ಪಿ.ಎಸ್.ಐ ಪರಶುರಾಮ್ ಪ್ರಕರಣ ಸಿಐಡಿಗೆ ಒಪ್ಪಿಸಲು – ವೀರೇಶ್ ಹಿರೇಮನಿ ಆಗ್ರಹ.
ಇಲಕಲ್ಲ ಆ.10

ಯಾದಗಿರಿ ಪಿಎಸ್ಐ ಪರಶುರಾಮ್ ಚಲವಾದಿ ಅವರ ಸಾವಿನ ತನಿಖೆಯನ್ನು ಸಿಐಡಿಗೆ ವಹಿಸುವಂತೆ ದಲಿತ ಯುವ ಮುಖಂಡ ವೀರೇಶ್ ಹಿರೇಮನಿ ಇಲಕಲ್ ಒತ್ತಾಯಿಸಿದರು. ಪಿಎಸ್ಐ ಪರಶುರಾಮ್ ಚಲವಾದಿ ಅವರ ಸಾವು ನಿಗೂಢವಾಗಿದ್ದು. ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಸುಪುತ್ರ ಪಂಪನಗೌಡ ಪಾಟೀಲ್ ಎಂಬುವರು ಹಣಕ್ಕೆ ಕಿರುಕುಳ ನೀಡಿ ಜಾತಿ ನಿಂದನೆ ಮಾಡಿ ಈ ನಿಗೂಢ ಸಾವಿಗೆ ಸ್ಥಳೀಯ ಶಾಸಕ ಮತ್ತು ಅವನ ಪುತ್ರ ಪಂಪನಗೌಡ ಕಾರಣ ಎಂದು ಪತ್ರಿಕಾ ಮಾಧ್ಯಮ ಮತ್ತು ಟಿವಿ ಮಾಧ್ಯಮಗಳಲ್ಲಿ ಕೇಳಿ ಬರುತ್ತಿದೆ. ಕೂಡಲೇ ತಲೆ ಮರೆಸಿ ಕೊಂಡ ಶಾಸಕ ಚೆನ್ನಾರಡ್ಡಿ ಹಾಗೂ ಅವರ ಮಗ ಪಂಪನಗೌಡರನ್ನು ಕೂಡಲೇ ಬಂಧಿಸಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡಬೇಕು.ಈ ಬಗ್ಗೆ ತನಿಖೆ ಕೂಲಂಕುಶವಾಗಿ ನಡೆಸಬೇಕು, ದೂರು ದಾಖಲಾದ ಶಾಸಕ ಚೆನ್ನಾರೆಡ್ಡಿ ಹಾಗೂ ಅವರ ಸುಪುತ್ರ ಪಂಪನಗೌಡರನ್ನು ಕಠಿಣವಾದ ಶಿಕ್ಷೆಗೆ ಒಳ ಪಡಿಸಬೇಕು. ಚೆನ್ನಾರೆಡ್ಡಿ ಅವರು ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸರ್ಕಾರ ಇವರನ್ನು ಬಂಧಿಸುವಲ್ಲಿ ವಿಳಂಬ ಮಾಡಿದರೆ ನಮ್ಮ ದಲಿತ ಪರ ಸಂಘಟನೆಗಳು ರಾಜ್ಯದಾದ್ಯಂತ ಹೋರಾಟ ಮಾಡ ಬೇಕಾಗುತ್ತದೆ ಎಂದು ದಲಿತ ಯುವ ಮುಖಂಡ ವೀರೇಶ್ ಹಿರೇಮನಿ ಇಲಕಲ್ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ ಇಲಕಲ್ಲ.