ತಾಲೂಕು ಕಾರ್ಯದರ್ಶಿ ಜಿ.ಮಲ್ಲಿಕಾರ್ಜುನ್.ಸುಟ್ಟ ಕೋಡಿಹಳ್ಳಿ. ಕರ್ನಾಟಕ ಬಜೆಟ್ 2023 – 24ರ ಕುರಿತು ಸಿಪಿಐ(ಎಂಎಲ್)ಹೇಳಿಕೆ.

ಕೊಟ್ಟೂರು ಜುಲೈ.9

ಹಿಂದಿನ ಬಿಜೆಪಿ ಸರ್ಕಾರದ ಕೋಮುವಾದಿ-ಕಾರ್ಪೊರೇಟ್ ನೀತಿಗಳನ್ನು ತಿರಸ್ಕರಿಸಿದ ಜನರು ಬಹುಮತದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರವನ್ನು ವಿಜಯಗೊಳಿಸಿದರು. ಕೇವಲ ಐದು ಭರವಸೆಗಳಿಗೆ ಪ್ರಾಮುಖ್ಯತೆ ನೀಡದೆ ಕರ್ನಾಟಕದ ಜನತೆ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸಿಪಿಐ(ಎಂಎಲ್) ಲಿಬರೇಶನ್ ಪಕ್ಷವು ಮುಖ್ಯಮಂತ್ರಿಗಳಲ್ಲಿ ಹಕ್ಕೋತ್ತಾಯ ಮಂಡಿಸಿತ್ತು. 2023 – 24ರ ಬಜೆಟ್‌ನಲ್ಲಿ ಹಲವಾರು ಪ್ರಶಂಸನೀಯ ಅಂಶಗಳು ಇದ್ದರೂ ಸಹ, ಜನರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಬಜೆಟಿನಲ್ಲಿ ಇತರೆ ಹಲವು ಅಂಶಗಳ ಕುರಿತು ಗಮನನೀಡಬೇಕಾಗಿರುವುದು ಅವಶ್ಯಕತೆ ಇದೆ ಎಂದು ಹೇಳಲು ಸಿಪಿಐ(ಎಂಎಲ್) ಲಿಬರೇಷನ್ ಇಚ್ಛಿಸುತ್ತದೆ. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ಕಾಯ್ದೆ, 2020ರನ್ನು ರಾಜ್ಯ ಸರ್ಕಾರವು ರದ್ದುಗೊಳಿಸುವ ಘೋಷಣೆಯು ಸ್ವಾಗತಾರ್ಹವಾಗಿದೆ. ಆದರೆ ಬಿಜೆಪಿ ಸರ್ಕಾರವು ಹಲವಾರು ಕಾಯ್ದೆಗಳಿಗೆ ತಂದಿರುವ ಜನ ವಿರೋಧಿ ತಿದ್ದುಪಡಿಗಳನ್ನೂ ಮತ್ತು ಕಾಯ್ದೆಗಳನ್ನೂ ಸಹ ರದ್ದುಗೊಳಿಸುವುದು ಅಗತ್ಯವಾಗಿದೆ. ಅದರಲ್ಲಿ ಕಾರ್ಖಾನೆ (ಕರ್ನಾಟಕ ತಿದ್ದುಪಡಿ) ಕಾಯ್ದೆ, 2023, ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, 2020, ಕರ್ನಾಟಕ ಗೋ ಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ, 2021, ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕುಸಂರಕ್ಷಣಾ ಕಾಯ್ದೆ, 2022, ಕರ್ನಾಟಕ ಕೈಗಾರಿಕಾ (ಸೌಲಭ್ಯ) (ತಿದ್ದುಪಡಿ) ಕಾಯ್ದೆ, 2020 ಹಾಗೂ ನ್ಯಾಯಯುತ ಪರಿಹಾರ ಮತ್ತು ಭೂ ಸ್ವಾಧೀನದಲ್ಲಿ ಪಾರದರ್ಶಕತೆ, ಪುನರ್ವಸತಿ ಮತ್ತು ಪುನಃಸ್ಥಾಪನೆ ಕಾಯ್ದೆ, 2019 (ಈ ಕಾಯ್ದೆಯಲ್ಲಿರುವ ಜನ ವಿರೋಧಿ ತಿದ್ದುಪಡಿಗಳನ್ನು ರದ್ದುಗೊಳಿಸಬೇಕು). ಕೃಷಿ ಬಿಕ್ಕಟ್ಟಿನಿಂದ ಹೆಚ್ಚಾಗುತ್ತಿರುವ ರೈತ ಆತ್ಮಹತ್ಯೆಗಳು ಮತ್ತು ವಲಸೆಯು, ಅದರಲ್ಲೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅತಿಹೆಚ್ಚಾಗಿದ್ದು,

ಈ ಕುರಿತು ರಾಜ್ಯ ಸರ್ಕಾರವು ಕ್ರಮ ವಹಿಸಬೇಕಿದ್ದು ಉದ್ಯೋಗ ಖಾತ್ರಿ ಯೋಜನೆಗೆ ಮತ್ತಷ್ಟು ಬಜೆಟನ್ನು ಒದಗಿಸಬೇಕಿತ್ತು. ಭೂರಹಿತ ಜನರ ವಿರುದ್ಧ “ಭೂ ಕಬಳಿಕೆ”ಯ ಆರೋಪದ ಮೇರೆಗೆ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಮತ್ತು ಅವರಿಗೆ ಹಕ್ಕುಪತ್ರಗಳನ್ನು ನೀಡಿ “ಊಳುವವನೆ ಭೂಮಿಯ ಒಡೆಯ” ಎಂಬ ನೀತಿಯನ್ನು ಜಾರಿಗೊಳಿಸುವ ಕುರಿತು ಈ ಬಜೆಟ್ ಮೌನ ವ್ಯಕ್ತಪಡಿಸಿದೆ.ಈ ಸಾಲಿನ ಬಜೆಟ್ ರಾಜ್ಯಾದಾದ್ಯಂತ ಕಾರ್ಮಿಕರ ಬದುಕುಳಿಯುವ ಬಿಕ್ಕಟ್ಟಿನ್ನು ಗುರುತಿಸಿದ್ದರೂ ಸಹ, ಕಾರ್ಮಿಕರು ಅನುಭವಿಸುತ್ತಿರುವ ಕೆಲಸದ ಮತ್ತು ವೇತನ ಅಭದ್ರತೆಯ ಬಗ್ಗೆ ಇನ್ನೂ ಹೆಚ್ಚಿನಗಮನ ವಹಿಸಿಬೇಕಾಗಿತ್ತು. ನಿರುದ್ಯೋಗವು ದೊಡ್ಡ ಸಮಸ್ಯೆಯಾಗಿದೆ ಎಂಬುದನ್ನು ಬಜೆಟ್‌ನಲ್ಲಿ ಒಪ್ಪಿಕೊಳ್ಳಲಾಗದೆ .ಆದರೆ ಅಭದ್ರ ಉದ್ಯೋಗಗಳು ವ್ಯಾಪಕವಾಗಿವೆ ದೊರಕುತ್ತಿವೆ. ಅದರಲ್ಲೂ ಗುತ್ತಿಗೆ ಕಾರ್ಮಿಕರು, ಗಿಗ್ ವರ್ಕರ್ಸ್ ಹಾಗು ಇತರೆ ನೂತನ ಸ್ವರೂಪಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೆಲಸದ ಭದ್ರತೆ ಮತ್ತು ಉತ್ತಮ ಕೆಲಸದ ವಾತಾವರಣವನ್ನು ಒದಗಿಸಬೇಕು. ಕಾರ್ಮಿಕರ ಕನಿಷ್ಠ ವೇತನವನ್ನು ರೂ. 35,೦೦೦/-ಕ್ಕೆ ಹೆಚ್ಚಳ ಮಾಡುವ ನಿರ್ಧಾರವನ್ನು ಕೈಗೊಳ್ಳಬೇಕಾಗಿತ್ತು. ಗುತ್ತಿಗೆ ಪದ್ಧತಿಯು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂಬ ಪಕ್ಷದ ಹಕ್ಕೊತ್ತಾಯವನ್ನು ನಾವು ಪುನರುಚ ್ಚರಿಸುತ್ತೇವೆ. ಮೊದಲನೇ ಹೆಜ್ಜೆಯಾಗಿ ಎಲ್ಲಾ ಸರ್ಕಾರೀ ಇಲಾಖೆಗಳಲ್ಲಿ, ಕಂಪೆನಿಗಳಲ್ಲಿ ಮತ್ತು ಏಜೆನ್ಸಿಗಳಲ್ಲಿ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು. ಹಾಗೆಯೇ, ಹಿಂದಿನ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಮತ್ತು ಕಾನೂನು ತಿದ್ದುಪಡಿಗಳನ್ನು ಹಿಂಪಡೆಯುವ ಕುರಿತು ಯಾವುದೇ ಉಲ್ಲೇಖ ಬಜೆಟಿನಲ್ಲಿ ಇರುವುದಿಲ್ಲ.ಕರ್ನಾಟಕ ರಾಜ್ಯವು ಕೇಂದ್ರದ ಆದಾಯ ಸಂಗ್ರಹಣೆಯಲ್ಲಿ ಹೆಚ್ಚಿನ ಪಾಲನ್ನು ನೀಡುತ್ತಿದೆ ಆದರೆರಾಜ್ಯಕ್ಕೆ ಕೇವಲ 3.65% ಆದಾಯವನ್ನು ಮಾತ್ರ ಕೇಂದ್ರ ಸರ್ಕಾರ ಹಂಚಿಕೆಮಾಡಿದೆ ಎಂಬ ಅಂಶವನ್ನು ಬಜೆಟ್ ಎತ್ತಿ ತೋರಿಸುತ್ತದೆ. ಕೇಂದ್ರ ಸರ್ಕಾರವು ಜುಲೈ 2022 ರಿಂದ ರಾಜ್ಯಕ್ಕೆ ಜಿಎಸ್‌ಟಿ ಪರಿಹಾರವನ್ನು ಸ್ಥಗಿತಗೊಳಿಸಿದೆ, ಸಂಗ್ರಹಿಸಿದ ಸೆಸ್ ಮತ್ತು ಸರ್‌ಚಾರ್ಜ್ಗಳನ್ನು ಹಂಚಿಕೊಳ್ಳಲು ರಾಜ್ಯಕ್ಕೆ ನಿರಾಕರಿಸಿದೆ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಹಾಯ ಹಂಚಿಕೆಯಲ್ಲಿನ ಅನುದಾನವನ್ನು ಕಡಿಮೆ ಮಾಡಿದೆ, ಇವುಗಳಿಂದಾಗಿ ರಾಜ್ಯದಲ್ಲಿನ ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಸರ್ಕಾರವು ಭಾಗಶಃಕಾರಣವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಕಾರಣದಿಂದ ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಂದ ತಪ್ಪಿಸಿಕೊಳ್ಳಬಾರದು ಆದರೂ ಮೋದಿ ಸರಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಈ ಘೋರ ಅನ್ಯಾಯದ ವಿರುದ್ಧ ಕರ್ನಾಟಕದ ಜನತೆ ಧ್ವನಿ ಎತ್ತಬೇಕಿದೆ. ಎಂದು ಕೊಟ್ಟೂರು ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ ಸುಟ್ಟ ಕೋಡಿಹಳ್ಳಿ ,ರಾಜ್ಯ ಸಮಿತಿ ಸದಸ್ಯ ಬಾಲಗಂಗಾಧರ,ಟಿ ಅಜ್ಜಪ್ಪ ರಾಮ ನಾಯಕನಹಳ್ಳಿ,ಒ ಕೊಟ್ರೇಶ್ ಮತ್ತಿಹಳ್ಳಿ, ಕೆ ಅಯ್ಯನಹಳ್ಳಿ ಎಂ ಯು ಕರಿಬಸವ ಸ್ವಾಮಿ. ಕಾರ್ಯಕರ್ತರು ಪತ್ರಿಕೆಗೆ ತಿಳಿಸಿದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button