ರಾಜ್ಯ ರೈತ ಸಂಘಟನೆಯಿಂದ ಹೆಸರು ಬೆಂಬಲ ಬೆಲೆ ಘೋಷಣೆ ಮಾಡಲು ಖಂಡಿಸಿ – ಜಿಲ್ಲಾಧಿಕಾರಿಗೆ ಮನವಿ.
ಗದಗ ಆ.10

ಜಿಲ್ಲೆಯಾದ್ಯಂತ ರೈತರು ಹೆಸರು ಬೆಳೆ ಬೆಳೆದಿದ್ದು. ಹೆಸರು ಬೆಳೆ ಜಿಟಿಜಿಟಿ ಮಳೆಗೆ ಹಳದಿ ರೋಗ ನಂಜಾಣು ರೋಗಕ್ಕೆ ಹೆಸರು ಬೆಳೆ ಹಾಳಾಗಿದ್ದು. ಈಗ ಅಳಿದುಳಿದ ಹೆಸರು ಬೆಳೆಗೆ 10. ರಿಂದ 11. ಸಾವಿರ. ರೂಪಾಯಿಗೆ ಹೆಸರು ಕಾಳು ಬೆಂಬಲ ಬೆಲೆ ಘೋಷಣೆ ಮಾಡಿ ಗದಗ ಜಿಲ್ಲೆಯಲ್ಲಿ ಖರೀದಿ ಕೇಂದ್ರ ಪ್ರಾರಂಭಿಸುವಂತೆ. ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರು ಖಂಡಿಸಿ ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಇವರ ಮೂಲಕ ಸಿಎಂ ಸಿದ್ದರಾಮಯ್ಯ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಮನವಿ ಪತ್ರ ಸ್ವೀಕರಿಸಿದ ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಇವರು ನಿಮ್ಮ ರೈತ ಸಂಘದ ಮನವಿ ಪತ್ರವನ್ನು ಸಿಎಂ ಸಿದ್ದರಾಮಯ್ಯ ರವರಿಗೆ ಕಳಿಸಿ ಕೊಡುತ್ತೇವೆ ಎಂದು ತಿಳಿಸಿದರು. ಈ ವರ್ಷ ನಿರಂತರ ಮೋಡಕವಿದ ವಾತಾವರಣ ದಿಂದ ಹೆಸರು ಬೆಳೆಗಳು ಹಳದಿ ರೋಗ ಬುದಿ ರೋಗ ನಂಜಾಣು ರೋಗ ದಿಂದ ಹೆಸರು ಬೆಳೆ ಹಾಳಾಗಿದ್ದು. ಸರ್ಕಾರ ಹಾಳಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಮುಂದಿನ ದಿನಗಳಲ್ಲಿ ಬೆಳೆ ವಿಮೆ ಕೊಡಬೇಕೆಂದು ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರ ಇವರು ಮಾತನಾಡಿದರು.ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಕರ್ತರರಾದ ಶಶಿಧರ ಮಾದಿನೂರು. ಬಸನಗೌಡ್ರ ಪಾಟೀಲ್. ಮನ್ನಾಪೂರ. ಇತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.