ಮಿಡಿಸೌತಿ ಫ್ಯಾಕ್ಟರಿ ಮಾಲೀಕರ ರಕ್ಷಣೆಗೆ – ನಿಂತ ತಾಲೂಕಾ ಆಡಳಿತ.

ಮರೂರು ಅ.03

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಮರೂರು ಗ್ರಾಮದಲ್ಲಿ ಶ್ರೀಮತಿ ಜಯಮ್ಮ ಗಂಡ ನಿಂಗಪ್ಪ ಸರ್ವೆ ನಂಬರ್ 176/2 ರಲ್ಲಿ ಚಪ್ಪರದಳ್ಳಿ ಚೇತನ್ ತಂದೆ ಕೆ ಚನ್ನಬಸಪ್ಪ ಇವರಿಬ್ಬರೂ ಸೌತೆಕಾಯಿ ಫ್ಯಾಕ್ಟರಿ ನಡೆಸುತ್ತಿದ್ದು ಇದು ಮರೂರು ಗ್ರಾಮ ದಿಂದ 200 ರಿಂದ 300 ಮೀಟರ್ ಇದೆ ಇಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ ಮತ್ತು ಪೂರ್ವ ದಿಕ್ಕಿಗೆ ಅಲಿ ಪಬ್ಲಿಕ್ ಸ್ಕೂಲ್ ಇದೆ. ಈ ಸೌತೆಕಾಯಿ ಫ್ಯಾಕ್ಟರಿಂದ ಇಲ್ಲಿನ ಮಕ್ಕಳಿಗೆ ಸಾರ್ವಜನಿಕರಿಗೆ ಹಾಗೂ ಅಕ್ಕ ಪಕ್ಕದಲ್ಲಿರುವ ಹೊಲ ಮತ್ತು ಬೋರ್ವೆಲ್ ಗಳಲ್ಲಿ ನೀರು ಮಲೀನವಾಗಿ ಪರಿಸರ ವಿನಾಶಕ್ಕೆ ಕಾರಣವಾಗಿದೆ. ಇಲ್ಲಿ ಸಾರ್ವಜನಿಕರು ತಿಳಿಸುವಂತೆ ಸೌತೆ ಫ್ಯಾಕ್ಟರಿಯಲ್ಲಿ ಬ್ಯಾರಲ್ ತುಂಬಲು ಬಳಸುವ ಉಪ್ಪು ಮತ್ತು ಯಾಸಿಡ್ ಕ್ಯಾಲ್ಸಿಯಂ ಫ್ಲೋರೈಡ್ so2 ಕೆಮಿಕಲ್ ಬಳಸುವುದರಿಂದ ಅದರಿಂದ ಬರುವ ನೀರು ಕಲುಷಿತವಾಗಿ ಹೊರಗಡೆ ಬಂದು ಭೂಮಿಯನ್ನು ಆವರಿಸಿ ಕೊಂಡು ಬೋರ್ವೆಲ್ ಗಳಲ್ಲಿ ವಿಷಪೂರಿತ ನೀರು ಹೊರಬಂದು ಇಲ್ಲಿ ಬಳಸುವಂತಹ ನೀರು ಕುಡಿಯುವ ನೀರು ಹಾಗೂ ಇದರಿಂದ ಆಗುವ ತೊಂದರೆಗಳಿಗೆ ಯಾರು ಹೊಣೆ ಇದರ ಬಗ್ಗೆ ಕೊಟ್ಟೂರಿನಲ್ಲಿ ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಕೊಂಡೆವು.

ಮತ್ತು ತಹಸಿಲ್ದಾರರಿಗೆ ತಿಳಿಸಿ ಗ್ರಾಮ ಪಂಚಾಯಿತಿಗೂ ಮನವಿ ಮಾಡಿ ಕೊಂಡಿದ್ದೇವೆ. ಆದರೆ ನಮ್ಮ ತಾಲೂಕಾ ಆಡಳಿತ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ ಇಲ್ಲಿನ ಸಾರ್ವಜನಿಕರ ಬದುಕಿನ ಜೊತೆ ಆಟ ಆಡುವುದೇ ಇವರು ಆರೋಗ್ಯ ಹಾಳು ಮಾಡಲು ಹೊರಟಿರುವರಲ್ಲ ಇಂತಹ ಅಧಿಕಾರಿಗಳಿಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ ಆರೋಗ್ಯ ಸಚಿವರು ಹಾಗೂ ಮಾನ್ಯ ಮುಖ್ಯಮಂತ್ರಿಗಳೇ ಎಂದು ನಮ್ಮ ಸುದ್ದಿ ವಾಹಿನಿ ಮೂಲಕ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಸಪ್ಪ ಚನ್ನಬಸಪ್ಪ ಹೇಮಂತ್ ರಾಜ್ ಗ್ರಾಮ ಪಂಚಾಯತಿ ಸದಸ್ಯರು ಹನುಮೇಶ್ ಸತೀಶ ಆಕ್ರೋಶ ವ್ಯಕ್ತಪಡಿಸಿದರು. ಕೊಟ್ಟೂರಿನ ಸುತ್ತಮುತ್ತ ಸೌತೆಕಾಯಿ ಕಂಪನಿ ಸಾಕುತ್ತಿರುವ ತಾಲೂಕಾ ಆಡಳಿತ ಇದು ಸಾರ್ವಜನಿಕರ ಮೇಲೆ ಬೀಳುವ ಪರಿಣಾಮ ಎಂತದು ಎಂಬುದು ಬೇಗನ ಅರಿತು ಕೊಳ್ಳಿ ಇಲ್ಲವಾದರೆ ಇಲ್ಲಿ ಸೌತಿ ಫ್ಯಾಕ್ಟರಿಯಲ್ಲಿ ಬಳಸುವ ಕೆಮಿಕಲ್ ಗಳಿಂದ ಕಲುಷಿತ ನೀರಿನಿಂದ ಜನರ ಮೇಲೆ ಅನಾರೋಗ್ಯಕ್ಕೆ ಕಾರಣವಾಗುವುದು ಬೇಡ ಅಧಿಕಾರಿಗಳೇ ಎಚ್ಚೆತ್ತುಕೊಳ್ಳಿ. ಬೇಗನೆ ಇದನ್ನು ತೆರವು ಗೊಳಿಸಿ ಎಂದು ಸಿಪಿಎಂಎಲ್ ಲಿಬ್ರೇಶನ್ ಪಕ್ಷದ ತಾಲೂಕು ಕಾರ್ಯದರ್ಶಿಗಳಾದ ಗುಡಿಯರ್ ಮಲ್ಲಿಕಾರ್ಜುನ್ ಮತ್ತು ಅಜ್ಜಪ್ಪ ಜಿಲ್ಲಾ ಸದಸ್ಯರು ದೊಡ್ಡಬಸಪ್ಪ ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷರು ಮತ್ತಿತರರು ಎಚ್ಚರಿಕೆ ನೀಡಿದರು.

ಕೂಡಲೇ ಇದರ ಬಗ್ಗೆ ಅಧಿಕಾರಿಗಳು ಸಾರ್ವಜನಿಕರ ಆರೋಗ್ಯದ ಮೇಲೆ ಆಟ ಆಡುವುದು ಬೇಡ ಅನೇಕ ಕೆಮಿಕಲ್ ಗಳಿಂದ ಕೂಡಿರುವ ಈ ಸೌತಿ ಫ್ಯಾಕ್ಟರಿಯಿಂದ ಭಯ ಭೀತರಾದ ಸಾರ್ವಜನಿಕರು ಇದಕ್ಕೆ ಅಧಿಕಾರಿಗಳು ಬೇಗನೆ ಇದನ್ನು ಅರಿತು ಕೊಂಡು ತೆರವುಗೊಳಿಸ ಬೇಕೆಂದು ಇಲ್ಲಿನ ಸಂಘ ಸಂಸ್ಥೆಗಳ ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button