ಡಾ. ಬಿ.ಆರ್.ಅಂಬೇಡ್ಕರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಮರ್ಪಿಸುವ ಮೂಲಕ ಪರೀಕ್ಷೆಗೆ ಚಾಲನೆ ನೀಡಿದರು.

ಕಲಬುರಗಿ ಆಗಷ್ಟ.27

ದಲಿತ ವಿದ್ಯಾರ್ಥಿ ಪರಿಷತ್ ಡಾಕ್ಟರ್ ಬಾಬಾ ಸಾಬ್ ಅಂಬೇಡ್ಕರ್ ಅವರ *132ನೇ* ಜನ್ಮ ದಿನಾಚರಣೆಯ ಪ್ರಯುಕ್ತವಾಗಿ ರಾಜ್ಯಾದ್ಯಂತ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಇಂದು ದಿನಾಂಕ *27.08.2023* ಭಾನುವಾರದಂದು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆದಿರುತ್ತದೆ.ಕಲಬುರಗಿ ಪರೀಕ್ಷಾ ಕೇಂದ್ರವಾಗಿ * ಸರಕಾರ ಮಹಾವಿದ್ಯಾಲಯ ಕಲಬುರಗಿ ಹೊಸ ಆರ್.ಟಿ.ಒ ಹತ್ತಿರ ಕಲಬುರ್ಗಿಯಲ್ಲಿ ನಡೆದಿದ್ದು ಇರುತ್ತದೆ.ಈ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಕ್ರಮವಾಗಿ 5 ಲಕ್ಷ ರೂಪಾಯಿ 2.5 ರೂಪಾಯಿ 1 ಲಕ್ಷ ರೂಪಾಯಿ ಬಹುಮಾನ ಮತ್ತು ಉಚಿತ ಐಎಎಸ್ ಕೆಎಎಸ್ ಕೋಚಿಂಗ್ ಕೊಡಿಸುವುದು ಹಾಗೂ ಜಿಲ್ಲಾ ಮಟ್ಟದ ಮೂರು ಬಹುಮಾನಗಳನ್ನು ಕೂಡ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಅವರನ್ನು ಶಿಕ್ಷಣಕ್ಕೆ ಪ್ರೇರೇಪಿಸಲು ಪರೀಕ್ಷೆ ಕೈಗೊಳ್ಳಲಾಗಿದೆ.ಆದ್ದರಿಂದ ಪರೀಕ್ಷೆಗೆ ಈಗಾಗಲೇ ನೊಂದಾಯಿಸಿಕೊಂಡ ಸ್ಪರ್ಧಾರ್ಥಿಗಳು ಸರಿಯಾಗಿ 11:ಗಂಟೆಯಿಂದ 1 ಗಂಟೆಯವರೆಗೆ ಪರೀಕ್ಷೆ ನಡೆದ್ದಿದ್ದು. ಈ ಕಾರ್ಯಕ್ರಮವು ಡಾ: ಬಿ.ಆರ್ ಅಂಬೇಡ್ಕರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಮರ್ಪಿಸುವುದರ ಮೂಲಕ ಪರೀಕ್ಷೇಗೆ ಚಾಲನೆ ನೀಡಲಾಯಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಶ್ರೀಮತಿ ಸವಿತಾ ಪ್ರಾಶುಂಪಾಲರು ಸರಕಾರಿ ಮಹಾವಿಧ್ಯಾಲಯ , ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕಲಬುರಗಿ ರವರ ಪರವಾಗಿ ಸಂತೋಷ ವಸತಿ ನಿಲಯದ ಮೇಲ್ವಿಚಾರಕರು . ಸಂಜಿಕುಮಾರ ಸಹ ಪ್ರೌಡ ಶಾಲಾ ಶಿಕ್ಷಕರು .ಜಯಶ್ರೀ ಕೆಂಬ್ರೀಜ್ ಶಾಲೆಯ ಶಿಕ್ಷಕರು , ಅರ್ಥಶಾಸ್ತ್ರದ ಪ್ರಾಧ್ಯಾಪಕರು ಸರಕಾರಿ ಮಹಾವಿಧ್ಯಾಲಯ , ಸುರೇಶ ಎಸ್. ಕಟ್ಟಿಮನಿ ರಾಜ್ಯ ಸಂಘಟನಾ ಕಾರ್ಯದರ್ಶಿ , ಜಗದೇವ ಕಂಬಾರ , ಸುರೇಶ ಭೀಜನಳ್ಳಿ ಸಂಜೆ ವಾಣಿ ಪತ್ರಕತ್ರರು ಸೇಡಂ.ಮೈಲಾರಿ ದೊಡ್ಡಮನಿ ಸಮಿತಿಯ ಪ್ರತಿನಿಧಿಗಳು ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಜಿಲ್ಲಾ ವರದಿಗಾರರು:ಶಿವಾನಂದ.ಸಾವಳಗಿ. ಕಲಬುರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button