ಏನಾದರೂ ಆಗಿ ಮೊದಲು ಮಾನವರಾಗಿ – ರವೀಂದ್ರ ಕಲಬುರ್ಗಿ.
ಸೂಳೇಭಾವಿ ಆ.14

ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಶ್ರೀ ರಾಮಯ್ಯ ಕಲಾ ಹಾಗೂ ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ದಿ. 14 ರಂದು 2023-24 ರ ಅಂತಿಮ ವರ್ಷದ ಕಲಾ ಹಾಗೂ ವಾಣಿಜ್ಯ ಮಹಾ ವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಶುಭಕೋರುವ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿದ ಅವರು ವಿದ್ಯಾರ್ಥಿಗಳು ಭಾರತದ ಆಸ್ತಿ, ದೇಶ ಉನ್ನತ ಮಟ್ಟಕ್ಕೆ ಏರಲು ಶಿಕ್ಷಣ ದಿಂದ ಮಾತ್ರ ಸಾಧ್ಯ,ಶಿಕ್ಷರಿಗೆ ಗೌರವ ಕೊಡುವುದನ್ನು ಎಂದಿಗೂ ಮೆರೆಯಬೆಡಿ,ತಂದೆ-ತಾಯಿಯನ್ನ ಗೌರವಿಸಿ,ನಿಮ್ಮ ಭವಿಷ್ಯ ಉಜ್ವಲ ವಾಗಿಸಿಕೊಳ್ಳಿ ಏನಾದರೂ ಆಗಿ ಮೊದಲು ಮಾನವರಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ನುಡಿದರು. ಇದೇ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕಲಾ ವಿಭಾಗದಲ್ಲಿ ಸ್ವಾತಿ ಮಾಲಗತ್ತಿ ಹಾಗೂ ವಾಣಿಜ್ಯ ವಿಭಾಗ ಶಾವಕ್ಕ ಗೌಡರ ಇಬ್ಬರಿಗೂ ಗಣ್ಯ ಮಹನೀಯರು ಗೌರವಿಸಿ ಸತ್ಕರಿಸಿದರು.ನಮ್ಮ ಸಂಸ್ಥೆಯು ಅತ್ಯುತ್ತಮ ಉಪನ್ಯಾಸಕ ರಿಂದ ಕೂಡಿದೆ, ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಪರಿಯ ಹಿಂದೆ ಉಪನ್ಯಾಸಕರ ಕೈಚಳಕ ಅಡಗಿದೆ. ಬಿಳ್ಕೋಡುಗೆ ಅನಿವಾರ್ಯ, ಎಲ್ಲೆ ಇರಿ ಹೇಗೆ ಇರಿ ಕಲಿಸಿದ ಗುರುಗಳನ್ನ ಎಂದಿಗೂ ಮರೆಯಬೇಡಿ. ಇವತ್ತು ಶಿಕ್ಷಣ ಅವಶ್ಯವಿದೆ, ಕಲಿತ ಜ್ಞಾನ ಎಂದಿಗೂ ಕೆಡುವ ವಸ್ತುವಲ್ಲ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಅತಿ ಮುಖ್ಯ. ನಿಮ್ಮ ಅಂತಿಮ ಪರೀಕ್ಷೆ ಗೆ ಶುಭವಾಗಲಿ, ಹತ್ತು ಸಾರಿ ಓದುವುದಕ್ಕಿಂತ ಒಂದು ಸಾರಿ ಬರಿಯಬೇಕು ಅಂದಾಗ ನೆನಪಿನಲ್ಲಿ ಉಳಿಯುತ್ತದೆ. ರಾಮಯ್ಯ ಸ್ವಾಮಿ ಶಿಕ್ಷಣ ಸಂಸ್ಥೆಯಲ್ಲಿ ಕಲಿತವರು ಐ.ಎ.ಎಸ್ ಆಗಿ ಬಂದು ನಮ್ಮಕನಸು ನನಸಾಗಿಸಿ, ಸಂಸ್ಕಾರ ಸಂಬಂಧ ನೀವು ವಿದ್ಯೆ ಕಲಿಯಬೇಕು ಎಂದು ಕೃಷ್ಣಾ ರಾಮದುರ್ಗ ಅವರು ಅಧ್ಯಕ್ಷಿಯ ನುಡಿಗಳನ್ನಾಡಿದರು.ಸಂಸ್ಥೆಯ ಸದಸ್ಯ ರಮೇಶ ಬಂಡಿದಿನ್ನಿ, ಪ್ರಾಂಚಾರ್ಯರಾದ ಎಸ್.ಎಸ್.ಹೊಸಮನಿ, ಹಿರಿಯ ಉಪನ್ಯಾಸಕರಾದ ಮುತ್ತಣ್ಣ ನಿಡಗುಂದಿ, ಎಸ್.ಎಸ್.ಬುಗುಟಿ, ಕೆ.ಬಿ.ಗಂಜಿಹಾಳ, ಶ್ರೀನಿವಾಸ ವಡ್ಡರ,ಸಂತೋಷ ಆರ್, ಮಹಾಂತೇಶ ಯಲಬುರ್ತಿ, ವೀಣಾ ಕತ್ತಿ, ಪಾರ್ವತಿ ಹಾದಿಮನಿ, ಈರಮ್ಮ ಮಿಟ್ಟಲಕೋಡ, ಜಾಫರ, ಈರಣ್ಣ,ವಿದ್ಯಾರ್ಥಿ ಪ್ರತಿನಿಧಿ ಸ್ವಾತಿ ಮಾಲಗಿತ್ತಿ, ಕಾರ್ಯಕ್ರಮ ನಿರೂಪಣೆ ಶಂಕರ ರಾಮದುರ್ಗ, ಕವನಾ ಕಡೂರ, ಸುರೇಖಾ ಮುಸ್ಕಾನ ಸ್ವಾಗತ ಮತ್ತು ವಂದನಾರ್ಪಣೆ ಮಾಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.