ಘನತ್ಯಾಜ್ಯ ವಿಲೇವಾರಿ ಮಾಡದೆ, ನಿರಂತರ ವಾರ್ಷಿಕ ನಿರ್ವಹಣೆ ವೆಚ್ಚ ಭರಿಸುತ್ತೀರುವ – ಬಿ.ಟಿ.ಡಿ.ಎ ಇಂಜಿನೀಯರುಗಳು.
ಬಾಗಲಕೋಟೆ ಆ 10

ಬಾಗಲಕೋಟೆಯ ನವನಗರದ ಸೆಕ್ಟರ್ ನಂ. 47 ರಲ್ಲಿ ವಾಸಿಸುವ ಸ್ಥಳಿಯ ಜನಗಳಾದ ನಾವು ಬಿಟಿಡಿಎ ಇಂಜಿನೀಯರುಗಳು ಮತ್ತು ಗುತ್ತಿಗೇದಾರರು ಅತೀ ಕ್ರಮಣವಾಗಿ ಶೆಡ್ಡು ನಿರ್ಮಾಣ ಮಾಡಲು ಸ್ವಚ್ಛತಾ ಇದ್ದ ಸೆಕ್ಟರ್ ನ್ನು 4 ವರ್ಷ ದಿಂದ ತಮ್ಮ ಲಾಭಕ್ಕಾಗಿ ಸೆಕ್ಟರ್ ನಂ. 47 ರಲ್ಲಿ ಬೇಕಾ ಬಿಟ್ಟಿಯಾಗಿ ಕಲ್ಲು ಮಣ್ಣುಗಳಿಂದ ಆವೃತವಾಗಿದ್ದು, ಡಾಂಬರ್ ರಸ್ತೆಗಳನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಲ್ಲದೇ ಗಟಾರಗಳಲ್ಲಿ ಹೂಳು ತುಂಬಿ ನೀರು ನಿಂತು ರೋಗ ರುಜಿನಗಳಿಗೆ ಕಾರಣವಾಗಿದ್ದಲ್ಲದೇ ಮಳೆಗಾಲ ಪ್ರಾರಂಭ ವಾಗಿದ್ದರಿಂದ ನೀರು ಗಟಾರಗಳಲ್ಲಿ ನಿಂತಲ್ಲಿ ನಿಂತಿವೆ. ಇದರಿಂದ ಮಲೇರಿಯಾ, ಡೆಂಗ್ಯೂ, ಇಲ್ಲಿಯ ಸ್ಥಳಿಯ ನಿವಾಸಿ ಮಕ್ಕಳಿಗೆ ತೀವ್ರ ತೊಂದರೆ ಯಾಗುತ್ತಿದ್ದು, ಬಡವರಾದ ನಾವುಗಳು ಡೆಂಗ್ಯೂ, ಮಲೇರಿಯಾದಂತಹ ಖಾಯಿಲೆಗಳು ಬಂದರೆ ಲಕ್ಷಾಂತರ ರೂಪಾಯಿ ಕೊಟ್ಟು ಆಸ್ಪತ್ರೆಗಳಿಗೆ ಹೊಗುವ ಸ್ಥಿತಿ ಗತಿಗಳು ನಮ್ಮದಾಗಿಲ್ಲ ಸ್ಥಳೀಯ ಸಮಸ್ಯೆಗಳಿಗೆ ಯಾರೊಬ್ಬರು ಬಂದು ವಿಕ್ಷಣೆ ಮಾಡುವುದಿಲ್ಲ.

ಎಷ್ಟೋ ಬಾರಿ ಬಿಟಿಡಿಎ ಇಂಜಿನೀಯರುಗಳ ಗಮನಕ್ಕೆ ತಂದರೂ ಕೂಡಾ ಒಬ್ಬರೂ ಕಾಳಜಿ ವಹಿಸುತ್ತಿಲ್ಲ. ಅಧಿಕಾರ ದರ್ಪ ದಿಂದ ಸಾರ್ವಜನಿಕರಿಗೆ ಯಾವುದೇ ರೀತಿ ಸ್ಪಂದನೆ ನೀಡುತ್ತಿಲ್ಲ.ಸದರಿ ವಿಷಯದ ಕುರಿತು ಸಂಬಂಧಪಟ್ಟ ಛಾಯಾ ಚಿತ್ರಗಳನ್ನು ಲಗತ್ತಿಸಿದ್ದು ಮಾನ್ಯರು ವೀಕ್ಷಣೆ ಮಾಡಬಹುದು. ನಿಂತ ನೀರಿನಿಂದ ಸುತ್ತ ಮುತ್ತಲಿನ ಪರಿಸರ ಗಬ್ಬು ವಾಸನೆಯಿಂದ ಕೂಡಿದ್ದು, ಬರಿ ತಾತ್ಕಾಲಿಕವಾಗಿ ಪರಿಹಾರ ನೀಡುವ ಬದಲಿಗೆ ಎಲ್ಲೆಂದರಲ್ಲಿ ಬಿದ್ದಿರುವ ಮಣ್ಣು ಕಲ್ಲುಗಳನ್ನು ತೆರವು ಗೊಳಿಸಿ ಗಟಾರಗಳಲ್ಲಿ ತುಂಬಿರುವ ಹೂಳನ್ನು ತೆಗೆಸಿ ನೀರು ಎಲ್ಲೂ ನಿಲ್ಲದಂತೆ ಹರಿದು ಹೋಗುವ ಹಾಗೇ ಮಾಡಬೇಕು. ಗುತ್ತಿಗೇದಾರರು ಡಾಂಬರ ರಸ್ತೆಯನ್ನು ತಮ್ಮ ಸ್ವಾರ್ಥಕ್ಕಾಗಿ ಇಟಾಚಿ. ಜೆಸಿಬಿ. ಟಿಪ್ಪರಗಳನ್ನು ಬಳಸಿ ಡಾಂಬರೀಕರಣ ಗೊಂಡ ರಸ್ತೆಯನ್ನು ಹಾಳು ಮಾಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ರಾತ್ರಿಯ ವೇಳೆಯಲ್ಲಿ ಓಡಾಡಲು ತೊಂದರೆಯಾಗಿದ್ದು.

ತೆಗ್ಗು ದಿನ್ನೆಗಳಿಂದ ಕೂಡಿದೆ. ರಸ್ತೆಗಳಲ್ಲಿ ಬೀದಿ ದೀಪಗಳು ಇದ್ದು ಇಲ್ಲದಂತೆ ಆಗಿವೆ. ಸರಿಯಾದ ಸಮಯಕ್ಕೆ ಉರಿಯುವುದಿಲ್ಲ. ನೀರು ನಿಲ್ಲದ ಹಾಗೆ ಗಟಾರಗಳನ್ನು ಲೇವಲಿಂಗ ಕಾಂಕ್ರೀಟ್ ಮಾಡಿಸಲು, ಹಾಳಾದ ತೆಗ್ಗು ದಿನ್ನಿಗಳಿಂದ ಕೂಡಿದ ರಸ್ತೆಯನ್ನು ಮರು ಡಾಂಬರೀಕರಣ ಮಾಡಲು ಮತ್ತು ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ಮಾಡಲು ಗುತ್ತಿಗೆದಾರರು ಅನಧಿಕೃತವಾಗಿ ನಿರ್ಮಿಸಿ ಕೊಂಡಿರುವ ಶೆಡ್ ತೆರವು ಗೊಳಿಸಲು ಹಾಗೂ ಸದರಿಯವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಮಾನ್ಯರಲ್ಲಿ ಈ ಮೂಲಕ ವಿನಂತಿಯ ಜೊತೆಗೆ ನಮ್ಮಗೂ ಸಹನೆ, ತಾಳ್ಮೆ ಇದೆ. ಏನಾದರೂ ತಾಳ್ಮೆ ಮೀರಿದರೆ ಆಮ್ ಆದ್ಮಿ ಪಕ್ಷದ ಸಿಂಬಲ್ ಕೈಗೆತ್ತಿ ಕೊಳ್ಳಬೇಕಾದೀತು. ನವ ನಗರದ ಸಕ್ಕರ ನಂ 47 ರ ಸಾರ್ವಜನಿಕರಿಂದ ಹುಶಾರ್ ಮೂಲಕ ಪತ್ರಿಕೆ ಮುಖಾಂತರ ಎಚ್ಚರಿಕೆ ನೀಡಿದ್ದಾರೆ.