ಡಾ. ಬಿ.ಆರ್.ಅಂಬೇಡ್ಕರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಮರ್ಪಿಸುವ ಮೂಲಕ ಪರೀಕ್ಷೆಗೆ ಚಾಲನೆ ನೀಡಿದರು.
ಕಲಬುರಗಿ ಆಗಷ್ಟ.27

ದಲಿತ ವಿದ್ಯಾರ್ಥಿ ಪರಿಷತ್ ಡಾಕ್ಟರ್ ಬಾಬಾ ಸಾಬ್ ಅಂಬೇಡ್ಕರ್ ಅವರ *132ನೇ* ಜನ್ಮ ದಿನಾಚರಣೆಯ ಪ್ರಯುಕ್ತವಾಗಿ ರಾಜ್ಯಾದ್ಯಂತ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಇಂದು ದಿನಾಂಕ *27.08.2023* ಭಾನುವಾರದಂದು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆದಿರುತ್ತದೆ.ಕಲಬುರಗಿ ಪರೀಕ್ಷಾ ಕೇಂದ್ರವಾಗಿ * ಸರಕಾರ ಮಹಾವಿದ್ಯಾಲಯ ಕಲಬುರಗಿ ಹೊಸ ಆರ್.ಟಿ.ಒ ಹತ್ತಿರ ಕಲಬುರ್ಗಿಯಲ್ಲಿ ನಡೆದಿದ್ದು ಇರುತ್ತದೆ.ಈ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಕ್ರಮವಾಗಿ 5 ಲಕ್ಷ ರೂಪಾಯಿ 2.5 ರೂಪಾಯಿ 1 ಲಕ್ಷ ರೂಪಾಯಿ ಬಹುಮಾನ ಮತ್ತು ಉಚಿತ ಐಎಎಸ್ ಕೆಎಎಸ್ ಕೋಚಿಂಗ್ ಕೊಡಿಸುವುದು ಹಾಗೂ ಜಿಲ್ಲಾ ಮಟ್ಟದ ಮೂರು ಬಹುಮಾನಗಳನ್ನು ಕೂಡ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಅವರನ್ನು ಶಿಕ್ಷಣಕ್ಕೆ ಪ್ರೇರೇಪಿಸಲು ಪರೀಕ್ಷೆ ಕೈಗೊಳ್ಳಲಾಗಿದೆ.ಆದ್ದರಿಂದ ಪರೀಕ್ಷೆಗೆ ಈಗಾಗಲೇ ನೊಂದಾಯಿಸಿಕೊಂಡ ಸ್ಪರ್ಧಾರ್ಥಿಗಳು ಸರಿಯಾಗಿ 11:ಗಂಟೆಯಿಂದ 1 ಗಂಟೆಯವರೆಗೆ ಪರೀಕ್ಷೆ ನಡೆದ್ದಿದ್ದು. ಈ ಕಾರ್ಯಕ್ರಮವು ಡಾ: ಬಿ.ಆರ್ ಅಂಬೇಡ್ಕರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಮರ್ಪಿಸುವುದರ ಮೂಲಕ ಪರೀಕ್ಷೇಗೆ ಚಾಲನೆ ನೀಡಲಾಯಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಶ್ರೀಮತಿ ಸವಿತಾ ಪ್ರಾಶುಂಪಾಲರು ಸರಕಾರಿ ಮಹಾವಿಧ್ಯಾಲಯ , ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕಲಬುರಗಿ ರವರ ಪರವಾಗಿ ಸಂತೋಷ ವಸತಿ ನಿಲಯದ ಮೇಲ್ವಿಚಾರಕರು . ಸಂಜಿಕುಮಾರ ಸಹ ಪ್ರೌಡ ಶಾಲಾ ಶಿಕ್ಷಕರು .ಜಯಶ್ರೀ ಕೆಂಬ್ರೀಜ್ ಶಾಲೆಯ ಶಿಕ್ಷಕರು , ಅರ್ಥಶಾಸ್ತ್ರದ ಪ್ರಾಧ್ಯಾಪಕರು ಸರಕಾರಿ ಮಹಾವಿಧ್ಯಾಲಯ , ಸುರೇಶ ಎಸ್. ಕಟ್ಟಿಮನಿ ರಾಜ್ಯ ಸಂಘಟನಾ ಕಾರ್ಯದರ್ಶಿ , ಜಗದೇವ ಕಂಬಾರ , ಸುರೇಶ ಭೀಜನಳ್ಳಿ ಸಂಜೆ ವಾಣಿ ಪತ್ರಕತ್ರರು ಸೇಡಂ.ಮೈಲಾರಿ ದೊಡ್ಡಮನಿ ಸಮಿತಿಯ ಪ್ರತಿನಿಧಿಗಳು ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಜಿಲ್ಲಾ ವರದಿಗಾರರು:ಶಿವಾನಂದ.ಸಾವಳಗಿ. ಕಲಬುರಗಿ