ಮಾನವ ಬಂಧುತ್ವ ವೇದಿಕೆ ವಿಜಯನಗರ ಜಿಲ್ಲೆಯ ವತಿಯಿಂದ ವೈದಿಕರ ನಾಗರ ಪಂಚಮಿ ವಿರೋಧಿಸಿ ಬಸವ ಪಂಚಮಿಯನ್ನು ಕಾರಿಗನೂರಿನ ಹೆಕ್ಕಿ ಪಿಕ್ಕಿ ನಗರದಲ್ಲಿ ಮಕ್ಕಳಿಗೆ ಹಾಲು ಹಂಚುವ ಮೂಲಕ ಆಚರಣೆ ಮಾಡಲಾಯಿತು.

ಹೊಸಪೇಟೆ ಆ.10

ವಿಜಯನಗರ ಜಿಲ್ಲೆಯ ಮಾನವ ಬಂದುತ್ವ ವೇದಿಕೆಯ  ಸಂಚಾಲಕರಾದ ಸೋಮಶೇಖರ  ಬಣ್ಣದ ಮನೆಯವರು ಮಾತನಾಡಿ ,ಸಹಸ್ರಾರು ವರ್ಷಗಳಿಂದ ಹಬ್ಬ ಹರಿದಿನಗಳನ್ನು ಸೃಷ್ಟಿಸಿದ ಮನುವಾದಿಗಳು ನಾಗರ ಪಂಚಮಿ ಎಂಬ ಮೌಡ್ಯತೆಯನ್ನು ಜನರ ಮೆದುಳಿನಲ್ಲಿ ತುಂಬಿದ್ದಾರೆ. ಇಡೀ ಭಾರತದೇಶವು ಹಸಿವು, ಬಡತನ, ಮಕ್ಕಳು ಅಪೌಷ್ಟಿಕತೆ ಕೊರತೆಯಿಂದ ನರಳುತ್ತಿದೆ. ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರ ಮಾನವ ಬಂಧುತ್ವ ವೇದಿಕೆಯು ಸಮಾಜದಲ್ಲಿ ದೇವರ ಹೆಸರಿನಲ್ಲಿ  ಶ್ರೀ ಸಾಮಾನ್ಯರನ್ನು ಹಾಗೂ ಬಡವರನ್ನು ಶೋಷಣೆ ಮಾಡುವುದರ ವಿರುದ್ಧ ಸತತವಾಗಿ ಹೋರಾಟ ಮಾಡುತ್ತಾ ಬಂದಿದೆ, ನಾಡಿನ ಜನರು ಕಲ್ಲಿನ ಹಾವಿಗೆ ಹಾಲು ಹಾಕುವ ಮೂಲಕ ಸಾವಿರಾರು ಲೀಟರ್ ಗಳಷ್ಟು ಹಾಲನ್ನು ವ್ಯರ್ಥ ಮಾಡುತ್ತಿದ್ದು. ಕಲ್ಲಿಗೆ ಹಾಕುವ ಹಾಲನ್ನು ಮಕ್ಕಳಿಗೆ ಕೊಡುವುದು ಸೂಕ್ತವೆಂದು ಹೇಳಿದರು.ಬಸವಣ್ಣನವರು ಹನ್ನೆರಡು ಶತಮಾನದಲ್ಲಿ ನಾಗರ ಪಂಚಮಿ ಬಗ್ಗೆ ಹೀಗೆ ಹೇಳಿದ್ದಾರೆ ಕಲ್ಲ ನಾಗರ ಕಂಡರೆ ಹಾಲ ಎರೆವರಯ್ಯ ದಿಟನಾಗರ ಕಂಡರೆ ಕೊಲ್ಲ ಎಂಬರಯ್ಯ, ಉಣ್ಣದ ಲಿಂಗಕ್ಕೆ ಬೋನವ ಮಾಡವರು ಉಣ್ಣುವ ಜಂಗಮ ಬಂದರೆ ನಡೆ ಎಂಬರು. ನಮ್ಮ ಕೂಡಲ ಸಂಗನ ಶರಣರ ಕಂಡು ಉದಾಸೀನ ಮಾಡಿದರೆ ಕಲ್ಲ ತಾಗಿ ದಮಿಟ್ಟೆಯಂತೆ ಇಪ್ಪರಯ್ಯ ಎಂದು ಹೇಳಿದ್ದಾರೆ. ಹಾಗಾಗಿ ನಾವು ನಾಗರ ಪಂಚಮಿ ಬದಲಾಗಿ ಬಸವ ಪಂಚಮಿ ಆಚರಿಸುವ ಮೂಲಕ ಬಸವಣ್ಣನವರ ತತ್ವ ಆದರ್ಶಗಳಂತೆ ಎಲ್ಲು ಜನರು ಹಾಗೂ ಮಕ್ಕಳು ಮೂಡ ನಂಬಿಕೆಯಿಂದ ಹೊರ ಬಂದು ಮೌಡ್ಯ ಆಚರಣೆಗಳನ್ನು ವಿರೋಧಿಸಿ ವೈಚಾರಿಕತೆಯ ಕಡೆ ಹೊಗೋಣ ಎಂದು ಹೇಳಿದರು. ಈ ಕಾರ್ಯಕ್ರಮ ದಲ್ಲಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾದ ಕಾರಿಗನೂರು ಯರ್ರಿಸ್ವಾಮಿ,ಬುಡ್ಗಜಂಗಮ ರಾಜ್ಯಧ್ಯಕ್ಷರಾದ ಸಣ್ಣಮಾರೆಪ್ಪ, ಅಂಬೇಡ್ಕರ್ ಸಂಘದ ಬಳ್ಳಾರಿ ಹನುಮಂತಪ್ಪ, ಚಲವಾದಿ ಮಹಾಸಭಾದ ಪ್ರಕಾಶ್,ಹಾಗೂ ಈಶ್ವರ್ ವಾಲ್ಮೀಕಿ ಸಮಾಜದ ಯುವ ಮುಖಂಡರಾದ ವೀರಭದ್ರ ನಾಯಕ,ಜೈ ಭೀಮ್ ವಿದ್ಯಾರ್ಥಿ ಯುವಜನ ಅಧ್ಯಕ್ಷರಾದ ಜೆ.ಶಿವಕುಮಾರ್ ಹಕ್ಕಿ ಪಿಕ್ಕಿ ಸಮುದಾಯದ ಹಿರಿಯರಾದ ಅಡಿವೆಪ್ಪ,ಮಾರೆಪ್ಪ,ಬಾಬು ಮುಂತಾದವರು ಇದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button