ವ್ಯಸನಿಗಳನ್ನು ಹಸನ್ಮುಖ ರನ್ನಾಗಿಸುತ್ತಿರುವ ಮಹಾಂತ ಜೋಳಿಗೆ – ಜಗದೀಶ ಗಿರಡ್ಡಿ.
ಇಲಕಲ್ಲ ಅ.02

ಇಲ್ಲಿನ ಹೊರ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 50 ಕ್ಕೆ ಹೊಂದಿ ಕೊಂಡಿರುವ ಸುರಕ್ಷಾ ಸೇವಾ ಸಂಸ್ಥೆಯಲ್ಲಿ ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಆಶ್ರಮ ವಾಸಿಗಳ ಮಧ್ಯೆ ಆಚರಣೆ ಮಾಡಲಾಯಿತು. ಪೂಜೆಯೊಂದಿಗೆ ಪ್ರಾರಂಭ ಗೊಂಡಿತು. ಆಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಗದೀಶ ಗಿರಡ್ಡಿ ಮಾತನಾಡಿ ಮಾನವರನ್ನು ವ್ಯಸನ ದಿಂದ ಮುಕ್ತ ಮಾಡುವ ಸಲುವಾಗಿ ಹುಟ್ಟಿ ಕೊಂಡ ಜೋಳಿಗೆ ಮಹಾಂತ ಜೋಳಿಗೆ ಆಗಿದೆ. ಮಹಾಂತ ಜೋಳಿಗೆ ಯಾವತ್ತೂ ದುಡ್ಡು ದುರ್ಗಾಣಿ ದವಸ ಧಾನ್ಯ ಬೇಡಲಿಲ್ಲ ಬದಲಾಗಿ ಮಾನವರು ವ್ಯಸನ ದಿಂದ ಹಾಳಾಗುತ್ತಿರುವುದನ್ನು ಕಣ್ಣಾರೆ ಕಂಡಿದ್ದ ಮಹಾಂತ ಸ್ವಾಮೀಜಿ ಮೊದಲಿಗೆ ನನ್ನ ಸುತ್ತ ಮುತ್ತಲಿರುವ ಜನರನ್ನು ವ್ಯಸನ ಮುಕ್ತ ಗೊಳಿಸಬೇಕು ಎನ್ನುವ ಉದ್ದೇಶಕ್ಕಾಗಿ ಜೋಳಿಗೆ ಹಾಕಿಕೊಂಡು ಮನೆ ಮನೆಗೆ ತೆರಳಿ, ರಾಜ್ಯಾದ್ಯಂತ ಜೋಳಿಗೆಯು ವ್ಯಾಪಿಸುವಂತೆ ಮಾಡಿದರು. ಅದರ ಫಲವಾಗಿ ನಾಡಿನಾದ್ಯಂತ ಸಾಕಷ್ಟು ಜನರನ್ನು ವ್ಯಸನ ದಿಂದ ಮುಕ್ತವಾಗಿ ಹಸನಾದ ಬದುಕು ಸಾಗಿಸುವಂತೆ ಮಾಡಿ ಪುಣ್ಯ ಕಟ್ಟಿಕೊಂಡ ಪುಣ್ಯಾತ್ಮ ಎಂದು ಅದೆಷ್ಟೋ ಕುಟುಂಬಗಳು ಶ್ರೀಗಳನ್ನು ಸ್ಮರಣೆ ಮಾಡುತ್ತಿವೆ.

ಹಾಗೂ ಅನೇಕರ ಬಾಳಲ್ಲಿ ಮಹಾಂತ ಜೋಳಿಗೆ ಹೋಳಿಗೆಯಾಗಿ ಪರಿವರ್ತನೆ ಯಾಗಿದೆ ಮಹಾಂತ ಸ್ವಾಮೀಜಿಯವರ ಕರುಣೆಯ ಕಂದ ಗುರು ಮಹಾಂತ ಶ್ರೀಗಳು ಜೋಳಿಗೆ ಮುನ್ನಡೆಸಿ ಕೊಂಡು ಹೋಗುತ್ತಿದ್ದು ತಾವು ತೆರಳುವ ಪ್ರತಿ ಕಾರ್ಯಕ್ರಮದಲ್ಲೂ ಹಾಗೂ ಮನೆಯ ಪೂಜೆ ಕಾರ್ಯಗಳಲ್ಲಿ ತೊಡಗಿದಾಗಲೂ ವ್ಯಸನಿಗಳನ್ನು ವ್ಯಸನ ಮುಕ್ತ ಮಾಡುವ ಸಲುವಾಗಿ ನಾಡಿನದ್ಯಂತ ಸಂಚರಿಸಿ ಭಕ್ತರ ಬಾಳಿಗೆ ಬೆಳಕಾಗುತ್ತಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಜೆಡಿ ಗೋರ್ಕಲ್ ಮಾತನಾಡಿ ಮಹಾಂತ ಶ್ರೀಗಳು ವ್ಯಸನ ಮುಕ್ತ ಮಾಡುವ ಸಲುವಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರುಷೋತ್ತಮ ದರಕ ವಹಿಸಿದ್ದರು ಮುಖ್ಯ ಸಂಸ್ಥೆಯ ಕಾರ್ಯದರ್ಶಿಗಳಾದ ಬಾಲಚಂದ್ರ ರವರು ವೇದಿಕೆ ಮೇಲಿದ್ದರೂ ಎಲ್ಲಾ ಆಶ್ರಮ ವಾಸಿಗಳು ಮಹಾಂತ ಶ್ರೀಗಳ ವ್ಯಸನ ಮುಕ್ತ ದಿನಾಚರಣೆಯ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ ಇಲಕಲ್ಲ.