್ಯಾಸಕರಾದ ಶ್ರೀ ಬಿ.ಬಿ ಬೇವೂರ ಉಪನ್ಯಾಸಕರಾದ ಶ್ರೀ ಎನ್. ಬಿ ಬೆನ್ನೂರ ಸೇರಿದಂತೆ ಕಾರ್ಯಕ್ರಮದಲ್ಲಿ ವೈ. ಎಚ್ ಬೆನಕನವಾರಿ ಎನ್. ಬಿ. ಪಾಟೀಲ್, ಶ್ರೀ ಜಿ.ಸಿ ಕಡೂರು ಶ್ರೀಮತಿ ಎಸ್. ಎಂ ಚಲವಾದಿ ಹಾಗೂ ಎಸ್.ಡಿ.ಎಂ.ಸಿಯ ಸರ್ವ ಸದಸ್ಯರು ಪ್ರಭಾರಿ ಮುಖ್ಯ ಗುರುಗಳಾದ ಸುನಿಲ ಪಾಟೀಲ ಗ್ರಾಮದ ಗುರುಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪನ್ಯಾಸಕರಾದ ಶ್ರೀ ಎಸ್ ಎಸ್ ಆದಾಪುರ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು ಡಾ. ಸಂಗಮೇಶ. ಬಿ.ಹಂಚಿನಾಳ ಅತಿಥಿಗಳನ್ನ ಪರಿಚಯಿಸಿದರು. ಡಿ.ವಾಯ್.ಬುಡ್ಡಿಯವರ ಮಾಲಾರ್ಪಣೆ ಕಾರ್ಯಕ್ರಮ ನೆರವೇರಿಸಿ ಕೊಟ್ಟರು. ಡಾ.ಎ.ಎಮ್.ಗೊರಚಿಕ್ಕನವರ ನಿರೂಪಿಸಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಶ್ರೀ ಜಿ.ಎಸ್ ಗೌಡರ ವಂದಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಾಲೇಜಿನ 50 ಶಿಬಿರಾರ್ಥಿ ಸ್ವಯಂ ಸೇವಕರು ಭಾಗಿಯಾಗಿದ್ದರು.

ವರದಿ : ಅಮರೇಶ ಮ.ಗೊರಚಿಕ್ಕನವರ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button