ಕವಯಿತ್ರಿ ಸರಸ್ವತಿ ಕೆ. ನಾಗರಾಜ್ ರವರಿಗೆ – ಕವಿ ಕಾವ್ಯ ವಿಭೂಷಣ ಪ್ರಶಸ್ತಿ ಲಭಿಸಿದೆ.
ಹಿರಿಯೂರು ಜು.29

ದಿನಾಂಕ:- 28/07/2024 ಬೆಣ್ಣೆ ನಗರಿಯ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ದಂದು ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡ ಇವರ ವತಿಯಿಂದ ನೆಡೆದ ಜಿಲ್ಲಾ ಸಮ್ಮೇಳನ ಮತ್ತು ದಾಖಲೆ ಬರಹ ಸ್ಪರ್ಧೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿತ್ತು. ಮಕ್ಕಳಿಗೆ ಬೇಕು ಸಮಾಜದ ಅರಿವು ಎಂಬ ವಿಷಯದಡಿ ಸುಮಾರು 150 ಕವಿಗಳ ಜೊತೆ ಸ್ಥಳದಲ್ಲಿಯೇ ದಾಖಲೆ ಬರಹ ಕವನ ರಚನೆಯಲ್ಲಿ ಭಾಗವಹಿಸಿ ದಾಖಲಾ ಬರಹ ಸ್ಪರ್ಧೆ ಯಶಸ್ವಿಯಾಗಿಸಿ ಮತ್ತು ಕವಿ ಕಾವ್ಯ ವಿಭೂಷಣ ಪ್ರಶಸ್ತಿ. ಕೂಡ ಪಡೆದಂತಹ ದಾವಣಗೆರೆ ಜಿಲ್ಲೆಯವರೆ ಆದ ಸರಸ್ವತಿ ಕೆ ನಾಗರಾಜ್ ರವರ ಕನ್ನಡ ಮತ್ತು ಸಂಸ್ಕೃತಿ ಸಾಹಿತ್ಯ ನಾಡು ನುಡಿ ಯ ಬಗ್ಗೆ ಅಪಾರ ಒಲವು ಗೌರವ ಮತ್ತು ಸೇವೆಯು ಸದಾ ಹೀಗೆ ಮುಂದುವರಿಯಲಿ ಮತ್ತಷ್ಟು ಸಾಧನೆ ಹಾಗೂ ಪ್ರಶಸ್ತಿಗಳು ಲಭಿಸಲಿ ಎಂದು ಸಾಹಿತಿಗಳು ಕಲಾವಿದರು, ಕವಿಗಳು,ಸ್ನೇಹಿತರು ತಮಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ವರದಿ:ಶಿವಮೂರ್ತಿ.ಟಿ.ಕೋಡಿಹಳ್ಳಿ.ಚಿತ್ರದುರ್ಗ.