ಪತ್ರಕರ್ತರ ಜೀವನ ಭದ್ರತೆ ಮತ್ತು ಆರ್ಥಿಕ ನೆರವು ಅವಶ್ಯ, ಪತ್ರಕರ್ತರ ಬಗ್ಗೆ ಸರ್ಕಾರ ಮತ್ತು ಸಮಾಜ – ಚಿಂತನೆ ಮಾಡಲಿ.
ಹುನಗುಂದ ಜು.26

ಆಡಳತ ಯಂತ್ರವನ್ನು ಶುದ್ದೀಕರಿಸಿ ಸಮಾಜ ಮುಖಿ ಯನ್ನಾಗಿ ಮಾಡಿ ಜನರ ಕಲ್ಯಾಣಕ್ಕಾಗಿ ಆಡಳಿತವನ್ನು ಬಳಸುವಂತೆ ಮಾಡುವ ಶಕ್ತಿ ಪತ್ರಿಕಾ ರಂಗಕ್ಕೆ ಮತ್ತು ಪತ್ರಕರ್ತರಿಗೆ ಇದೆ ಎಂದು ಚಿತ್ತರಗಿ ಸಂಸ್ಥಾನ ಮಠ ಇಳಕಲ್ಲದ ಗುರು ಮಹಾಂತ ಶ್ರೀಗಳು ಹೇಳಿದರು. ಗುರುವಾರ ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹುನಗುಂದ ಘಟಕ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಯೋಗದಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿದ ಅವರು, ಜಗತ್ತಿನಲ್ಲಿ ಅನೇಕ ತನಿಖಾ ತಂಡಕ್ಕೆ ಮತ್ತು ಸರ್ಕಾರಕ್ಕೆ ಗೊತ್ತಿಲ್ಲದ ಸುದ್ದಿಯನ್ನು ಪತ್ರಕರ್ತರು ಹುಡಿಕಿ ಜನರಿಗೆ ತಿಳಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ಸಿಬಿಐ ಅಧಿಕಾರಿಗಳಿಗಿಂತಲ್ಲೂ ಒಂದು ಪ್ರಕರಣದ ಶೋಧಕ ಕಾರ್ಯವನ್ನು ಪತ್ರಕರ್ತರು ಮಾಡತ್ತಾರೆ. ಸರ್ಕಾರ ಮಟ್ಟದಲ್ಲಿ ಮತ್ತು ಸರ್ಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಹಗರಣಗಳನ್ನು ಹೊರ ಹಾಕುವರೇ ಪತ್ರಕರ್ತರು ಮತ್ತು ಪತ್ರಿಕಾಗಳಾಗಿವೆ. ತಮ್ಮ ಜೀವನದ ಹಂಗು ತೊರೆದು ಸೂಕ್ಷ್ಮವಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಭದ್ರತೆಯಿಲ್ಲ ಮತ್ತು ಆರ್ಥಿಕ ನೆರವು ಸಹ ಸಿಗುತ್ತಿಲ್ಲ. ಮಾನವೀಯತೆಯ ಉಳಿವಿಗಾಗಿ ಎಷ್ಟೋ ಜನ ಪತ್ರಕರ್ತರ ತೆಲೆ ದಂಡವಾಗಿದೆ. ಅಂತಹ ಪತ್ರಕರ್ತರ ಬಗ್ಗೆ ಸಮಾಜ ಮತ್ತು ಸರ್ಕಾರ ಮಟ್ಟದಲ್ಲಿ ಅವರ ಭದ್ರತೆ ಮತ್ತು ಆರ್ಥಿಕ ನೆರುವು ನೀಡುವ ಚಿಂತನೆಯಾಗಲಿ ಎಂದರು.ಕಾನಿಪ ಜಿಲ್ಲಾಧ್ಯಕ್ಷ ಆನಂದ ಧಲಬಂಜನ ಮಾತನಾಡಿ ಇಂದಿನ ವಿಜ್ಞಾನ ತಂತ್ರಜ್ಞಾನ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳ ನಿಖರಗಿಂತ ಪತ್ರಿಕೆಗಳ ಸುದ್ದಿ ಬಹಳಷ್ಟು ನಿಖರವಾಗಿರುತ್ತದೆ. ಪತ್ರಿಕಾ ರಂಗ ಇಂದು ಬಂಡವಾಳ ಶಾಹಿಗಳ ಕಪಿಮುಷ್ಠಿಗೆ ಸಿಲಿಕಿ ಕೊಂಡಿದ್ದು ಅವರು ಹೇಳಿದಂತೆ ಪತ್ರಕರ್ತರು ಕಾರ್ಯ ನಿರ್ವಹಿಸ ಬೇಕಾಗಿದೆ. ಪತ್ರಿಕೆಗಳು ಸುದ್ದಿಗಳಿಗಿಂತ ಜಾಹೀರಾತುಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇಂದಿನ ಮಕ್ಕಳು ಮೋಬೈಲಗಳನ್ನು ನೋಡುವುದ್ದನ್ನು ಬಿಟ್ಟು ಪತ್ರಿಕೆ ಮತ್ತು ಪುಸ್ತಕಗಳ ಅಧ್ಯಯನದ ಕಡೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದರು.ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಶರಣಪ್ಪ ಹೂಲಗೇರಿ ಮಾತನಾಡಿ ಪತ್ರಿಕೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಮಾರ್ನಿಂಗ್ ಶೋ ಮತ್ತು ಲಂಡನ್ ಟೈಮ್ಸ್ ಪತ್ರಿಕೆಗಳು ಜಗತ್ತಿನ ಮೊದಲ ಪತ್ರಿಕೆಯಾಗಿವೆ. ಪತ್ರಕರ್ತರರಲ್ಲಿ ಸತ್ಯ, ನಿಖರತೆ, ನ್ಯಾಯಸಮ್ಮತ, ಸಮಾನತೆ, ನಿಷ್ಪಕ್ಷಪಾತ ಹಾಗೂ ಮಾನವೀಯ ಗುಣಗಳನ್ನು ಅಳವಡಿಸಿ ಕೊಳ್ಳಬೇಕು. ಸುದ್ದಿಗಳ ಬಗ್ಗೆ ಸತ್ಯತೆಯನ್ನು ಅರಿತು ನಿಖರವಾಗಿ ಜನರಿಗೆ ತಿಳಿಸುವ ಕಾರ್ಯ ವಾಗಬೇಕಿದೆ ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಸುರೇಶ ಎಚ್.ಎಸ್. ಮಾತನಾಡಿದರು. ಇದೇ ಸಂದರ್ಭದಲ್ಲಿ ಪತ್ರಕಾ ರಂಗ ಸೇವೆಯನ್ನು ಗುರುತಿಸಿ ದಿ.ಶರಣ ಬಸವರಾಜ ಜಿಗಜಿನ್ನಿ ಅವರ ಸ್ಮರಣಾರ್ಥವಾಗಿ ನೀಡುವ ಹಿರಿಯ ಪತ್ರಕರ್ತರ ಪ್ರಶಸ್ತಿಗೆ ಭಾಜನಾರದ ಮಲ್ಲಿಕಾರ್ಜುನ ದರಗಾದ, ಸರ್ಕಾರದ ನಾಮನಿರ್ದೇಶನ ಸದಸ್ಯರಾದ ಜಬ್ಬಾರ ಕಲಬುರ್ಗಿ, ಅಮರೇಶ ನಾಗೂರ, ಮಹಿಬೂಬ ಸರಕಾವಸ್, ಜಿಲ್ಲಾ ಸಂಪಾದಕರ ಸಂಘದ ಅಧ್ಯಕ್ಷ ಜಾಕೀರಹುಸೇನ ತಾಳಿಕೋಟಿ ಅವರಿಗೆ ಕಾನಿಪ ಸಂಘ ದಿಂದ ಸನ್ಮಾನಿಸಿ ಗೌರವಿಸಲಾಯಿತು. ಪತ್ರಿಕಾ ವಿತರಕರಿಗೆ ನೋಟ್ಬುಕ್ ಮತ್ತು ಪೆನ್ನಗಳನ್ನು ವಿತರಿಸಲಾಯಿತು.ತಹಶೀಲ್ದಾರ ನಿಂಗಪ್ಪ ಬಿರಾದಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಕಾನಿಪ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ಪಾಟೀಲ ಅಧ್ಯಕ್ಷತೆಯನ್ನು ವಹಿಸಿ ಕೊಂಡಿದ್ದರು.ತಾ.ಪಂ ಇಓ ಮುರಳಿಧರ ದೇಶಪಾಂಡೆ, ಸಾಹಿತಿ ಸಿದ್ದಲಿಂಗಪ್ಪ ಬೀಳಗಿ,ಪತ್ರಕರ್ತರಾದ ವೀರೇಶ ಕುರ್ತಕೋಟಿ, ಬಸವರಾಜ ಕಮ್ಮಾರ,ಶರಣು ಹಳಪೇಟಿ, ರಿಯಾಜ್ ಸರಕಾವಸ್, ಮಲ್ಲಿಕಾರ್ಜುನ ಬಂಡರಗಲ್ಲ, ಮಹಾಂತೇಶ ತೋಪಲಕಟ್ಟಿ, ಸಂಗಮೇಶ ಹೂಗಾರ, ಜಗದೀಶ ಹದ್ಲಿ, ಮುತ್ತಣ್ಣ ಬಳಿಗಾರ, ಅಂದಾನಪ್ಪ ಸುಂಕದ, ಬಸವರಾಜ ನಿಡಗುಂದಿ, ಸುರೇಶ ಪತ್ತಾರ, ಅಶೋಕ ಹಂದ್ರಾಳ, ಗುರುಬಸಯ್ಯ ಹಿರೇಮಠ, ಚಂದ್ರು ಗಂಗೂರ, ದೇವು ಕುರಿ, ವಿಜಯ ಸಿಂಗದ, ಮುಖಂಡರಾದ ರಾಮನಗೌಡ ಬೆಳ್ಳಿಹಾಳ, ಶಿವಪ್ಪ ನಾಗೂರ ಸೇರಿದಂತೆ ಅನೇಕರು ಇದ್ದರು. ಬಸವರಾಜ ಬಡಿಗೇರ ಸ್ವಾಗತಿಸಿದರು, ಅಮರೇಶ ನಾಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾನಿಪ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊಸಮನಿ ನಿರೂಪಿಸಿ ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ ಎಂ.ಬಂಡರಗಲ್ಲ.ಹುನಗುಂದ.